ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇಂದು (ಅ.31) ಮುಕ್ತಾಯಗೊಳ್ಳುತ್ತಿದೆ. ಸೆಪ್ಟೆಂಬರ್ 22ರಿಂದ ಈ ಸಮೀಕ್ಷೆ ಆರಂಭಗೊಂಡಿದೆ. ಭಾರಿ ಪರ ವಿರೋಧಗಳ ನಡುವೆ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ಬಹುತೇಕ ಪೂರ್ಣಗೊಳಿಸಿದೆ. ಸಮೀಕ್ಷೆ ವೇಳೆ ಕೆಲವರು ಮಾಹಿತಿ ನೀಡಲು ನಿರಾಕರಿಸಿ ರಾಜ್ಯದ್ಯಂತ ಭಾರಿ ಸುದ್ದಿಯಾಗಿತ್ತು. ಇದೀಗ ಸಮೀಕ್ಷೆಯಲ್ಲಿ ಭಾಗಿಯಾಗದವರಿಗೆ ಸರ್ಕಾರ ಮತ್ತೊಂದು ಅವಕಾಶ ನೀಡಿದೆ.

10:36 PM (IST) Oct 31
Gaur Dies at Bannerghatta Biological Park Due to Suspected Anesthesia Overdose During Transfer ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ, ಹೈದರಾಬಾದ್ಗೆ ಸ್ಥಳಾಂತರಿಸಲು ಸಿದ್ಧವಾಗಿದ್ದ ಕಾಡೆಮ್ಮೆಯೊಂದು ಸೆರೆಹಿಡಿಯುವ ವೇಳೆ ಮೃತಪಟ್ಟಿದೆ.
09:54 PM (IST) Oct 31
ಮಂಗಳೂರಿನ ಯುವ ಪ್ರತಿಭೆ ರೂಬನ್ ಜೇಸನ್ ಮಚಾದೊ, ಈಜುತ್ತಾ ಕೊಳಲು ನುಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ 700 ಮೀಟರ್ಗೂ ಹೆಚ್ಚು ದೂರ ಈಜಿ ಸಾಧನೆ ಮಾಡಿದ್ದಾರೆ.
09:40 PM (IST) Oct 31
Poojas Father Blames In-Laws Seeks Justice for Daughter & Grandson ಗೃಹಿಣಿ ಪೂಜಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮದುವೆಯಾದ ದಿನದಿಂದಲೂ ಪತಿಯ ಮನೆಯವರು ನಿರಂತರ ಚಿತ್ರಹಿಂಸೆ ನೀಡಿದ್ದೇ ಸಾವಿಗೆ ಕಾರಣ ಎಂದು ಪೂಜಾಳ ತಂದೆ ಈಶ್ವರಪ್ಪ ಆರೋಪಿಸಿದ್ದಾರೆ.
09:01 PM (IST) Oct 31
08:21 PM (IST) Oct 31
ಬೆಂಗಳೂರಿನ ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ನವೆಂಬರ್ 1ರಿಂದ ಸಿಹಿ ಸುದ್ದಿ. ಬಿಎಮ್ಆರ್ಸಿಎಲ್ ಐದನೇ ರೈಲನ್ನು ಸೇರಿಸುತ್ತಿದ್ದು, ಇದರಿಂದ ರೈಲುಗಳ ಸಂಚಾರದ ಅಂತರ 20 ನಿಮಿಷದಿಂದ 15 ನಿಮಿಷಕ್ಕೆ ಇಳಿಕೆಯಾಗಲಿದೆ. ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡಲಿದೆ.
