ಇಂದು ಉಪವಾಸ ಮಾಡಿ ನಾಳಿನ ನಾಗರ ಪಂಚಮಿಯ ಪೂಜೆ ಮಾಡಿ: ಡಾ. ಹರೀಶ್ ಕಶ್ಯಪ್

Aug 20, 2023, 2:21 PM IST

ನಾಗರ ಪಂಚಮಿಯ ಹಿಂದಿನ ದಿನವಾದ ಚತುರ್ಥಿಯಂದು ಹೊರಗಡೆ ಏನನ್ನು ತಿನ್ನಬಾರದು ಎಂದು ಆಧ್ಯಾತ್ಮಿಕ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದರು. ಇಂದು ಚತುರ್ಥಿ, ಆದ್ದರಿಂದ ಮನೆಯಲ್ಲಿ ಇದ್ದು ನಾಳಿನ ನಾಗರ ಪೂಜೆಗೆ ಮನೆ ಹಾಗೂ ಮನಸ್ಸನ್ನು ಸಿದ್ಧಗೊಳಿಸಬೇಕು. ಪಂಚಮಿಯಂತೆ ಚತುರ್ಥಿಗೂ ಕೂಡ ಮಹತ್ವವಿದೆ ಎಂದು ಅವರು ತಿಳಿಸಿದರು. ನಾಡಿ ಶುದ್ಧಿಗೆ ನಾಗನ ಅನುಗ್ರಹ ಬೇಕು ಎಂದು ಅವರು ಹೇಳಿದರು.