ಬಡತನ ಮಧ್ಯೆ ಮಕ್ಕಳ ಆನ್ಲೈನ್ ಶಿಕ್ಷಣದ ಚಿಂತೆ: ಸಹಾಯ ಹಸ್ತ ಬಯಸಿತ್ತಿರೋ ಪಾಲಕರು

Aug 8, 2020, 7:33 PM IST

ಬಾಗಲಕೋಟೆ, (ಆ.08): ಮನೆಯಲ್ಲಿ ಕಾದು ಕುಳಿತುಕೊಂಡಿರೋ ತಂದೆ. ಮಕ್ಕಳ ಓದಿಗಾಗಿ ಪರಿತಪಿಸುತ್ತಿರುವ ತಾಯಿ. ಆನ್‌ಲೈನ್ ವ್ಯವಸ್ಥೆ ಇಲ್ಲದೇ ಅಕ್ಕ-ಪಕ್ಕದ ಮನೆಯ ವಿದ್ಯಾರ್ಥಿಗಳ ಪುಸ್ತಕ ಪಡೆದು ಎಸ್‌ಎಸ್‌ಎಲ್‌ಸಿ ಓದುತ್ತಿರುವ ಮಕ್ಕಳು.

ತಾಳಿ ಬಂತು ತಾಳಿ..: ಮಕ್ಕಳ ಶಿಕ್ಷಣಕ್ಕಾಗಿ ಮಾರಿದ್ದ ತಾಳಿ ಕೊನೆಗೂ ತಾಯಿ ಕೊರಳಿಗೆ

ಇಂತಹ ಪರಿಸ್ಥಿತಿ ಎದುರಾಗಿದ್ದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪ್ಪ ಮರಭಾವಿ ಕುಟುಂಬದವರದ್ದಾಗಿದೆ. ಬಡತನದಲ್ಲಿ ಮಗಳ ಆನ್‌ಲೈನ್ ಓದಿಗೆ ಮೊಬೈಲ್ ಇಲ್ಲ. ಲ್ಯಾಪ್‌ಟಾಪ್ ಇಲ್ಲ. ಟಿವಿಯಂತೂ ಮೊದಲೇ ಇಲ್ಲ.  ಈ ಹಿನ್ನಲೆಯಲ್ಲಿ ಈ ಕುಟುಂಬ ಮಕ್ಕಳ ಓದಿಗಾಗಿ ಸರ್ಕಾರದಿಂದ ಸಹಾಯ ಹಸ್ತಚಾಚಿದೆ.