07:55 PM (IST) Oct 31
07:24 PM (IST) Oct 31
07:22 PM (IST) Oct 31
ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ನ 14,000 ಉದ್ಯೋಗಿಗಳ ವಜಾಗೊಳಿಸುವಿಕೆಗೆ ಕೃತಕ ಬುದ್ಧಿಮತ್ತೆ (AI) ಅಥವಾ ಆರ್ಥಿಕ ಒತ್ತಡ ಕಾರಣವಲ್ಲ ಎಂದು ಸಿಇಒ ಆಂಡಿ ಜಾಸ್ಸಿ ಸ್ಪಷ್ಟಪಡಿಸಿದ್ದಾರೆ. ಕಂಪನಿಯ ಚುರುಕುತನ ಮತ್ತು ನವೋದ್ಯಮ ಸಂಸ್ಕೃತಿಯನ್ನು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
07:10 PM (IST) Oct 31
Karnataka Invites Tenders for ₹135 Cr Mangaluru Tech Park in PPP Model ಮಂಗಳೂರಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 135 ಕೋಟಿ ರೂ. ವೆಚ್ಚದ ಹೊಸ ಟೆಕ್ ಪಾರ್ಕ್ ನಿರ್ಮಾಣವಾಗಲಿದೆ. ಈ ಯೋಜನೆಯು 11,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.
06:43 PM (IST) Oct 31
ರಾಜ್ಯ ಸರ್ಕಾರವು ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಮಾಲೀಕರಿಗೆ ದಂಡ ಪಾವತಿಸಿ ಸಕ್ರಮಗೊಳಿಸಲು ಅವಕಾಶ ನೀಡಿದೆ. ಶೇಕಡಾ 15ರ ಮಿತಿಯೊಳಗಿನ ಉಲ್ಲಂಘನೆಗಳಿಗೆ ಮಾತ್ರ ಅನ್ವಯವಾಗುವ ಈ ಯೋಜನೆಯಲ್ಲಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಂಡ ನಿಗದಿಪಡಿಸಲಾಗಿದೆ.
06:37 PM (IST) Oct 31
ಮುಟ್ಟಿನ ಕುರಿತಾದ ಸಾಮಾನ್ಯ ಸಮಸ್ಯೆಗಳಿಗೆ ಸ್ತ್ರೀರೋಗ ತಜ್ಞೆ ಡಾ. ಶಿಲ್ಪಾ ಅವರು ಪರಿಹಾರ ಸೂಚಿಸಿದ್ದಾರೆ. ಮುಟ್ಟಿನ ಅವಧಿ, ರಕ್ತಸ್ರಾವದ ದಿನಗಳು, ಅಧಿಕ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೊಟ್ಟೆನೋವಿನಂತಹ ಐದು ಪ್ರಮುಖ ವಿಷಯಗಳ ಬಗ್ಗೆ ಅವರು ಸಲಹೆ ನೀಡಿದ್ದಾರೆ.
05:58 PM (IST) Oct 31
ಕಿಡ್ನ್ಯಾಪ್ ಆದ ತೇಜಸ್ ಚಿಕ್ಕಮಗಳೂರಿನಲ್ಲಿರುವ ಸುಳಿವು ಸಿಕ್ಕ ಖುಷಿಯಲ್ಲಿ ಕರ್ಣ ಮತ್ತು ನಿತ್ಯಾ ಹೊರಡಲು ಸಿದ್ಧರಾಗುತ್ತಾರೆ. ಆದರೆ, ಈ ಈ ವಿಷಯವನ್ನು ನಿತ್ಯಾ ಖಳನಾಯಕ ರಮೇಶ್ ಮುಂದೆ ಬಾಯಿಬಿಟ್ಟಿದ್ದಾಳೆ. ಇನ್ನು ಏನಿದ್ರೂ ತೇಜಸ್ ಸಿಗೋದು ಡೌಟೇ. ಮುಂದೇನು?
