ಊರಿಗೆ ಯಜಮಾನ ಆದ್ರೂ ಅವನಿಗೆ ಸ್ಕೆಚ್ ರೆಡಿ ಮಾಡಿದ್ರು! ಕಂಡವರ ಉಸಾಬರಿಗೆ ಹೋಗಿದ್ದೆ ತಪ್ಪಾಯ್ತಾ?

Sep 25, 2024, 12:37 PM IST

ಹುಕ್ಕೇರಿ: ಆತ ಆ ಊರಿಗೆ ಯಜಮಾನಂತಿದ್ದರು. ಪರೋಪಕಾರಿ ಕಾರ್ಯದ ಮೂಲಕವೇ ತನ್ನೂರಷ್ಟೇ ಅಲ್ಲ ನೆರೆಯ ಗ್ರಾಮಗಳ ಜನರ ಮನಸ್ಸು ಗೆದ್ದಿದ್ದ. ಸಹಾಯ, ಸಹಕಾರ ಮನೋಭಾವನೆ ಮೂಲಕವೇ ಗೌರವ ಸಂಪಾದಿಸಿದ್ದ ವ್ಯಕ್ತಿತ್ವ ಅವನದ್ದು. ರಾಜಿ ಪಂಚಾಯ್ತಿಯಾಗಲಿ. ಎಂಥದ್ದೇ ಕಷ್ಟವಾಗಲಿ ಅವನೇ ಬೇಕಿತ್ತು. ಇಂಥವನು ಆವತ್ತು ಆ್ಯಕ್ಸಿಡೆಂಟ್​​​ನಲ್ಲಿ ಮೃತಪಟ್ಟಿದ್ದ. ಪಂಚಾಯ್ತಿ ಮುಗಿಸಿ ತನ್ನ ಸ್ನೇಹಿತರ ಜೊತೆ ಮನೆಕಡೆ ಹೋಗುವಾಗ್ಲೇ ಅಪಘಾತವಾಗಿ ಕೊನೆಯುಸಿರು ಎಳೆದುಬಿಟ್ಟಿದ್ದ.

ಆದ್ರೆ ಇದೇ ಕೇಸ್​​ನ ತನಿಖೆ ನಡೆಸಿದ ಪೊಲೀಸರು ಅದು ಆ್ಯಕ್ಸಿಡೇಂಟ್​​ ಅಲ್ಲ ಬದಲಿಗೆ ಕೊಲೆ ಅನ್ನೋದನ್ನ ಪತ್ತೆ ಹಚ್ಚಿದ್ರು. ಅಷ್ಟೇ ಅಲ್ಲ ಅವನ ಹೆಣಹಾಕಿದವರ ಹೆಡೆಮುರಿ ಕಟ್ಟಿದ್ರು. ಅಷ್ಟಕ್ಕೂ ಊರಿಗೇ ಯಜಮಾನದಂತಿದ್ದವನನ್ನ ಕೊಂದವರ್ಯಾರು..? ಅಂತಹ ತಪ್ಪು ಆತ ಮಾಡಿದ್ದಾದ್ರೂ ಏನು? ಒಬ್ಬ ಅಮಾಯಕನೊಬ್ಬನ ಕೊಲೆ ಮತ್ತು ಆ ಕೊಲೆಯ ರೋಚಕ ತನಿಖೆಯೇ ಇಲ್ಲಿದೆ ನೋಡಿ