Published : Oct 31, 2025, 06:56 AM ISTUpdated : Oct 31, 2025, 10:36 PM IST

ಅರವಳಿಕೆ ಓವರ್‌ಡೋಸ್‌, ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಕಾಡೆಮ್ಮೆ ಸಾವು!

ಸಾರಾಂಶ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇಂದು (ಅ.31) ಮುಕ್ತಾಯಗೊಳ್ಳುತ್ತಿದೆ. ಸೆಪ್ಟೆಂಬರ್ 22ರಿಂದ ಈ ಸಮೀಕ್ಷೆ ಆರಂಭಗೊಂಡಿದೆ. ಭಾರಿ ಪರ ವಿರೋಧಗಳ ನಡುವೆ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ಬಹುತೇಕ ಪೂರ್ಣಗೊಳಿಸಿದೆ. ಸಮೀಕ್ಷೆ ವೇಳೆ ಕೆಲವರು ಮಾಹಿತಿ ನೀಡಲು ನಿರಾಕರಿಸಿ ರಾಜ್ಯದ್ಯಂತ ಭಾರಿ ಸುದ್ದಿಯಾಗಿತ್ತು. ಇದೀಗ ಸಮೀಕ್ಷೆಯಲ್ಲಿ ಭಾಗಿಯಾಗದವರಿಗೆ ಸರ್ಕಾರ ಮತ್ತೊಂದು ಅವಕಾಶ ನೀಡಿದೆ.

Bannerghatta Zoo Death

10:36 PM (IST) Oct 31

ಅರವಳಿಕೆ ಓವರ್‌ಡೋಸ್‌, ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಕಾಡೆಮ್ಮೆ ಸಾವು!

Gaur Dies at Bannerghatta Biological Park Due to Suspected Anesthesia Overdose During Transfer ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ, ಹೈದರಾಬಾದ್‌ಗೆ ಸ್ಥಳಾಂತರಿಸಲು ಸಿದ್ಧವಾಗಿದ್ದ ಕಾಡೆಮ್ಮೆಯೊಂದು ಸೆರೆಹಿಡಿಯುವ ವೇಳೆ ಮೃತಪಟ್ಟಿದೆ.

Read Full Story

09:54 PM (IST) Oct 31

ಈಜುತ್ತಾ ಕೊಳಲು ನುಡಿಸಿ ಮಂಗಳೂರು ಯುವ ಪ್ರತಿಭೆಯಿಂದ ಅಚ್ಚರಿಯ ವಿಶ್ವದಾಖಲೆ!

ಮಂಗಳೂರಿನ ಯುವ ಪ್ರತಿಭೆ ರೂಬನ್ ಜೇಸನ್ ಮಚಾದೊ, ಈಜುತ್ತಾ ಕೊಳಲು ನುಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ  700 ಮೀಟರ್‌ಗೂ ಹೆಚ್ಚು ದೂರ ಈಜಿ ಸಾಧನೆ ಮಾಡಿದ್ದಾರೆ.

Read Full Story

09:40 PM (IST) Oct 31

ಆಸ್ತಿ ಚೆನ್ನಾಗಿದೆ, ಮಗಳು ಚೆನ್ನಾಗಿರ್ತಾಳೆ ಅಂತಾ ಮದ್ವೆ ಮಾಡಿಕೊಟ್ಟೆ, ಆದ್ರೆ ಹೀಗಾಗೋಯ್ತು!

Poojas Father Blames In-Laws Seeks Justice for Daughter & Grandson ಗೃಹಿಣಿ ಪೂಜಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮದುವೆಯಾದ ದಿನದಿಂದಲೂ ಪತಿಯ ಮನೆಯವರು ನಿರಂತರ ಚಿತ್ರಹಿಂಸೆ ನೀಡಿದ್ದೇ ಸಾವಿಗೆ ಕಾರಣ ಎಂದು ಪೂಜಾಳ ತಂದೆ ಈಶ್ವರಪ್ಪ ಆರೋಪಿಸಿದ್ದಾರೆ.

Read Full Story

09:01 PM (IST) Oct 31

ನವೆಂಬರ್ 2025ರಲ್ಲಿ ಸಾಲು ಸಾಲು ಬ್ಯಾಂಕ್ ರಜೆ, ಪಟ್ಟಿ ಬಿಡುಗಡೆ ಮಾಡಿದ ಆರ್‌ಬಿಐ, ವ್ಯವಹಾರ ಹೇಗೆ!

ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 2025 ಕ್ಕೆ ದೇಶಾದ್ಯಂತ 11 ದಿನಗಳ ಬ್ಯಾಂಕ್ ರಜೆಗಳನ್ನು ಘೋಷಿಸಿದೆ. ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ಸೇರಿದಂತೆ ಒಟ್ಟು 8 ದಿನಗಳ ರಜೆ ಇರಲಿದ್ದು, ಈ ಸಮಯದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.
Read Full Story

08:21 PM (IST) Oct 31

ಕನ್ನಡ ರಾಜ್ಯೋತ್ಸವದಂದು ಬಿಎಂಆರ್‌ಸಿಎಲ್‌ ಬಿಗ್ ಗಿಫ್ಟ್, ಹಳದಿ ಮಾರ್ಗ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ

ಬೆಂಗಳೂರಿನ ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ನವೆಂಬರ್ 1ರಿಂದ ಸಿಹಿ ಸುದ್ದಿ. ಬಿಎಮ್‌ಆರ್‌ಸಿಎಲ್ ಐದನೇ ರೈಲನ್ನು ಸೇರಿಸುತ್ತಿದ್ದು, ಇದರಿಂದ ರೈಲುಗಳ ಸಂಚಾರದ ಅಂತರ 20 ನಿಮಿಷದಿಂದ 15 ನಿಮಿಷಕ್ಕೆ ಇಳಿಕೆಯಾಗಲಿದೆ.    ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡಲಿದೆ.

