Panchanga: ಇಂದು ಶ್ರವಣ ನಕ್ಷತ್ರ, ಶ್ರೀನಿವಾಸನ ಸನ್ನಿಧಿಗೆ ಹೋಗಿ ತುಳಸಿ ಅರ್ಚನೆ ಮಾಡಿ...

May 12, 2023, 9:20 AM IST

ಇಂದು ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಕ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಶ್ರವಣ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಈ ದಿನ  ಸಪ್ತಮಿ ತಿಥಿ, ಶ್ರವಣ ನಕ್ಷತ್ರ  ಮತ್ತು ಶುಕ್ರವಾರವಾಗಿರುವುದರಿಂದ ಬಹಳ ಉತ್ಕೃಷ್ಟವಾದ ದಿನವಾಗಿದೆ. ತುಂಬಾ ಪ್ರಶಸ್ತವಾದ ದಿನವಾಗಿದ್ದು, ಇಂದಿನ ನಕ್ಷತ್ರ ಮತ್ತು ತಿಥಿ ತುಂಬಾ ಒಳ್ಳೆಯದಾಗಿದೆ . ಶ್ರವಣ ನಕ್ಷತ್ರ ವಿಶಿಷ್ಟವಾದ ನಕ್ಷತ್ರ. ಶ್ರೀನಿವಾಸನ ಸನ್ನಿಧಿಗೆ ಹೋಗಿ ತುಳಸಿ ಅರ್ಚನೆ ಮಾಡಿಸಿ.   ಹಾಗೇ ಬಿಲ್ವಪತ್ರೆಯನ್ನು  ಶ್ರೀನಿವಾಸನಿಗೆ ಅರ್ಪಿಸುವುದರಿಂದ ಒಳ್ಲೆಯದಾಗುತ್ತದೆ ಎಂದು  ಶಾಸ್ತ್ರಿಗಳು ತಿಳಿಸಿದ್ದಾರೆ. ಇನ್ನು ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ?  ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..