05:58 PM (IST) Oct 31
ಮಲೆಯಾಳಂ ಖ್ಯಾತ ನಟ ಮಮ್ಮುಟ್ಟಿ ಆರೋಗ್ಯ ಸುಧಾರಿಸಿ ತಾಯ್ನಾಡಿಗೆ ವಾಪಾಸಾದ ಹಿನ್ನೆಲೆ ಅವರ ಚೇತರಿಕೆಗೆ ಹರಕೆ ಕಟ್ಟಿಕೊಂಡಿದ್ದ ಆರ್ಎಸ್ಎಸ್ ಮುಖಂ ಜಯಕುಮಾರ್ ಅವರು ಕಣ್ಣೂರಿನ ರಾಜರಾಜೇಶ್ವರ ದೇಗುಲಕ್ಕೆ ಚಿನ್ನದ ಕಳಸವನ್ನು ಕೊಡುಗೆಯಾಗಿ ನೀಡಿದರು.
05:47 PM (IST) Oct 31
ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ನಾಲ್ಕು ವಿಕೆಟ್ಗಳ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ (68) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತದ ಬ್ಯಾಟಿಂಗ್ ವಿಫಲವಾಯಿತು. ಸಾಧಾರಣ ಗುರಿ ಬೆನ್ನಟ್ಟಿದ ಆಸೀಸ್ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
05:22 PM (IST) Oct 31
'ನಾನು ಧೂಮಪಾನ ಮಾಡುವುದಿಲ್ಲ, ಕುಡಿಯುವುದಿಲ್ಲ, ಅಥವಾ ಮಾಂಸ ತಿನ್ನುವುದಿಲ್ಲ. ಇದು ಧಾರ್ಮಿಕ ಕಾರಣಗಳಿಗಾಗಿ ಅಲ್ಲ, ಕೇವಲ ವೈಯಕ್ತಿಕ ಆದ್ಯತೆ. ನನ್ನ ತಂದೆ ಸಸ್ಯಾಹಾರಿ, ನನ್ನ ತಾಯಿ ಅಲ್ಲ, ಮತ್ತು ಜಯಾ ಮಾಂಸ ತಿನ್ನುತ್ತಾರೆ ಆದರೆ ನಾನು ತಿನ್ನುವುದಿಲ್ಲ' ಎಂದಿದ್ದಾರೆ ಅಮಿತಾಭ್ ಬಚ್ಚನ್.
04:45 PM (IST) Oct 31
ನವೆಂಬರ್ 21 ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿಯು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಡಿಕೆಶಿ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
04:41 PM (IST) Oct 31
2022ರ ವಿಶ್ವಕಪ್ನಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಜೆಮಿಮಾ ರೋಡ್ರಿಗ್ಸ್ ಮಾನಸಿಕ ಸವಾಲುಗಳನ್ನು ಮೆಟ್ಟಿನಿಂತು ಮತ್ತೆ ಮಿಂಚಿದ್ದಾರೆ. ಬಿದ್ದು ಎದ್ದ ಅವರ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
04:37 PM (IST) Oct 31
Juvana Abdulla inspirational story: ನಾಲ್ಕು ಮಕ್ಕಳ ತಾಯಿಯಾದ 47 ವರ್ಷದ ಕೇರಳದ ಜುವಾನಾ ಅಬ್ದುಲ್ಲಾ ಮೊದಲ ಯತ್ನದಲ್ಲೇ ನೀಟ್ ಪರೀಕ್ಷೆ ಪಾಸು ಮಾಡಿದ್ದು, ವೈದ್ಯ ಪತಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಾದ ಮಕ್ಕಳಿಂದಲೇ ಸ್ಫೂರ್ತಿ ಪಡೆದಿರುವ ಅವರು ಡೆಂಟಲ್ ಡಾಕ್ಟರ್ ಆಗುವ ಹಾದಿಯಲ್ಲಿದ್ದಾರೆ.