Read Full Story

07:55 PM (IST) Oct 31

Brahmagantu - ಸುಕನ್ಯಾ ಕುತಂತ್ರಕ್ಕೆ ಬೆಂಕಿಯಲ್ಲಿ ದೀಪಾ-ಚಿರು! ಹರಿದ ಮಂಗಳಸೂತ್ರ- ಏನಿದು ಅಪಾಯ?

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಸುಕನ್ಯಾಳ ಸಂಚಿನಿಂದ ದೀಪಾ ಮತ್ತು ಚಿರು ಗ್ಯಾಸ್ ಬ್ಲಾಸ್ಟ್‌ನಲ್ಲಿ ಸಿಲುಕಿದ್ದಾರೆ. ಬೆಂಕಿಯ ನಡುವೆ ದೀಪಾಳ ಮಾಂಗಲ್ಯ ಸರ ಹರಿದುಹೋಗಿದ್ದು, ಚಿರು ಜೀವಕ್ಕೆ ಅಪಾಯವಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಈ ಘಟನೆ ಕಥೆಗೆ ಹೊಸ ತಿರುವು ನೀಡಿದೆ.
Read Full Story

07:24 PM (IST) Oct 31

'ಡೆವಿಲ್'​ ನಾಯಕಿ ರಚನಾ ರೈ ಕನಸಿನ ಹುಡುಗ ಹೀಗಿರ್ಬೇಕಂತೆ! ಇದ್ಯಾಕೋ ನಂಬಲು ಆಗ್ತಿಲ್ಲ ಎನ್ನೋದಾ ನೆಟ್ಟಿಗರು?

'ಡೆವಿಲ್' ಚಿತ್ರದ ನಾಯಕಿ ರಚನಾ ರೈ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮಗೆ ರೂಪ, ಆಸ್ತಿಗಿಂತ ಹೃದಯದಿಂದ ಒಳ್ಳೆಯವನಾಗಿರುವ, ಪ್ರಕೃತಿ ಪ್ರೇಮಿ ಹುಡುಗ ಬೇಕು ಎಂದು ತಮ್ಮ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಸಿನಿಮಾ ಪಯಣದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
Read Full Story

07:22 PM (IST) Oct 31

ಅಮೆಜಾನ್ ನಲ್ಲಿ 14 ಸಾವಿರ ಉದ್ಯೋಗಿಗಳ ವಜಾಕ್ಕೆ AI ಕಾರಣ ಅಲ್ಲ, ಸಿಇಒ ಆಂಡಿ ಜಾಸ್ಸಿ ಸ್ಪಷ್ಟನೆ!

ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಅಮೆಜಾನ್‌ನ 14,000 ಉದ್ಯೋಗಿಗಳ ವಜಾಗೊಳಿಸುವಿಕೆಗೆ ಕೃತಕ ಬುದ್ಧಿಮತ್ತೆ (AI) ಅಥವಾ ಆರ್ಥಿಕ ಒತ್ತಡ ಕಾರಣವಲ್ಲ ಎಂದು ಸಿಇಒ ಆಂಡಿ ಜಾಸ್ಸಿ ಸ್ಪಷ್ಟಪಡಿಸಿದ್ದಾರೆ. ಕಂಪನಿಯ ಚುರುಕುತನ ಮತ್ತು ನವೋದ್ಯಮ ಸಂಸ್ಕೃತಿಯನ್ನು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ  ಎಂದರು.

Read Full Story

07:10 PM (IST) Oct 31

135 ಕೋಟಿ ವೆಚ್ಚದಲ್ಲಿ ಮಂಗಳೂರು ಟೆಕ್‌ ಪಾರ್ಕ್‌ಗೆ ಟೆಂಡರ್‌ ಕರೆದ ಕರ್ನಾಟಕ ಸರ್ಕಾರ

Karnataka Invites Tenders for ₹135 Cr Mangaluru Tech Park in PPP Model ಮಂಗಳೂರಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 135 ಕೋಟಿ ರೂ. ವೆಚ್ಚದ ಹೊಸ ಟೆಕ್ ಪಾರ್ಕ್ ನಿರ್ಮಾಣವಾಗಲಿದೆ. ಈ ಯೋಜನೆಯು 11,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

Read Full Story

06:43 PM (IST) Oct 31

ನಿಯಮ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಕಂಡೀಷನ್ ಅಪ್ಲೈ

ರಾಜ್ಯ ಸರ್ಕಾರವು ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಮಾಲೀಕರಿಗೆ ದಂಡ ಪಾವತಿಸಿ ಸಕ್ರಮಗೊಳಿಸಲು ಅವಕಾಶ ನೀಡಿದೆ. ಶೇಕಡಾ 15ರ ಮಿತಿಯೊಳಗಿನ ಉಲ್ಲಂಘನೆಗಳಿಗೆ ಮಾತ್ರ ಅನ್ವಯವಾಗುವ ಈ ಯೋಜನೆಯಲ್ಲಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಂಡ ನಿಗದಿಪಡಿಸಲಾಗಿದೆ.

