ಪುನೀತ್‌ಗೆ ಆರೋಗ್ಯ ಸಮಸ್ಯೆಯಾಗಲಿದೆ, ಪೂಜೆ ಸಲ್ಲಿಸಿ ಎಂದು ಭವಿಷ್ಯ ನುಡಿದಿದ್ದರು ಅಜ್ಜಯ್ಯ!

Oct 31, 2021, 4:06 PM IST

ತುಮಕೂರು (ಅ. 31):  ಪುನೀತ್ ರಾಜ್‌ಕುಮಾರ್ ಗೆ (Puneeth Rajkumar) ಆರೋಗ್ಯ ಸಮಸ್ಯೆಯಾಗಲಿದೆ, ಪೂಜೆ ಸಲ್ಲಿಸಿ ಎಂದು  ತಿಪಟೂರು ತಾಲೂಕಿನ ಕುರುಬರಹಳ್ಳಿ ಅಜ್ಜಯ್ಯ ಭವಿಷ್ಯ ನುಡಿದಿದ್ದರು.

ರಾಯರ ಸನ್ನಿಧಿಗೆ ಭೇಟಿ ನೀಡಿದ್ದ ಪುನೀತ್, ಅಂದು ನಡೆದಿತ್ತು ಪವಾಡ! 

ಮೊದಲ ವರ್ಷ ರೆಡ್ ಮೂನ್ ದಿನ ಗದ್ದುಗೆಯಲ್ಲಿ ಉಳಿದು ಪುನೀತ್ ಪೂಜೆ ಸಲ್ಲಿಸಿದ್ದರು. ಬಳಿಕ ಅಜ್ಜಯ್ಯ‌ನ ದಂಡ ಮನೆಯಲ್ಲಿಟ್ಟು ಪೂಜಿಸಿ, ಅಜ್ಜಯ್ಯನ ಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿದ್ದರು. ಪುನೀತ್ ಆರೋಗ್ಯ ಚೇತರಿಕೆಯಾಗಿತ್ತು.  ಪ್ರತಿವರ್ಷ ಪೂಜೆ ಸಲ್ಲಿಸುವಂತೆ ಪುನೀತ್‌ಗೆ ತಿಳಿಸಿದ್ದರು.  ಕೆಲಸದ ಒತ್ತಡದಿಂದ ಪೂಜೆ ಸಲ್ಲಿಸಲು ಮರೆತು ಹೋದ್ರಾ ಪುನೀತ್? ಮತ್ತೇ ಆ ಪೂಜೆ ಮಾಡಿಸಿದ್ರೆ ಉಳಿಯುತ್ತಿದ್ರೇನೋ ಎಂದು ಶ್ರೀಗಳು, ಬೇಸರ ವ್ಯಕ್ತಪಡಿಸಿದ್ದಾರೆ.