04:04 PM (IST) Oct 31
03:55 PM (IST) Oct 31
03:46 PM (IST) Oct 31
02:07 PM (IST) Oct 31
ಬಿಗ್ಬಾಸ್ ಮನೆಯಲ್ಲಿ ಆಟವಾಡುವಾಗ ಸ್ಪರ್ಧಿ ಮಲ್ಲಮ್ಮ ಕುಸಿದು ಬಿದ್ದಿದ್ದಾರೆ ಎನ್ನಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮಲ್ಲಮ್ಮ ಅವರನ್ನು ಸ್ಟ್ರೆಚರ್ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
01:59 PM (IST) Oct 31
ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗಕ್ಕೆ ಹೊಸ ಅಲೆಯಂತೆ ಎಂಟ್ರಿ ಕೊಟ್ಟರು. ಆಗಲೇ ಇಂಡಸ್ಟ್ರಿಯಲ್ಲಿದ್ದ ಹಲವು ಹೀರೋಗಳಿಗೆ ತಮ್ಮ ನಟನೆಯಿಂದಲೇ ಭಯ ಹುಟ್ಟಿಸಿದ್ದರು. ಚಿರಂಜೀವಿಯಿಂದಾಗಿ ಸ್ವಲ್ಪ ಟೆನ್ಷನ್ ಆಗಿದ್ದ ಹೀರೋಗಳು ಯಾರು?
01:52 PM (IST) Oct 31
ಸಚಿವ ಸಂಪುಟ ಸಭೆಯಲ್ಲಿ ಕೆ.ಜೆ. ಜಾರ್ಜ್ ಜೊತೆಗಿನ ಗಲಾಟೆ ವರದಿಗಳನ್ನು ಸಚಿವ ಎಚ್.ಸಿ. ಮಹದೇವಪ್ಪ ನಿರಾಕರಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಬಗ್ಗೆ ಚರ್ಚೆಯಾಗಿದೆ ಎಂದ ಅವರು, ದಲಿತ ಸಿಎಂ ಹೋರಾಟ ನಿರಂತರವಾಗಿದ್ದು, ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧರಿಸಲಿದೆ.
01:38 PM (IST) Oct 31
01:37 PM (IST) Oct 31
ಅತೀ ಹೆಚ್ಚಿನ ಗಳಿಕೆಯ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಕಾಂತಾರ 1 ಕರ್ನಾಟಕದಲ್ಲೇ 250 ಕೋಟಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡವು ನವೆಂಬರ್ 1 ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಂತಾರ 1 ಚಿತ್ರದ ಟಿಕೆಟ್ ಬೆಲೆ ಕಡಿಮೆ ಮಾಡಿದೆ.
01:17 PM (IST) Oct 31
ಪಾಕ್ ಆಕ್ರಮಿತ ಕಾಶ್ಮೀರದ ಹತ್ತಿರದಲ್ಲಿರುವ ಸಿಂಧೂ ನದಿ ದಂಡೆಯಲ್ಲೇ ಉಪೇಂದ್ರ- ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾದ ಚಿತ್ರೀಕರಣ ಮಾಡಿದ್ದೇವೆ ಎಂದರು ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು.
01:15 PM (IST) Oct 31
ಬೆಂಗಳೂರಿನಲ್ಲಿ ರಸ್ತೆ ಬದಿ ಕಸ ಎಸೆಯುವವರ ವಿರುದ್ಧ BSWML 'ಮನೆ ಮುಂದೆ ಕಸ ಸುರಿಯುವ' ಅಭಿಯಾನ ಆರಂಭಿಸಿದೆ. ಈ ಕಠಿಣ ಕ್ರಮದ ಮೂಲಕ, ನಿಯಮ ಉಲ್ಲಂಘಿಸಿದ ಮನೆಗಳ ಮುಂದೆ ಕಸ ಸುರಿದು, ದಂಡ ವಸೂಲಿ ಮಾಡಲಾಗುತ್ತಿದೆ.
