ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ತಲೈವಾ ರಜನಿಕಾಂತ್: ಆಧ್ಯಾತ್ಮದಲ್ಲಿ ಸೂಪರ್ ಸ್ಟಾರ್‌ಗಿದೆ ಸಿಕ್ಕಾಪಟ್ಟೆ ಒಲವು!

Jan 4, 2024, 1:24 PM IST

ಜನವರಿ 22ಕ್ಕೆ ಅಯೋಧ್ಯೆಯಲ್ಲಿ ರಾಮಲಲ್ಲ ಪ್ರಾಣ ಪ್ರತಿಷ್ಠಾಪನೆ ಆಗ್ತಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ಗಣ್ಯಾತಿಗಣ್ಯರಿಗೆ ಆಹ್ವಾಹ ಹೋಗಿದೆ. ಈಗ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ತಲೈವಾ ರಜನೀಕಾಂತ್ ಕಲರವ ಕೂಡ ಇರುತ್ತೆ. ರಾಮಲಲ್ಲ ಉದ್ಘಾಟನೆಗೆ ಸೂಪರ್ ಸ್ಟಾರ್ ರಜನೀಕಾಂತ್ಗೆ ಆಹ್ವಾನ ಹೋಗಿದೆ. ಅಯೋಧ್ಯೆಗೆ ಬರಲು ತಲೈವಾಗೆ ಆಹ್ವಾನ ಕೊಟ್ಟಿದ್ಯಾರು.? ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ಸೂಪರ್ ಸ್ಟಾರ್ ತಲೈವಾ ಹೋಗೋದು ಕನ್ಫರ್ಮ್. ಬಿಜೆಪಿ ನಾಯಕ ರಾ. ಅರ್ಜುನಮೂರ್ತಿ ರಜನೀಕಾಂತ್ಗೆ ಆಹ್ವಾನ ಕೊಟ್ಟಿದ್ದಾರೆ. ರಜನಿಗೆ ಆಹ್ವಾನಿಸಿರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ. 

ರಜನೀಕಾಂತ್ರನ್ನ ಶ್ರೀರಾಮ ಮಂದಿರ ಉದ್ಘಾಟನೆ ಕರೆಯಲು ಮುಖ್ಯ ಕಾರಣ ರಜನೀಕಾಂತ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅನ್ನೋದು. ಇದಷ್ಟೆ ಅಲ್ಲ ರಜನಿಗೆ ಆಧ್ಯಾತ್ಮದಲ್ಲೂ ಸಿಕ್ಕಾಪಟ್ಟೆ ಒಲವಿದೆ. ಆಗಾಗ ಹಿಮಾಲಯಕ್ಕೂ ಹೋಗಿ ಧ್ಯಾನಕ್ಕೆ ಜಾರುತ್ತಿದ್ರು ರಜನೀಕಾಂಯ್.. ಹೀಗಾಗಿ ರಜನಿಗೆ ಶ್ರೀರಾಮ ಮಂದಿರ ಉದ್ಘಾಟನೆ ಆಹ್ವಾನ ಕೊಡೋಲು ಮತ್ತೊಂದು ಕಾರಣ. ರಾಮಲಲ್ಲ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕನ್ನಡದ ಕಲಾವಿಧರಿಗೂ ಆಹ್ವಾನ ಹೋಗಿದೆ. ನಟ ರಿಷಬ್ ಶೆಟ್ಟಿ, ರಾಕಿಂಗ್ ಸ್ಟಾರ್ ಯಶ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿದಾರರಾಗ್ತಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ಅಮಿತಾ ಬಚ್ಚನ್, ಮೋಹನ್ಲಾಲ್, ಧನುಷ್ರನ್ನೂ ಕರೆಯಲಾಗಿದೆ. ಹೀಗಾಗಿ ಈ ಕಾರ್ಯಕ್ರದಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ಗಳು ಕಾಣಿಸಿಕೊಳ್ಳಲಿದ್ದಾರೆ.