‘ಕರೆಯದಿದ್ರೂ ಹೋಗಿ ಪಾಕ್ ಪ್ರಧಾನಿ ತಬ್ಬಿಕೊಂಡು, ಬಿರಿಯಾನಿ ತಿಂದಿದ್ದ್ಯಾರು?

Apr 19, 2019, 5:55 PM IST

ಬಾಗಲಕೋಟೆಗೆ ಚುನಾವಣಾ ಪ್ರಚಾರಕ್ಕೆ ಬಂದು ’ಬಾಲಕೋಟ್’ನ್ನು ಕೆದಕಿದ ಪ್ರಧಾನಿ ನರೇಂದ್ರ ಮೋದಿಗೆ ಮೈತ್ರಿಕೂಟದ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಒಂದು ಕಡೆ ಸಿಎಂ ಕುಮಾರಸ್ವಾಮಿ ಮೋದಿಗೆ ತಿರುಗೇಟು ನೀಡಿದ್ದರೆ, ಇನ್ನೊಂದು ಕಡೆ ಬಳ್ಳಾರಿಯಲ್ಲಿ ಸಿದ್ದರಾಮಯ್ಯ, ಕರೆಯದೇ ಇದ್ರೂ ಪಾಕಿಸ್ತಾನಕ್ಕೆ ಹೋಗಿ ನವಾಜ್ ಶರೀಫ್‌ನ್ನು ತಬ್ಬಿಕೊಂಡು ಬಿರಿಯಾನಿ ತಿಂದವರ್ಯಾರು ಎಂದು ಪ್ರಶ್ನಿಸಿದ್ದಾರೆ.