12:53 PM (IST) Oct 31
ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣದ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಸಿನಿಮಾ ಭಾರತೀಯ ಭಾಷೆಗಳಲ್ಲದೆ, ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಈ ಕುರಿತು ಭೂಮಿ ಶೆಟ್ಟಿಯವರ ಮಾತುಗಳು ಇಲ್ಲಿವೆ.
12:38 PM (IST) Oct 31
ಬಿಗ್ಬಾಸ್ 12 ಮನೆಯಲ್ಲಿ ನಡೆಯುತ್ತಿರುವ ಫೆಸ್ಟಿವಲ್ನಲ್ಲಿ, ಸೂರಜ್ ಜೊತೆ ಕಾವ್ಯಾ ಡಾನ್ಸ್ ಮಾಡಿದ ನಂತರ ಇದೀಗ ಗಿಲ್ಲಿ ನಟನ ಜೊತೆಗೂ ಕಾವ್ಯಾ ಹೆಜ್ಜೆ ಹಾಕಿದ್ದಾರೆ. ಈ ಹೊಸ ಜೋಡಿಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಸೂರಜ್-ರಾಶಿಕಾ ಲವ್ಸ್ಟೋರಿ ಬಗ್ಗೆ ವೀಕ್ಷಕರಿಂದ ಅಸಮಾಧಾನ ವ್ಯಕ್ತವಾಗಿದೆ.
12:31 PM (IST) Oct 31
ದರ್ಶನ್ ಮತ್ತು ಪವಿತ್ರಾ ಗೌಡ ಅವರಿಬ್ಬರೂ 2014 ರಿಂದಲೇ ಜೊತೆಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಕೂಡ, ದರ್ಶನ್, ಪವಿತ್ರಾ ಗೌಡ ಹಾಗೂ ಪವಿತ್ರಾ ಗೌಡ ಮಗಳು ಒಟ್ಟಿಗೇ ಇರುವ ಫೋಟೋಗಳು ವೈರಲ್ ಅಗಿತ್ತು. ಇದೀಗ, ಕೇಸ್ ತನಿಖೆ ಹಂತದಲ್ಲಿ ಇರುವಾಗ ಮತ್ತೊಮ್ಮೆ ಪವಿತ್ರಾ ಗೌಡ, ದರ್ಶನ್ ಫೋಟೋ ವೈರಲ್ ಆಗಿದೆ!
12:17 PM (IST) Oct 31
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವಿಷ ಸೇವಿಸಿದ್ದ ವಿವಾಹಿತ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಾವನ್ನಪ್ಪಿದ ಮಹಿಳೆಯನ್ನ ಪೂಜಾ ಎಂದು (30) ಎಂದು ಗುರುತಿಸಲಾಗಿದೆ.
12:16 PM (IST) Oct 31
ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳು ನ.3ಕ್ಕೆ ಕೋರ್ಟ್ಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಜಾಮೀನು ಪಡೆದಿರುವ ಆರೋಪಿಗಳು ಹಾಜರಾಗಬೇಕು, ಹಾಜರಾಗದಿದ್ದರೆ ಅರೆಸ್ಟ್ ಎಂದು ಕೋರ್ಟ್ ಎಚ್ಚರಿಸಿದೆ.
11:47 AM (IST) Oct 31
ಕನ್ನಡದಲ್ಲಿ ‘ಬ್ರ್ಯಾಟ್’ ನನಗೆ ಮೊದಲ ಸಿನಿಮಾ. ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದೇನೆ. ರಾಜ್ ತರುಣ್ ಅಭಿನಯದ ‘ಭಲೇ ಉನ್ನಾಡೆ’ ಎನ್ನುವ ಚಿತ್ರದಲ್ಲಿ ನಟಿಸಿದ್ದೇನೆ. ಆ ಸಿನಿಮಾ ಬಿಡುಗಡೆ ಆಗಿದೆ ಎಂದು ನಟಿ ಮನೀಶಾ ಕಂದಕೂರ್ ಸಂದರ್ಶನದಲ್ಲಿ ಹೇಳಿದರು.
