ಮಕ್ಕಳ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್!

Nov 21, 2018, 12:29 PM IST

ಬೆಂಗಳೂರು(ನ.21): ಬನಶಂಕರಿ ದೇವಾಲಯದಲ್ಲಿ ಮಕ್ಕಳನ್ನ ಎತ್ಯೊಯ್ದು ಚಿನ್ನ ಕದಿಯುತ್ತಿದ್ದ ಖತರ್ನಾಕ್​ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಮಾ ಅಲಿಯಾಸ್‌ ನಾಗಮ್ಮಳನ್ನು ಬಂಧಿಸುವಲ್ಲಿ ಕುಮಾರಸ್ವಾಮಿ ಲೇಔಟ್​ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದು ತಿಂಗಳಿಂದ ಬನಶಂಕರಿ ದೇವಸ್ಥಾನದಲ್ಲಿ‌‌ ಕಳ್ಳತನ ಮಾಡುತ್ತಿದ್ದ ಉಮಾಳನ್ನು, ಇಬ್ಬರು ಗರ್ಭಿಣಿ ಪೇದೆ ಸೇರಿ 6 ಮಹಿಳಾ ಪೇದೆಗಳ ಸಹಾಯದಿಂದ ಬಂಧಿಸಲಾಗಿದೆ. ದೇವಸ್ಥಾನದ‌ ಸಿಸಿಟಿವಿಯಲ್ಲಿ ಉಮಾಳ ಕಳ್ಳತನ ಸೆರೆಯಾಗಿದ್ದು, ಮಕ್ಕಳನ್ನು ಹೊತ್ತೊಯ್ದು ಚಿನ್ನ ಕದಿಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.