ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯನ್ ಸಿನಿಮಾದಲ್ಲಿದೆಯಾ ದರ್ಶನ್ ಕೇಸ್?

Oct 12, 2024, 12:29 PM IST

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ  ವೆಟ್ಟೈಯನ್  ಥಿಯೇಟರ್ ಅಂಗಳದಲ್ಲಿ ಕಮಾಲ್ ಮಾಡ್ತಾ ಇದೆ. ಈ ಸಿನಿಮಾ ನೋಡಿದ ಮಂದಿ ಅರೇ ಇದು ದರ್ಶನ್ ಕೇಸ್ ಇದ್ದಂತೆ ಇದೆಯಲ್ಲಾ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಹಾಗಾದ್ರೆ ವೆಟ್ಟೈಯನ್ ಸಿನಿಮಾದಲ್ಲಿ ದರ್ಶನ್ ಕಥೆ ಇದೆಯಾ..? ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರೋ ವೆಟ್ಟೈಯನ್ ಸಿನಿಮಾ ಬಗ್ಗೆ ಇಂಥದ್ದೊಂದು ಟಾಕ್ ಹುಟ್ಟಿಕೊಂಡಿದೆ. ವೆಟ್ಟೈಯನ್ ಸಿನಿಮಾ ಗುರುವಾರ ವರ್ಲ್ಡ್​​ವೈಡ್ ರಿಲೀಸ್ ಆಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾದಲ್ಲಿ ರಜನಿಕಾಂತ್-ಅಮಿತಾಭ್ ಜುಗಲ್​ಬಂದಿಯಂತೂ ಫ್ಯಾನ್ಸ್​​ಗೆ ಸಖತ್ ಇಷ್ಟ ಆಗ್ತಾ ಇದೆ. 

ವೆಟ್ಟೈಯನ್ ಮೂವಿ ಮೊದಲ ದಿನವೇ ಬಾಕ್ಸ್ ಆಫೀಸ್​​ನಲ್ಲಿ 70 ಕೋಟಿ ಗಳಿಸಿದ್ದು, ಕಮಾಲ್ ಮಾಡ್ತಾ ಇದೆ. ಈ ನಡುವೆ ಸಿನಿಮಾ ನೋಡಿದ ಕನ್ನಡಿಗರು ಅರೇ ಇದ್ರಲ್ಲಿ ದರ್ಶನ್ ಕೇಸ್​​ ನೆನಪಿಸುವಂಥಾ ದೃಶ್ಯಗಳಿವೆಲ್ಲಾ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ವೆಟ್ಟೈಯನ್ ಸಿನಿಮಾದಲ್ಲಿ ಎಸ್‌ಪಿ ಅಥಿಯಾನ್ IPS ಆಗಿ ರಜನಿಕಾಂತ್ ಅಬ್ಬರಿಸಿದ್ದಾರೆ. ಖ್ಯಾತ ಉದ್ಯಮಿ ನಟರಾಜ್ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ರಜನಿ & ರಾಣಾ ನಡುವೆ ಟಗ್ ಆಫ್ ವಾರ್ ನಡೆಯುತ್ತೆ. ಹಣ, ಅಧಿಕಾರ, ಪೊಲಿಟಿಕಲ್ ಪವರ್ ಇರುವವರು ವ್ಯವಸ್ಥೆಯನ್ನ ತಮಗೆ ಬೇಕಾದಂತೆ ಹೇಗೆ ಬಳಸಿಕೊಳ್ತಾರೆ, ಅಮಾಯಕರನ್ನ ಸಿಲುಕಿಸಿ ತಾವು ಅಪರಾಧ ಪ್ರಕರಣಗಳಿಂದ ತಪ್ಪಿಸಿಕೊಳ್ಳುತ್ತಾರೆ ಅನ್ನೋದನ್ನ ಚಿತ್ರದಲ್ಲಿ ತೋರಿಸಲಾಗಿದೆ. 

ಪ್ರಬಲ ವ್ಯಕ್ತಿಗಳನ್ನ ಬಂಧಿಸುವುದು ಎಷ್ಟು ಕಷ್ಟ? ಅವರು ತಪ್ಪಿಸಿಕೊಳ್ಳಲು ಹೇಗೆಲ್ಲಾ ಪ್ರಯತ್ನಿಸ್ತಾರೆ ಅನ್ನೋದನ್ನ ಮಾರ್ಮಿಕವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ. ಇದನ್ನ ನೋಡ್ತಾ ಇದ್ರೆ, ದರ್ಶನ್ ರನ್ನ ಬಂಧಿಸಿದ ಎಸಿಪಿ ಚಂದನ್ ಪಾಡು ನೆನಪಾಗುತ್ತೆ. ಎಲ್ಲಾ ಸಾಕ್ಷಗಳನ್ನ ಸಂಗ್ರಹ ಮಾಡಿಕೊಂಡು, ಪಕ್ಕಾ ಚಕ್ರವ್ಯೂಹ ರಚಿಸಿ ಮೈಸೂರಿನಲ್ಲಿ ದರ್ಶನ್​ನ ಬಂಧಿಸಿದ್ರು ಎಸಿಪಿ ಚಂದನ್. ಅದೇ ರೀತಿ ಈ ಸಿನಿಮಾದಲ್ಲಿ ರಜನಿ, ರಾಣಾನ ಹೆಡೆಮುರಿ ಕಟ್ತಾರೆ. ಇದನ್ನ ನೋಡಿದವರು ಇದು ಪಕ್ಕಾ ದರ್ಶನ್ ಕೇಸ್​​ನಂತೆಯೇ ಇದೆಯಲ್ಲ ಅಂತ ಕಂಪೇರ್ ಮಾಡ್ತಾ ಇದ್ದಾರೆ. ಅಲ್ಲಿಗೆ ಸಿನಿಮಾ ರಜನಿಕಾಂತ್​ದಾದ್ರೂ ಸದ್ದು  ಮಾತ್ರ ದರ್ಶನ್ ಮಾಡ್ತಿರೋದು ಸುಳ್ಳಲ್ಲ.