Read Full Story

06:37 PM (IST) Oct 31

ಮುಟ್ಟಿನ ಬಗೆಗಿನ ಈ 5 ಸಂದೇಹಗಳಿಗೆ ವೈದ್ಯೆಯಿಂದ ಸ್ಪಷ್ಟ ಉತ್ತರ - ಪ್ರತಿ ಹೆಣ್ಣೂ ಅರಿಯಲೇಬೇಕು!

ಮುಟ್ಟಿನ ಕುರಿತಾದ ಸಾಮಾನ್ಯ ಸಮಸ್ಯೆಗಳಿಗೆ ಸ್ತ್ರೀರೋಗ ತಜ್ಞೆ ಡಾ. ಶಿಲ್ಪಾ ಅವರು ಪರಿಹಾರ ಸೂಚಿಸಿದ್ದಾರೆ. ಮುಟ್ಟಿನ ಅವಧಿ, ರಕ್ತಸ್ರಾವದ ದಿನಗಳು, ಅಧಿಕ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೊಟ್ಟೆನೋವಿನಂತಹ ಐದು ಪ್ರಮುಖ ವಿಷಯಗಳ ಬಗ್ಗೆ ಅವರು ಸಲಹೆ ನೀಡಿದ್ದಾರೆ.

Read Full Story

05:58 PM (IST) Oct 31

Karna Serial - ನಿತ್ಯಾ ಹುಚ್ಚಾಟಕ್ಕೆ ತೇಜಸ್​ ಇನ್ನು ಕನಸು ಮಾತ್ರ? ಕರ್ಣ-ನಿಧಿ ಒಂದಾಗೋದು ಡೌಟೆ!

ಕಿಡ್ನ್ಯಾಪ್ ಆದ ತೇಜಸ್ ಚಿಕ್ಕಮಗಳೂರಿನಲ್ಲಿರುವ ಸುಳಿವು ಸಿಕ್ಕ ಖುಷಿಯಲ್ಲಿ ಕರ್ಣ ಮತ್ತು ನಿತ್ಯಾ ಹೊರಡಲು ಸಿದ್ಧರಾಗುತ್ತಾರೆ. ಆದರೆ, ಈ  ಈ ವಿಷಯವನ್ನು ನಿತ್ಯಾ  ಖಳನಾಯಕ ರಮೇಶ್ ಮುಂದೆ ಬಾಯಿಬಿಟ್ಟಿದ್ದಾಳೆ. ಇನ್ನು ಏನಿದ್ರೂ ತೇಜಸ್​ ಸಿಗೋದು ಡೌಟೇ. ಮುಂದೇನು?  

Read Full Story

05:58 PM (IST) Oct 31

ಗುಣಮುಖರಾದ ನಟ ಮುಮ್ಮುಟ್ಟಿ - ರಾಜರಾಜಶ್ವೇರನಿಗೆ ಚಿನ್ನದ ಕಳಶ ನೀಡಿ ಹರಕೆ ತೀರಿಸಿದ RSS ಮುಖಂಡ

ಮಲೆಯಾಳಂ ಖ್ಯಾತ ನಟ ಮಮ್ಮುಟ್ಟಿ ಆರೋಗ್ಯ ಸುಧಾರಿಸಿ ತಾಯ್ನಾಡಿಗೆ ವಾಪಾಸಾದ ಹಿನ್ನೆಲೆ ಅವರ ಚೇತರಿಕೆಗೆ ಹರಕೆ ಕಟ್ಟಿಕೊಂಡಿದ್ದ ಆರ್‌ಎಸ್‌ಎಸ್ ಮುಖಂ ಜಯಕುಮಾರ್ ಅವರು ಕಣ್ಣೂರಿನ ರಾಜರಾಜೇಶ್ವರ ದೇಗುಲಕ್ಕೆ ಚಿನ್ನದ ಕಳಸವನ್ನು ಕೊಡುಗೆಯಾಗಿ ನೀಡಿದರು.

Read Full Story

05:47 PM (IST) Oct 31

ಅಭಿಷೇಕ್ ಶರ್ಮಾ ಹೋರಾಟ ವ್ಯರ್ಥ - ಆಸೀಸ್‌ಗೆ ರೋಚಕ ಟಿ20 ಜಯ

ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ (68) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತದ ಬ್ಯಾಟಿಂಗ್ ವಿಫಲವಾಯಿತು. ಸಾಧಾರಣ ಗುರಿ ಬೆನ್ನಟ್ಟಿದ ಆಸೀಸ್ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

Read Full Story

05:22 PM (IST) Oct 31

ನಾನು ಪಂಜಾಬ್‌ನ ವಿಶೇಷ ಪಾನೀಯ ಕುಡಿಯುವುದನ್ನು ಬಿಟ್ಟಿದ್ದೇನೆ - ಅಮಿತಾಭ್ ಬಚ್ಚನ್ ಹೇಳಿಕೆ ವೈರಲ್!

