Today Horoscope: ಇಂದು ಅಷ್ಟಮಿ ,ಕೃಷ್ಣನ ಆರಾಧನೆ ಮಾಡಿ

Sep 6, 2023, 9:57 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಬುಧವಾರ, ಸಪ್ತಮಿ-ಅಷ್ಟಮಿ ತಿಥಿ,  ಕೃತಿಕಾ-ರೋಹಿಣಿ ನಕ್ಷತ್ರ. ಇಂದು ಅಷ್ಟಮಿ ಜತೆ ಬುಧವಾರ ಬಂದಿದೆ ಇದು ಫಲವನ್ನು ತಂದು ಕೊಡುತ್ತದೆ. ಇಂದು ಜನ್ಮಾಷ್ಟಮಿ ಯಾಗಿರುವುದರಿಂದ ಉತ್ತಮ ಫಲ ಸಿಗುತ್ತದೆ. ಇಂದು ನಾಳೆ ಎರಡು ದಿನ ಜನ್ಮಾಷ್ಟಮಿ  ಆಚರಣೆ ಮಾಡಿ. ಮಂಗಳವಾರ ಷಷ್ಠಿ ಬಂದಿರುವುದರಿಂದ ಸುಬ್ರಹ್ಮಣ್ಯ ಸ್ವಾಮಿಗೆ ಇಂದು ರುದ್ರಾಭಿಷೇಕ ಮಾಡಿಸಿ. ಈ ದಿನ ಸುಬ್ರಹ್ಮಣ್ಯನ ಆರಾಧನೆಗೆ ಪ್ರಸಕ್ತ ಕಾಲವಾಗಿದೆ. ಈ ದಿನ ಮಿಥುನ ರಾಶಿಯವರಿಗೆ ಮಿತ್ರರ ಸಹಾಯ ಇರಲಿದೆ. ಪ್ರೀತಿ ವಿಚಾರದಲ್ಲಿ ಮನಸ್ತಾಪ ಬರಲಿದ್ದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯವಿರಲಿದೆ. ಹೀಗಾಗಿ ಉಮಾಮಹೇಶ್ವರನ ಪ್ರಾರ್ಥನೆ ಮತ್ತು ಮಂಗಳಗೌರಿ ವ್ರತ ಮಾಡಿ.