ಕರ್ನಾಟಕ ಬ್ಯುಸಿನೆಸ್ ಅವಾರ್ಡ್‌ ಗೆದ್ದ ಮನೋಹರ್ ಮಸ್ಕಿ!

Jan 19, 2021, 5:21 PM IST

ಬೆಂಗಳೂರು(ಜ.19): ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂತಹುದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದ್ದು, ಮೂವತ್ತು ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ. ಕೊರೋನಾ ವೇಳೆ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದೇ ರಾಜ್ಯದ ಉದ್ಯಮಿಗಳು. ಈ ಉದ್ಯಮಿಗಳಿಂದ ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಹೀಗಿರುವಾಗ ಈ ದಿನದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ಗೆದ್ದಿರುವುದು ಮನೋಹರ್ ಮಸ್ಕಿ.