'ನಾನು ಧೂಮಪಾನ ಮಾಡುವುದಿಲ್ಲ, ಕುಡಿಯುವುದಿಲ್ಲ, ಅಥವಾ ಮಾಂಸ ತಿನ್ನುವುದಿಲ್ಲ. ಇದು ಧಾರ್ಮಿಕ ಕಾರಣಗಳಿಗಾಗಿ ಅಲ್ಲ, ಕೇವಲ ವೈಯಕ್ತಿಕ ಆದ್ಯತೆ. ನನ್ನ ತಂದೆ ಸಸ್ಯಾಹಾರಿ, ನನ್ನ ತಾಯಿ ಅಲ್ಲ, ಮತ್ತು ಜಯಾ ಮಾಂಸ ತಿನ್ನುತ್ತಾರೆ ಆದರೆ ನಾನು ತಿನ್ನುವುದಿಲ್ಲ' ಎಂದಿದ್ದಾರೆ ಅಮಿತಾಭ್ ಬಚ್ಚನ್.

Read Full Story

04:45 PM (IST) Oct 31

ನವೆಂಬರ್ 21ರಂದು ಡಿಕೆಶಿ ಸಿಎಂ ಪದಗ್ರಹಣ, ಕೆಂಡಾಮಂಡಲವಾದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆ

ನವೆಂಬರ್ 21 ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿಯು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಡಿಕೆಶಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.  

Read Full Story

04:41 PM (IST) Oct 31

ಜೆಮಿಮಾ ರೋಡ್ರಿಗ್ಸ್ - ಈಕೆ ಕೇವಲ ಆಟಗಾರ್ತಿಯಲ್ಲ, ಅನೇಕರಿಗೆ ಸ್ಫೂರ್ತಿಯ ಚಿಲುಮೆ!

2022ರ ವಿಶ್ವಕಪ್‌ನಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಜೆಮಿಮಾ ರೋಡ್ರಿಗ್ಸ್ ಮಾನಸಿಕ ಸವಾಲುಗಳನ್ನು ಮೆಟ್ಟಿನಿಂತು ಮತ್ತೆ ಮಿಂಚಿದ್ದಾರೆ. ಬಿದ್ದು ಎದ್ದ ಅವರ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.

Read Full Story

04:37 PM (IST) Oct 31

ಮೊದಲ ಪ್ರಯತ್ನದಲ್ಲೇ NEET ಪಾಸಾದ 4 ಮಕ್ಕಳ ತಾಯಿ 47ರ ಹರೆಯದ ಮಹಿಳೆ

Juvana Abdulla inspirational story: ನಾಲ್ಕು ಮಕ್ಕಳ ತಾಯಿಯಾದ 47 ವರ್ಷದ ಕೇರಳದ ಜುವಾನಾ ಅಬ್ದುಲ್ಲಾ ಮೊದಲ ಯತ್ನದಲ್ಲೇ ನೀಟ್ ಪರೀಕ್ಷೆ ಪಾಸು ಮಾಡಿದ್ದು, ವೈದ್ಯ ಪತಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಾದ ಮಕ್ಕಳಿಂದಲೇ ಸ್ಫೂರ್ತಿ ಪಡೆದಿರುವ ಅವರು ಡೆಂಟಲ್ ಡಾಕ್ಟರ್ ಆಗುವ ಹಾದಿಯಲ್ಲಿದ್ದಾರೆ.

Read Full Story

04:04 PM (IST) Oct 31

Amruthadhaare - ಜೈದೇವ್​ ಹೆಣೆದಿರೋ ಬಲೆಗೆ ಸಿಕ್ಕಿಬೀಳ್ತಾಳಾ ಮಲ್ಲಿ? ಗೌತಮ್​ಗೆ ಸಿಕ್ಕಿತು ಅಪಾಯದ ಸೂಚನೆ!

ಆಸ್ತಿ ಮಾರಾಟ ಮಾಡಲು ಗೌತಮ್ ಮತ್ತು ಭೂಮಿಕಾ ಅವರ ಸಹಿ ಅಗತ್ಯವಿರುವುದರಿಂದ, ಜೈದೇವ್ ಅವರನ್ನು ಹುಡುಕಲು ರೌಡಿಗಳನ್ನು ಕಳುಹಿಸಿದ್ದಾನೆ. ಈ ವಿಷಯ ತಿಳಿದು ಮಲ್ಲಿ ಆಘಾತಕ್ಕೊಳಗಾಗಿದ್ದು, ಆನಂದ್ ಈ ಬಗ್ಗೆ ಗೌತಮ್‌ಗೆ ಎಚ್ಚರಿಕೆ ನೀಡಿದ್ದಾನೆ.
Read Full Story

03:55 PM (IST) Oct 31

ಇಪಿಎಫ್ಒ ಸೊಸೈಟಿಯಲ್ಲಿ ನೌಕರರ ದುಡ್ಡೇ ಮಾಯ, 70 ಕೋಟಿ ನಾಪತ್ತೆ! ಮಗನ ಮದುವೆಗೆ ಇಟ್ಟ ದುಡ್ಡು ಇಲ್ಲದೆ ಕಂಗಾಲಾದ ಅಪ್ಪ