11:21 AM (IST) Oct 31
ಸೋಲು, ಗೆಲುವು, ಥಿಯೇಟರ್ಗಳಲ್ಲಿ ಸಕ್ಸಸ್ಫುಲ್ ರನ್ನಿಂಗ್, ಹೌಸ್ಫುಲ್ ಬೋರ್ಡ್ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಿನಿಮಾ ಬಿಡುಗಡೆ ಆಗಿ ಒಂದೆರಡು ತಿಂಗಳಲ್ಲಿ ಆ ಚಿತ್ರಗಳನ್ನು ಪ್ರೇಕ್ಷಕನ ಅಂಗೈಗೆ ಕೊಡುತ್ತಿವೆ ಓಟಿಟಿ ವೇದಿಕೆಗಳು.
10:55 AM (IST) Oct 31
ಕೆಎಸ್ಆರ್ಪಿ, ಐಆರ್ಬಿ ಪೇದೆಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಎಸ್ಸೆಸ್ಸೆಲ್ಸಿಯಿಂದ ಪಿಯುಸಿಗೆ ಹೆಚ್ಚಳ ಸೇರಿ ಕೆಎಸ್ಆರ್ಪಿ ಮತ್ತು ಐಆರ್ಬಿ ವೃಂದ ಮತ್ತು ನೇಮಕಾತಿ ಕರಡು ನಿಯಮಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
10:29 AM (IST) Oct 31
ಬೆಂಕಿಯಲ್ಲಿ ಕಾಸಿದ ಚಾಕುವಿನಿಂದ ಗಲ್ಲಕ್ಕೆ ಬರೆ ಎಳೆದ ಘಟನೆ ಗುರುವಾರ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಯೋಧಮೂರ್ತಿ ಬೆಂಕಿ ಬರೆಗೆ ತುತ್ತಾದ ಮಗುವಾಗಿದೆ.
10:20 AM (IST) Oct 31
ಅಖಂಡ ಭಾರತದ ಒಗ್ಗೂಡುವಿಕೆಗೆ ಕಾರಣೀಭೂತರಾದ ಭಾರತದ ಸ್ವಾತಂತ್ರ್ಯ ಇತಿಹಾಸದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮ ಶತಾಬ್ಧಿಯ ನೆನಪಿಗಾಗಿ ಈ ಆಚರಣೆಯನ್ನು 2014ರಲ್ಲಿ ಭಾರತ ಸರ್ಕಾರ ಆರಂಭಿಸಿತ್ತು.
10:08 AM (IST) Oct 31
ಕಸ ಎಸೆದು ಲಾಕ್ ಆದ ದಂಪತಿ, ವಿಡಿಯೋ ತೋರಿಸಿ ಮನೆ ಮುಂದೆ ಕಸ ಸುರಿದ ಅಧಿಕಾರಿಗಳು, ಬೆಂಗಳೂರಿನಲ್ಲಿ ಜನರಿಗೆ ಕಸದ ಭಯ ಶುರುವಾಗಿದೆ. ರಸ್ತೆಗೆ ಕಸ ಎಸೆದರೆ, ನಿಮ್ಮ ಮನೆ ಮುಂದೆ ಲಾರಿ ಕಸ ಸುರಿಯುತ್ತಾರೆ. ಇಷ್ಟೇ ಅಲ್ಲ ಜೊತೆಗೆ ದಂಡ ಕೂಡ ಪಾವತಿಸಬೇಕು.
09:55 AM (IST) Oct 31
ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸುಭಾಷ್ ಚಂದ್ರ ಬೋಸ್ ಇಬ್ಬರೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು, ಅಪ್ರತಿಮ ದೇಶಭಕ್ತರು. ಇಬ್ಬರೂ ಸ್ವಾತಂತ್ರ್ಯವನ್ನು ಸಾಧಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸಿದರು.