ರಾಯಚೂರು: ಪತ್ನಿ, ನಾದಿನಿ, ಅತ್ತೆಯನ್ನ ಕೊಂದ ಅಳಿಯ, ಕಾರಣ?

Sep 29, 2021, 1:36 PM IST

ರಾಯಚೂರು(ಸೆ.29): ಕೌಟುಂಬಿಕ ಕಲಹಕ್ಕೆ ಪತ್ನಿ, ನಾದಿನಿ, ಅತ್ತೆಯನ್ನ ಅಳಿಯನೇ ಹತ್ಯೆ ಮಾಡಿದ ಘಟನೆ ನಗರದ ಹೊರವಲಯದ ಯರಮರಸ್‌ ಕ್ಯಾಂಪ್‌ ಬಳಿ ಇಂದು(ಬುಧವಾರ) ನಡೆದಿದೆ. ಕಟ್ಟಿಗೆಯಿಂದ ಹೊಡೆದು ಮೂವರನ್ನ ಅಳಿಯ ಕೊಂದಿದ್ದಾನೆ ಎಂದು ತಿಳಿದು ಬಂದಿದೆ. ಅತ್ತೆ ಸಂತೋಷಿ(45), ಪತ್ನಿ ವೈಷ್ಣವಿ(25) ಹಾಗೂ ನಾದಿನಿ ಅರುತಿ(16) ಎಂಬುವರೇ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಸಾಯಿ ಎಂಬಾತನೇ ಮೂವರನ್ನ ಕೊಂದ ಅರೋಪಿಯಾಗಿದ್ದಾನೆ. ಕಳೆದ ಆರು ತಿಂಗಳ ಹಿಂದಷ್ಟೇ ವೈಷ್ಣವಿ ಜತೆ ಸಾಯಿ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಮದುವೆ ಬಳಿಕ ಸಾಯಿ- ವೈಷ್ಣವಿ ಮಧ್ಯೆ ಬಿರುಕು ಬಿಟ್ಟಿತ್ತು ಎನ್ನಲಾಗುತ್ತಿದೆ. 

ಒಂದೇ ಕುಟುಂಬದ ಐವರ ಆತ್ಮಹತ್ಯೆ ಕೇಸ್: ಮೆಡಿಕಲ್‌ ರಿಪೋರ್ಟ್‌ನಿಂದ ಕೇಸ್‌ಗೆ ಟ್ವಿಸ್ಟ್!