ಬೆಂಗಳೂರಿನ ಇಪಿಎಫ್ಒ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂಪಾಯಿಗೂ ಹೆಚ್ಚು ಹಣ ನಾಪತ್ತೆಯಾಗಿದೆ. ಈ ಸಂಬಂಧ ಸೊಸೈಟಿಯ ಸಿಇಒ ಮತ್ತು ಅಕೌಂಟೆಂಟ್ ವಿರುದ್ಧ ದೂರು ದಾಖಲಾಗಿದ್ದು, ನೂರಾರು ನೌಕರರು ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡು ಆತಂಕಕ್ಕೊಳಗಾಗಿದ್ದಾರೆ.
Read Full Story

03:46 PM (IST) Oct 31

ಅಭಿಷೇಕ್ ಶರ್ಮಾ ಕೆಚ್ಚೆದೆಯ ಹೋರಾಟ; ಆಸೀಸ್‌ಗೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದ ಭಾರತ

ಜೋಶ್ ಹೇಜಲ್‌ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ಭಾರತದ ಅಗ್ರ ಕ್ರಮಾಂಕ ಕುಸಿದರೂ, ಅಭಿಷೇಕ್ ಶರ್ಮಾ ಅವರ ಕೆಚ್ಚೆದೆಯ ಅರ್ಧಶತಕ (68) ಮತ್ತು ಹರ್ಷಿತ್ ರಾಣಾ (35) ಅವರ ಬೆಂಬಲದಿಂದ ಟೀಂ ಇಂಡಿಯಾ 125 ರನ್ ಗಳಿಸಿ ಆಸ್ಟ್ರೇಲಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿತು.
Read Full Story

02:07 PM (IST) Oct 31

ಆಟದ ವೇಳೆ ಕುಸಿದು ಬಿದ್ದ Bigg Boss ಮಲ್ಲಮ್ಮ- ಆಸ್ಪತ್ರೆಗೆ ಶಿಫ್ಟ್​? ಏನಿದು ಶಾಕಿಂಗ್​ ವೈರಲ್ ವಿಡಿಯೋ?

ಬಿಗ್​ಬಾಸ್ ಮನೆಯಲ್ಲಿ ಆಟವಾಡುವಾಗ ಸ್ಪರ್ಧಿ ಮಲ್ಲಮ್ಮ ಕುಸಿದು ಬಿದ್ದಿದ್ದಾರೆ ಎನ್ನಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮಲ್ಲಮ್ಮ ಅವರನ್ನು ಸ್ಟ್ರೆಚರ್​ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

Read Full Story

01:59 PM (IST) Oct 31

ಚಿರಂಜೀವಿ ಅಬ್ಬರ ನೋಡಿ ಟೆನ್ಷನ್ ಆಗಿದ್ರಂತೆ ಆ ಸ್ಟಾರ್ ಹೀರೋಗಳು - ಹಿರಿಯ ನಟನ ಶಾಕಿಂಗ್ ಹೇಳಿಕೆ ವೈರಲ್!

ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗಕ್ಕೆ ಹೊಸ ಅಲೆಯಂತೆ ಎಂಟ್ರಿ ಕೊಟ್ಟರು. ಆಗಲೇ ಇಂಡಸ್ಟ್ರಿಯಲ್ಲಿದ್ದ ಹಲವು ಹೀರೋಗಳಿಗೆ ತಮ್ಮ ನಟನೆಯಿಂದಲೇ ಭಯ ಹುಟ್ಟಿಸಿದ್ದರು. ಚಿರಂಜೀವಿಯಿಂದಾಗಿ ಸ್ವಲ್ಪ ಟೆನ್ಷನ್ ಆಗಿದ್ದ ಹೀರೋಗಳು ಯಾರು?

 

Read Full Story

01:52 PM (IST) Oct 31

ಕರ್ನಾಟಕದಲ್ಲಿ ದಲಿತ ಸಿಎಂ ಸಾಧ್ಯವಿಲ್ಲವೆಂದು ಯಾರು ಹೇಳಿದ್ದಾರೆ? ಅಳುವ ಪರಿಸ್ಥಿತಿಯಂತೂ ಇಲ್ಲ - ಹೆಚ್‌ ಸಿ ಮಹದೇವಪ್ಪ

ಸಚಿವ ಸಂಪುಟ ಸಭೆಯಲ್ಲಿ ಕೆ.ಜೆ. ಜಾರ್ಜ್ ಜೊತೆಗಿನ ಗಲಾಟೆ ವರದಿಗಳನ್ನು ಸಚಿವ ಎಚ್.ಸಿ. ಮಹದೇವಪ್ಪ ನಿರಾಕರಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಬಗ್ಗೆ ಚರ್ಚೆಯಾಗಿದೆ ಎಂದ ಅವರು, ದಲಿತ ಸಿಎಂ ಹೋರಾಟ ನಿರಂತರವಾಗಿದ್ದು, ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧರಿಸಲಿದೆ.

Read Full Story

01:38 PM (IST) Oct 31

Bigg Boss - ಸೀರಿಯಲ್​ ಕಲಾವಿದ್ರು ನಿಂಗೆ ಅದ್ರಲ್ಲೇ ಹೊಡೀತಾರೆ- ರಕ್ಷಿತಾಗೆ ಅಶ್ವಿನಿ ಗೌಡ ಆವಾಜ್​; ಏನಿದು ಗಲಾಟೆ?

