ಮಾಜಿ ಪ್ರಧಾನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ; ಹೆಲಿಕಾಪ್ಟರ್ ತಪಾಸಣೆ

Apr 19, 2019, 8:28 PM IST

ಚುನಾವಣಾಧಿಕಾರಿಗಳು ಮಾಜಿ ಪ್ರಧಾನಮಂತ್ರಿ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತಪಾಸಣೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ದೇವೇಗೌಡರು ರಾಯಚೂರಿಗೆ ತೆರಳುತ್ತಿದ್ದು, ಕೊಪ್ಪಳದ ಬಸಾಪೂರದ ಏರ್ಪೋರ್ಟಿನಲ್ಲಿ ತಾಂತ್ರಿಕ ಕಾರಣಕ್ಕೆ ನಿಲುಗಡೆ ಇತ್ತು. ಈ ವೇಳೆ ಅಧಿಕಾರಿಗಳು ವಿಮಾನ ಹಾಗೂ ಅದರಲ್ಲಿದ್ದ ಬ್ಯಾಗ್ ಗಳನ್ನು ತಪಾಸಣೆ ನಡೆಸಿದ್ದಾರೆ. ದೇವೇಗೌಡ ಹಾಗೂ ವಿಮಾನ ಸಿಬ್ಬಂದಿ ತಪಾಸಣೆಗೆ ಅಧಿಕಾರಿಗಳಿಗೆ ಸಹಕರಿಸಿದರು.