ಹೆಣ್ಣಿನ ಮೋಹಕ್ಕೆ ಬಿದ್ದ ಅಜಮಿಳ ಕೊನೆಗೆ ಅಡ್ಡದಾರಿ ಹಿಡಿದಿದ್ಹೇಗೆ..? ಕೃಷ್ಣ ಆತನನ್ನು ಪೊರೆದಿದ್ಹೇಗೆ?

Dec 28, 2020, 11:11 AM IST

ಒಂದು ದಿನ ಅಜಮಿಳನ ತಂದೆ ದೊಡ್ಡ ಯಜ್ಷವನ್ನು ಹಮ್ಮಿಕೊಂಡಿರುತ್ತಾರೆ. ಸಮಿದಗಳನ್ನು ತರಲು ಊರ ಹೊರಗಿನ ಕಾಡಿಗೆ ಹೋಗುತ್ತಾನೆ. ಅಲ್ಲಿ ಸಮಿದಗಳನ್ನು ಆರಿಸುವಾಗ ಪೊದೆಗಳ ಹಿಂದಿನಿಂದ ಸ್ತ್ರೀ ಪುರುಷರ ನಗುವಿನ ಧ್ವನಿ ಕೇಳಿಸುತ್ತದೆ. ಕುತೂಹಲದಿಂದ ಯಾರಿರಬಹುದು ಎಂದು ನೋಡಿದಾಗ ಅಲ್ಲೊಬ್ಬ ವೇಶ್ಯೆ ಕಾಣಿಸುತ್ತಾಳೆ. ಅವಳನ್ನು ನೋಡಿ ಅಸಹ್ಯ ಉಂಟಾಗಿ ಮನೆಗೆ ಬರುತ್ತಾನೆ. ಅಷ್ಟೊತ್ತಿಗಾಗಲೇ ಅವನ ಮನಸ್ಸು ಚಂಚಲವಾಗಿ ಆಕೆಯ ಮೇಲೆ ಮನಸ್ಸಾಗುತ್ತದೆ. ಹೆಂಡತಿ ಆಭರಣಗಳನ್ನು ಅಪಹರಿಸಿ, ವೇಶ್ಯೆಯ ಮನೆಗೆ ಹೋಗುತ್ತಾನೆ. ಬೆಟ್ಟದಷ್ಟಿದ್ದ ಆಸ್ತಿ ಕರ್ಪೂರದ ಹಾಗೆ ಕರಗುತ್ತದೆ. ಕೊನೆಗೆ ಅಜಮಿಳ ಅಡ್ಡ ದಾರಿ ಹಿಡಿಯುತ್ತಾನೆ.