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರ ಜಗಳಗಳು ನಿರಂತರ ಚರ್ಚೆಗೆ ಕಾರಣವಾಗಿವೆ. 'ಧಾರಾವಾಹಿ ಥರ ಮಾಡಬೇಡಿ' ಎಂಬ ರಕ್ಷಿತಾ ಶೆಟ್ಟಿ ಅವರ ಮಾತಿನಿಂದ ಕೆರಳಿದ ಅಶ್ವಿನಿ, ಕಲಾವಿದರ ಬಗ್ಗೆ ಮಾತನಾಡಿದರೆ 'ಅದರಿಂದ' ಹೊಡೆಯುತ್ತಾರೆ ಎಂದು ಬೆದರಿಕೆ ಹಾಕಿದ್ದು, ಇದು ಹೊಸ ವಿವಾದಕ್ಕೆ ಕಾರಣವಾಗಿದೆ.
Read Full Story

01:37 PM (IST) Oct 31

ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಆಫರ್‌ - ಇಂದಿನಿಂದ ಕಾಂತಾರ 1 ಟಿಕೆಟ್ ಬೆಲೆ ರು.99

ಅತೀ ಹೆಚ್ಚಿನ ಗಳಿಕೆಯ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಕಾಂತಾರ 1 ಕರ್ನಾಟಕದಲ್ಲೇ 250 ಕೋಟಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡವು ನವೆಂಬರ್‌ 1 ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಂತಾರ 1 ಚಿತ್ರದ ಟಿಕೆಟ್‌ ಬೆಲೆ ಕಡಿಮೆ ಮಾಡಿದೆ.

Read Full Story

01:17 PM (IST) Oct 31

ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿರುವ ಸಿನಿಮಾ ರಕ್ತ ಕಾಶ್ಮೀರ - ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು

ಪಾಕ್ ಆಕ್ರಮಿತ ಕಾಶ್ಮೀರದ ಹತ್ತಿರದಲ್ಲಿರುವ ಸಿಂಧೂ ನದಿ ದಂಡೆಯಲ್ಲೇ ಉಪೇಂದ್ರ- ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾದ ಚಿತ್ರೀಕರಣ ಮಾಡಿದ್ದೇವೆ ಎಂದರು ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು.

Read Full Story

01:15 PM (IST) Oct 31

ಬೆಂಗಳೂರು - ಕಸ ಎಸೆದವರಿಗೆ ಅನಿರೀಕ್ಷಿತ ರಿಟರ್ನ್ ಗಿಫ್ಟ್! ಒಂದೇ ದಿನ 2.80 ಲಕ್ಷ ರೂ ದಂಡ ಸಂಗ್ರಹ

ಬೆಂಗಳೂರಿನಲ್ಲಿ ರಸ್ತೆ ಬದಿ ಕಸ ಎಸೆಯುವವರ ವಿರುದ್ಧ BSWML 'ಮನೆ ಮುಂದೆ ಕಸ ಸುರಿಯುವ' ಅಭಿಯಾನ ಆರಂಭಿಸಿದೆ. ಈ ಕಠಿಣ ಕ್ರಮದ ಮೂಲಕ, ನಿಯಮ ಉಲ್ಲಂಘಿಸಿದ ಮನೆಗಳ ಮುಂದೆ ಕಸ ಸುರಿದು, ದಂಡ ವಸೂಲಿ ಮಾಡಲಾಗುತ್ತಿದೆ.  

Read Full Story

12:53 PM (IST) Oct 31

ಮಹಾಕಾಳಿ ಪಾತ್ರವೇ ನನ್ನ ಬದುಕು ಬದಲಿಸುತ್ತದೆ - ಪ್ಯಾನ್‌ ಇಂಡಿಯಾ ಸಿನಿಮಾದ ಬಗ್ಗೆ ಭೂಮಿ ಶೆಟ್ಟಿ ಹೇಳಿದ್ದೇನು?

ರಿಜ್ವಾನ್‌ ರಮೇಶ್‌ ದುಗ್ಗಲ್‌ ನಿರ್ಮಾಣದ ಈ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಈ ಸಿನಿಮಾ ಭಾರತೀಯ ಭಾಷೆಗಳಲ್ಲದೆ, ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಈ ಕುರಿತು ಭೂಮಿ ಶೆಟ್ಟಿಯವರ ಮಾತುಗಳು ಇಲ್ಲಿವೆ.

