ಕನ್ನಡ ಚಿತ್ರರಂಗಕ್ಕೂ ಇದೆ ಎಂ.ಎಂ.ಕೀರವಾಣಿ ಕೊಡುಗೆ: ಸಂಗೀತ ಮಾಂತ್ರಿಕನ ಬಗ್ಗೆ ಇಂಟ್ರೆಸ್ಟಿಂಗ್‌ ವಿಚಾರಗಳು!

ಕನ್ನಡ ಚಿತ್ರರಂಗಕ್ಕೂ ಇದೆ ಎಂ.ಎಂ.ಕೀರವಾಣಿ ಕೊಡುಗೆ: ಸಂಗೀತ ಮಾಂತ್ರಿಕನ ಬಗ್ಗೆ ಇಂಟ್ರೆಸ್ಟಿಂಗ್‌ ವಿಚಾರಗಳು!

Published : Mar 16, 2023, 09:59 PM IST

ಕೀರವಾಣಿ ತೆಲುಗಿನ ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡ ಸಿನಿಮಾಗಳಿಗೂ ಮ್ಯೂಸಿಕ್ ಮಾಡಿದ್ದಾರೆ. ಕನ್ನಡದಲ್ಲಿ ಕೀರವಾಣಿ ಮೊದಲು ಮ್ಯೂಸಿಕ್ ಮಾಡಿದ್ದು ಅರ್ಜುನ್ ಸರ್ಜಾ, ಶ್ರುತಿ, ನಟಿಸಿದ್ದ ‘ಅಳಿಮಯ್ಯ’ ಚಿತ್ರಕ್ಕೆ.

ನಿರ್ದೇಶಕ ಎಸ್.ಎಸ್.ರಾಜಮೌಳಿ ಸಿನಿಮಾ ಮಾಂತ್ರಿಕ ಆದ್ರೆ ಈಗ ಸಂಗೀತ ಲೋಕದ ಮಾಂತ್ರಿಕಾ ಎಂ.ಎಂ.ಕೀರವಾಣಿ  ಆಗಿದ್ದಾರೆ. ಕೀರವಾಣಿ ಹೆಸರು ಈಗ ವರ್ಲ್ಡ್ ಸಿನಿಮಾ ಭೂಪಟದಲ್ಲಿ ಅಚ್ಚೊತ್ತಿದೆ. ಅದಕ್ಕೆ ಕಾರಣ ಆಗಿದ್ದು, ಕೀರವಾಣಿಯ ಸುಮಧುರ ವಾಣಿ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು. ಈ ಹಾಡಿಗೆ ಆಸ್ಕರ್ ಬಂದಿದ್ದೇ ಬಂದಿದ್ದು, ದಕ್ಷಿಣ ಭಾರತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ವರ್ಲ್ಡ್ ಫೇಮಸ್ ಆಗೋದ್ರು. ಜಗದಗಲ ಸುದ್ದಿಯಲ್ಲಿರೋ ಎಂ.ಎಂ ಕೀರವಾಣಿ ಕನ್ನಡ ಚಿತ್ರರಂಗದ ಜೊತೆಗೂ ನಂಟು ಹೊಂದಿದ್ದಾರೆ. 

