ಅವಳ ಕೊಲೆಗೆ ಕಾರಣ ರಾತ್ರಿ ಊಟ..! ಅವನ್ಯಾಕೆ ಹಾಗೆ ಮಾಡಿದ್ದ ಅನ್ನೋದೆ ನಿಗೂಢ..!

Jun 2, 2024, 5:07 PM IST

ಅದೊಂದು ಪುಟ್ಟ ಕುಟುಂಬ. ಗಂಡ ಹೆಂಡತಿ ಮತ್ತು 8 ವರ್ಷದ ಮಗ. ಗಂಡ(Husband) ಕೂಲಿ ಮಾಡ್ತಿದ್ರೆ ಹೆಂಡತಿ ಮನೆಗೆಲಸ ಮಾಡಿ ಮಗನನ್ನೂ ನೋಡಿಕೊಂಡಿದ್ದಳು. ಮನೆಯಲ್ಲಿ ಬಡತನವಿದ್ದರೂ ನೆಮ್ಮದಿಯಾಗಿ ಜೀವನ ಮಾಡ್ತಿದ್ದ ಕುಟುಂಬವದು. ಆದ್ರೆ ಆವತ್ತು ಅಧೇನಾಯ್ತೋ ಏನೋ. ಆ ಮನೆಯಲ್ಲಿ ರಕ್ತ ಕೋಡಿಯಂತೆ ಹರದಿತ್ತು. ಹೆಂಡತಿಯ(Wife) ಕತ್ತು ಕತ್ತರಿಸಿ ಕೊಲ್ಲಲ್ಲಾಗಿತ್ತು. ಅಷ್ಟಕ್ಕೂ ಆಕೆಯನ್ನ ಕೊಂದಿದ್ಯಾರು ಗೊತ್ತಾ..? ತಾಳಿ ಕಟ್ಟಿದ ಗಂಡನೇ. ಇನ್ನೂ ಹೆಂಡತಿಯ ಕತ್ತು ಕತ್ತರಿಸಿ ಆ ಕಿರಾತಕ ರಾತ್ರಿಯಿಡೀ ಹೆಂಡತಿಯ ಚರ್ಮ ಸುಳಿಯುತ್ತಾ ಕೂತಿದ್ದ. ಇವರ ಮೇಲೆ ಅವರು ಆರೋಪ ಮಾಡ್ತಿದ್ದಾರೆ. ಆದ್ರೆ ಇಲ್ಲಿ ನಿಜಕ್ಕೂ ಅನಾಥವಾಗಿರೋದು ಪುಷ್ಪಾ ಮತ್ತು ಶಿವರಾಮನ ಮಗ. ಈಗ ಆತ ದಿಕ್ಕಿಲ್ಲದಂತನ್ನಾಗಿದ್ದಾನೆ. ಇಷ್ಟು ಅಮಾನುಷವಾಗಿ ಹೆಂಡತಿಯನ್ನೇ ಕೊಂದಿದ್ದಾದನೆ(Murder) ಅಂದ್ರೆ ಅವನು ಎಂಥವನು ಅನ್ನೋದನ್ನ ಊಹೇ ಮಾಡಿಕೊರ್ಳಳಿ. ಇನ್ನೂ ಪೊಲೀಸರು ಆ ಕೂಡಲೇ ಶಿವರಾಮ್ನನ್ನ ಅರೆಸ್ಟ್ ಮಾಡಿ. ಯಾಕಪ್ಪಾ ಕೊಂದೆ ಅಂದಾಗ. ಈ ಕಟುಕನ ಬಾಯಿಂದ ಒಂದೇ ಒಂದು ಪದ ಕೂಡ ಆಡಿರಲಿಲ್ಲ. ಆದ್ರೆ ಆ ಭೀಕರ ಹತ್ಯೆಯ ಹಿಂದಿತ್ತು ಅಂತೆ ಕಂತೆ ಕಹಾನಿ. 10 ವರ್ಷದ ದಾಂಪತ್ಯ ಜೀವನ ಅದು. ಲವ್ ಮ್ಯಾರೇಜ್ ಬೇರೆ.. ಆದ್ರೆ ಪ್ರೀತಿಸಿದವಳನ್ನೇ ಆತ ಕೊಂದು ಮುಗಿಸಿದ್ದ. ಇನ್ನೂ ಯಾಕೆ ಕೊಂದೆ ಅಂದ್ರೆ ಆತ ಹೆಳಿದ್ದು ಆಕೆ ಊಟ ಕೊಡಲಿಲ್ಲ ಅಂತ. ಆದ್ರೆ ಯಾವಾಗ ಪುಷ್ಪಾ ಸತ್ತಳು ಅನ್ನೋದು ಗೊತ್ತಾಯ್ತೋ ಗಂಡನ ಕಡೆಯವರು.. ಹೆಂಡತಿ ಕಡೆಯವರು ಎಲ್ಲರೂ ಅಲ್ಲಿ ಬಂದು ಸೇರಿದ್ರು.

ಇದನ್ನೂ ವೀಕ್ಷಿಸಿ:  Lok Sabha elections 2024: ಬಿಜೆಪಿಗೆ ಎಷ್ಟು ಸ್ಥಾನ..INDIAಗೆ ಎಷ್ಟು ಸ್ಥಾನ..? ಮತಕಟ್ಟೆ ಲೆಕ್ಕಾಚಾರ..!