Read Full Story

12:38 PM (IST) Oct 31

Bigg Boss ಮನೆಯಲ್ಲಿ ಗಿಲ್ಲಿ ಈಗ ಕಿಲಕಿಲ! ಕಾವ್ಯಾ ಜೊತೆ ರೊಮಾನ್ಸ್​ಗೆ ಅವಕಾಶ ಕೊಟ್ಟೇ ಬಿಟ್ರಲ್ಲ

ಬಿಗ್​ಬಾಸ್​ 12 ಮನೆಯಲ್ಲಿ ನಡೆಯುತ್ತಿರುವ ಫೆಸ್ಟಿವಲ್​ನಲ್ಲಿ, ಸೂರಜ್ ಜೊತೆ ಕಾವ್ಯಾ ಡಾನ್ಸ್ ಮಾಡಿದ ನಂತರ ಇದೀಗ ಗಿಲ್ಲಿ ನಟನ ಜೊತೆಗೂ ಕಾವ್ಯಾ ಹೆಜ್ಜೆ ಹಾಕಿದ್ದಾರೆ. ಈ ಹೊಸ ಜೋಡಿಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಸೂರಜ್-ರಾಶಿಕಾ ಲವ್​ಸ್ಟೋರಿ ಬಗ್ಗೆ ವೀಕ್ಷಕರಿಂದ ಅಸಮಾಧಾನ ವ್ಯಕ್ತವಾಗಿದೆ.

Read Full Story

12:31 PM (IST) Oct 31

ದರ್ಶನ್ ಪವಿತ್ರಾ ಗೌಡ ಮದುವೆ ಆಗಿದ್ರಾ? ಮದುಮಗನ ಗೆಟಪ್‌ನಲ್ಲಿ ದರ್ಶನ್, ಪವಿತ್ರಾ ಕೊರಳಲ್ಲಿ ಅರಿಶಿನ ದಾರ!

ದರ್ಶನ್ ಮತ್ತು ಪವಿತ್ರಾ ಗೌಡ ಅವರಿಬ್ಬರೂ 2014 ರಿಂದಲೇ ಜೊತೆಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಕೂಡ, ದರ್ಶನ್, ಪವಿತ್ರಾ ಗೌಡ ಹಾಗೂ ಪವಿತ್ರಾ ಗೌಡ ಮಗಳು ಒಟ್ಟಿಗೇ ಇರುವ ಫೋಟೋಗಳು ವೈರಲ್ ಅಗಿತ್ತು. ಇದೀಗ, ಕೇಸ್ ತನಿಖೆ ಹಂತದಲ್ಲಿ ಇರುವಾಗ ಮತ್ತೊಮ್ಮೆ ಪವಿತ್ರಾ ಗೌಡ, ದರ್ಶನ್ ಫೋಟೋ ವೈರಲ್ ಆಗಿದೆ!

Read Full Story

12:17 PM (IST) Oct 31

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಷ ಸೇವಿಸಿದ್ದ ವಿವಾಹಿತ ಮಹಿಳೆ ಸಾವು - ಸಾವಿನ ಸುತ್ತ ಅನುಮಾನ!

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವಿಷ ಸೇವಿಸಿದ್ದ ವಿವಾಹಿತ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಾವನ್ನಪ್ಪಿದ ಮಹಿಳೆಯನ್ನ ಪೂಜಾ ಎಂದು (30) ಎಂದು ಗುರುತಿಸಲಾಗಿದೆ.

Read Full Story

12:16 PM (IST) Oct 31

ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳು ನ.3ಕ್ಕೆ ಕೋರ್ಟ್‌ಗೆ ಹಾಜರಾಗಲು ಸೂಚನೆ

ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳು ನ.3ಕ್ಕೆ ಕೋರ್ಟ್‌ಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಜಾಮೀನು ಪಡೆದಿರುವ ಆರೋಪಿಗಳು ಹಾಜರಾಗಬೇಕು, ಹಾಜರಾಗದಿದ್ದರೆ ಅರೆಸ್ಟ್ ಎಂದು ಕೋರ್ಟ್ ಎಚ್ಚರಿಸಿದೆ.

Read Full Story

11:47 AM (IST) Oct 31

ಗುಡ್‌ ಫ್ರೆಂಡ್‌ ಜೊತೆಗೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಷ್ಟು ಖುಷಿ ಆಗಿದೆ - Manisha Kandkur Interview

ಕನ್ನಡದಲ್ಲಿ ‘ಬ್ರ್ಯಾಟ್‌’ ನನಗೆ ಮೊದಲ ಸಿನಿಮಾ. ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದೇನೆ. ರಾಜ್‌ ತರುಣ್‌ ಅಭಿನಯದ ‘ಭಲೇ ಉನ್ನಾಡೆ’ ಎನ್ನುವ ಚಿತ್ರದಲ್ಲಿ ನಟಿಸಿದ್ದೇನೆ. ಆ ಸಿನಿಮಾ ಬಿಡುಗಡೆ ಆಗಿದೆ ಎಂದು ನಟಿ ಮನೀಶಾ ಕಂದಕೂರ್‌ ಸಂದರ್ಶನದಲ್ಲಿ ಹೇಳಿದರು.

Read Full Story

11:21 AM (IST) Oct 31

OTTಗಳ ಹೊಸ ತಂತ್ರದಿಂದ ಚಿತ್ರರಂಗದಲ್ಲಿ ಬಿಸಿನೆಸ್ ಕ್ರಾಂತಿ - ನ್ಯೂ ಟ್ರೆಂಡ್‌ಗೆ ಪ್ರೇಕ್ಷಕರೇ ಅಚ್ಚರಿ!