ಕೀರವಾಣಿ ತೆಲುಗಿನ ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡ ಸಿನಿಮಾಗಳಿಗೂ ಮ್ಯೂಸಿಕ್ ಮಾಡಿದ್ದಾರೆ. ಕನ್ನಡದಲ್ಲಿ ಕೀರವಾಣಿ ಮೊದಲು ಮ್ಯೂಸಿಕ್ ಮಾಡಿದ್ದು ಅರ್ಜುನ್ ಸರ್ಜಾ, ಶ್ರುತಿ, ನಟಿಸಿದ್ದ ‘ಅಳಿಮಯ್ಯ’ ಚಿತ್ರಕ್ಕೆ. ಆ ನಂತರ ಸ್ವಾತಿ, ಭೈರವ, ಕರ್ನಾಟಕ ಸುಪುತ್ರ, ಅಪ್ಪಾಜಿ, ದೀಪಾವಳಿ, ಸುಂದರಕಾಂಡ, ಅಮ್ಮ, ಜಮೀನ್ದಾರು, ಸಿನಿಮಾಗಳಿಗೆ ಟ್ಯೂನ್ ಹಾಕಿದ್ರು. ತೆಲುಗಿನಿಂದ ಕನ್ನಡಕ್ಕೆ ರಿಮೇಕ್ ಆದ ಮರ್ಯಾದೆ ರಾಮಣ್ಣ, ವೀರ ಮದಕರಿ ಹಾಡುಗಳಿಗೂ ಕೀರವಾಣಿ ಟ್ಯೂನ್ ಹಾಕಿದ್ದಾರೆ. ಎಂ ಎಂ ಕೀರವಾಣಿ ಕನ್ನಡಕ್ಕೂ ಮರೆಯಲಾಗದ ಹಾಡು ಕೊಟ್ಟಿದ್ದಾರೆ. 

ಅಂತಹ ಹಾಡಿನಲ್ಲಿ ಡಾ ವಿಷ್ಣುವರ್ಧನ್ ನಟನೆಯ ಅಪ್ಪಾಜಿ ಸಿನಿಮಾದ ಏನೆ ಕನ್ನಡತಿ ಹಾಡು ಇದೆ. ಎಸ್. ಬಿ ಬಾಲಸುಬ್ರಹ್ಮಣ್ಯಂ ಈ ಹಾಡು ಹಾಡಿದ್ರು. ಅಷ್ಟೆ ಅಲ್ಲ ವಿಷ್ಣುವರ್ಧನ್ರ 'ಕರ್ನಾಟಕ ಸುಪುತ್ರ' ಚಿತ್ರಕ್ಕೂ ಕೀರವಾಣಿ ಮ್ಯೂಸಿಕ್ ಮಾಡಿದ್ರು. ವಿಶೇಷ ಅಂದ್ರೆ ಈ ಸಿನಿಮಾದ ಒಂದು ಹಾಡನ್ನು ಡಾ. ರಾಜ್‌ಕುಮಾರ್‌ರಿಂದ ಹಾಡಿಸಿದ್ರು. ಕೀರವಾಣಿ ಟ್ಯಾಲೆಂಟ್ ಬರೀ ಮ್ಯೂಸಕ್ ಹೆಣೆಯೋದ್ರಲ್ಲಿ ಮಾತ್ರ ಇಲ್ಲ. ಗೀತ ರಚನೆ, ಗಾಯನದಲ್ಲೂ ಚತುರ. ಹೀಗಾಗಿ ಕನ್ನಡದ ನಾಧಬ್ರಹ್ಮ ಹಂಸಲೇಖ ಅವರು ಕಲ್ಲರಳಿ ಹೂವಾಗಿ ಚಿತ್ರದ ದಯವಿಲ್ಲದ ಧರ್ಮ ಆವುದಯ್ಯ ಹಾಡನ್ನ ಕೀರವಾಣಿ ಅವರಿಂದ ಹಾಡಿಸಿದ್ರು. ಹೀಗೆ ಕನ್ನಡ ಚಿತ್ರರಂಗಕ್ಕೂ ಕೀರವಾಣಿ ಮ್ಯೂಸಿಕ್ ಗೀಚಿದ್ದು, ಈಗ ಆರ್‌ಆರ್‌ಆರ್‌ನಿಂದ ಆಸ್ಕರ್ ಪಡೆದಿದ್ದಾರೆ. ಇವರ ಈ ಸಾಧನೆಯ ಶಿಕರಕ್ಕೆ ಇಡೀ ಭಾರತೀಯ ಚಿತ್ರರಂಗ ಸೆಲ್ಯೂಟ್ ಹೊಡೆಯುತ್ತಿದೆ.

03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
Read more