ಸೋಲು, ಗೆಲುವು, ಥಿಯೇಟರ್‌ಗಳಲ್ಲಿ ಸಕ್ಸಸ್‌ಫುಲ್‌ ರನ್ನಿಂಗ್‌, ಹೌಸ್‌ಫುಲ್‌ ಬೋರ್ಡ್‌ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಿನಿಮಾ ಬಿಡುಗಡೆ ಆಗಿ ಒಂದೆರಡು ತಿಂಗಳಲ್ಲಿ ಆ ಚಿತ್ರಗಳನ್ನು ಪ್ರೇಕ್ಷಕನ ಅಂಗೈಗೆ ಕೊಡುತ್ತಿವೆ ಓಟಿಟಿ ವೇದಿಕೆಗಳು.

Read Full Story

10:55 AM (IST) Oct 31

ಪೇದೆಗಳ ನೇಮಕಕ್ಕೆ ಕನಿಷ್ಠ ವಿದ್ಯಾರ್ಹತೆ ಪಿಯುಗೆ ನಿಗದಿ - ಸಚಿವ ಸಂಪುಟ ಒಪ್ಪಿಗೆ

ಕೆಎಸ್‌ಆರ್‌ಪಿ, ಐಆರ್‌ಬಿ ಪೇದೆಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಎಸ್ಸೆಸ್ಸೆಲ್ಸಿಯಿಂದ ಪಿಯುಸಿಗೆ ಹೆಚ್ಚಳ ಸೇರಿ ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ವೃಂದ ಮತ್ತು ನೇಮಕಾತಿ ಕರಡು ನಿಯಮಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Read Full Story

10:29 AM (IST) Oct 31

ಸೊರಬದಲ್ಲಿ ಆಘಾತಕಾರಿ ಘಟನೆ - ಕಾದ ಚಾಕುವಿನಿಂದ ಮಗು ಗಲ್ಲಕ್ಕೆ ಬರೆ ಎಳೆದ ಅಂಗನವಾಡಿ ಸಹಾಯಕಿ

ಬೆಂಕಿಯಲ್ಲಿ ಕಾಸಿದ ಚಾಕುವಿನಿಂದ ಗಲ್ಲಕ್ಕೆ ಬರೆ ಎಳೆದ ಘಟನೆ ಗುರುವಾರ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಯೋಧಮೂರ್ತಿ ಬೆಂಕಿ ಬರೆಗೆ ತುತ್ತಾದ ಮಗುವಾಗಿದೆ.

Read Full Story

10:20 AM (IST) Oct 31

ಏಕತೆಯ ವಿಗ್ರಹ.. ರಾಷ್ಟ್ರೀಯ ಐಕ್ಯತೆ ಸಾರುತ್ತಿದೆ ಸರ್ದಾರ್ ವಲ್ಲಭ ಭಾಯ್‌ ಪಟೇಲ್ ‘ಮೂರ್ತಿ’!

ಅಖಂಡ ಭಾರತದ ಒಗ್ಗೂಡುವಿಕೆಗೆ ಕಾರಣೀಭೂತರಾದ ಭಾರತದ ಸ್ವಾತಂತ್ರ್ಯ ಇತಿಹಾಸದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್‌ ಪಟೇಲ್ ಅವರ ಜನ್ಮ ಶತಾಬ್ಧಿಯ ನೆನಪಿಗಾಗಿ ಈ ಆಚರಣೆಯನ್ನು 2014ರಲ್ಲಿ ಭಾರತ ಸರ್ಕಾರ ಆರಂಭಿಸಿತ್ತು.

Read Full Story

10:08 AM (IST) Oct 31

ಕಸ ಎಸೆದು ಲಾಕ್ ಆದ ದಂಪತಿ, ವಿಡಿಯೋ ತೋರಿಸಿ ಮನೆ ಮುಂದೆ ಕಸ ಸುರಿದ ಅಧಿಕಾರಿಗಳು

ಕಸ ಎಸೆದು ಲಾಕ್ ಆದ ದಂಪತಿ, ವಿಡಿಯೋ ತೋರಿಸಿ ಮನೆ ಮುಂದೆ ಕಸ ಸುರಿದ ಅಧಿಕಾರಿಗಳು, ಬೆಂಗಳೂರಿನಲ್ಲಿ ಜನರಿಗೆ ಕಸದ ಭಯ ಶುರುವಾಗಿದೆ. ರಸ್ತೆಗೆ ಕಸ ಎಸೆದರೆ, ನಿಮ್ಮ ಮನೆ ಮುಂದೆ ಲಾರಿ ಕಸ ಸುರಿಯುತ್ತಾರೆ. ಇಷ್ಟೇ ಅಲ್ಲ ಜೊತೆಗೆ ದಂಡ ಕೂಡ ಪಾವತಿಸಬೇಕು.

Read Full Story

09:55 AM (IST) Oct 31

ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸುಭಾಷ್ ಚಂದ್ರ ಬೋಸ್ - ತತ್ವಭೇದಗಳಲ್ಲಡಗಿದ ರಾಷ್ಟ್ರಚಿಂತನೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸುಭಾಷ್ ಚಂದ್ರ ಬೋಸ್ ಇಬ್ಬರೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು, ಅಪ್ರತಿಮ ದೇಶಭಕ್ತರು. ಇಬ್ಬರೂ ಸ್ವಾತಂತ್ರ್ಯವನ್ನು ಸಾಧಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸಿದರು.

Read Full Story

More Trending News