Published : Mar 02, 2025, 07:20 AM ISTUpdated : Mar 02, 2025, 07:03 PM IST

Karnataka News Live: ಹೈಕಮಾಂಡ್‌ಗೆ ಡೆಡ್‌ಲೈನ್ ಕೊಟ್ರಾ ಡಿಕೆಶಿ? ಯತ್ನಾಳ್ ವಿರುದ್ಧ 'ರೇಣುಕಾ' ಅಸ್ತ್ರ

ಸಾರಾಂಶ

ಬೆಂಗಳೂರು: ವಿಧಾನಮಂಡಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಗ್ಯಾರಂಟಿಗಳ ಹಣ ಬಿಡುಗಡೆ ವಿಳಂಬ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ, ಕೆಪಿಎಸ್ಸಿ ಹಗರಣ, ಬಸ್‌, ಮೆಟ್ರೋ ದರ ಏರಿಕೆ, ವಿವಿ ಮುಚ್ಚುವ ನಿರ್ಧಾರ, ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ, ವಿವಿಧ ಯೋಜನೆಗಳಿಗೆ ಕೇಂದ್ರ ಅಂಗೀಕಾರ ನೀಡದಿರುವುದು ಸೇರಿ ಹತ್ತು ಹಲವು ವಿಷಯಗಳು ಉಭಯ ಸದನಗಳಲ್ಲಿ ತೀವ್ರ ಚರ್ಚೆ, ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ವೀರಶೈವ-ಲಿಂಗಾಯತ ಸಮುದಾಯವನ್ನು ಸೆಳೆಯಲು ಅವರ ಬೆಂಬಲಿಗರು ಮುಂದಾಗಿದ್ದು, ಆ ಮೂಲಕ ಅದೇ ಸಮುದಾಯದ ಯತ್ನಾಳ್ ಟೀಂಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆನ್ನಿಗೆ ವೀರಶೈವ ಲಿಂಗಾಯತ ಸಮುದಾಯ ಇದೆ ಎಂಬ ಸಂದೇಶ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಮುದಾಯದ ದೊಡ್ಡ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗ ಹಲವು ದಿನಗಳಿಂದ ಜೋರಾಗುತ್ತಿದೆ. ಇದೀಗ ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್‌ಗೆ ಡೆಡ್‌ಲೈನ್ ಕೊಟ್ಟಿದ್ದಾರೆ ಎನ್ನಲಾಗಿದೆ.  ಅಕ್ಟೋಬರ್ 31 ಕೊನೆಯ ದಿನ. ಏನಿದು ಡಿಕೆಶಿ ಡೆಡ್‌ಲೈನ್?  ಇನ್ನುಳಿದಂತೆ ರಾಜ್ಯದಲ್ಲಿಂದು ನಡೆಯುವ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

Karnataka News Live: ಹೈಕಮಾಂಡ್‌ಗೆ ಡೆಡ್‌ಲೈನ್ ಕೊಟ್ರಾ ಡಿಕೆಶಿ? ಯತ್ನಾಳ್ ವಿರುದ್ಧ 'ರೇಣುಕಾ' ಅಸ್ತ್ರ

07:03 PM (IST) Mar 02

14 ಗಂಟೆ ಶವದ ಪಕ್ಕ ಕುಳಿತು ಪ್ರಯಾಣ: ದಂಪತಿಯ ದೂರಿಗೆ ಸಮರ್ಥನೆ ನೀಡಿದ ಏರ್‌ಲೈನ್ಸ್

14 ಗಂಟೆಯ ವಿಮಾನ ಪ್ರಯಾಣದ ವೇಳೆ ಅಚಾನಕ್ ಆಗಿ ಮೃತಪಟ್ಟ ಪ್ರಯಾಣಿಕರೊಬ್ಬರ ಪಕ್ಕದಲ್ಲಿ ತಮ್ಮನ್ನು ಕೂರಿಸಿದ್ದರು ಎಂಬ ದಂಪತಿಯ ಆರೋಪಕ್ಕೆ ಕತಾರ್ ಏರ್‌ವೇಸ್ ಸಮರ್ಥನೆ ನೀಡಿದೆ.

ಪೂರ್ತಿ ಓದಿ

06:06 PM (IST) Mar 02

ಮುದ್ದಿನ ಬೆಕ್ಕಿನ ಸಾವು ತಂದ ನೋವು: ಬದುಕಿಗೆ ಗುಡ್‌ಬಾಯ್ ಹೇಳಿದ ವಿಚ್ಚೇದಿತ ಮಹಿಳೆ

ಉತ್ತರ ಪ್ರದೇಶದಲ್ಲಿ ಬೆಕ್ಕಿನ ಸಾವಿನಿಂದ ನೊಂದ 32 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಚ್ಛೇದನದ ನಂತರ ಬೆಕ್ಕಿನೊಂದಿಗೆ ಒಡನಾಟ ಹೊಂದಿದ್ದ ಆಕೆ, ಬೆಕ್ಕಿನ ಅಗಲಿಕೆಯನ್ನು ತಡೆಯಲಾರದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಪೂರ್ತಿ ಓದಿ

02:50 PM (IST) Mar 02

7 ರೇ*ಸ್ಟ್​ಗಳಿಗೆ ಒಂದೇ ದಿನ ಜೀವಾವಧಿ ಶಿಕ್ಷೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೋರ್ಟ್​ಗಳು! ಕುತೂಹಲದ ಮಾಹಿತಿ ಇಲ್ಲಿದೆ...

 7 ರೇ*ಸ್ಟ್​ಗಳಿಗೆ ಒಂದೇ ದಿನ ವಿವಿಧ ಕೋರ್ಟ್​ಗಳು ಜೀವಾವಧಿ ಶಿಕ್ಷೆ  ವಿಧಿಸುವ ಮೂಲಕ ಅಪರಾಧಿಗಳಿಗೆ ಎಚ್ಚರಿಕೆ ನೀಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೋರ್ಟ್​ಗಳು! ಕುತೂಹಲದ ಮಾಹಿತಿ ಇಲ್ಲಿದೆ...  
 

ಪೂರ್ತಿ ಓದಿ

12:17 PM (IST) Mar 02

ಕರ್ನಾಟಕ ಬಂದ್‌ಗೆ ಬೆಂಬಲ ನೀಡಲ್ಲ, ಇದ್ರಿಂದ ಸರ್ಕಾರ, ಜನರಿಗೆ ನಷ್ಟ: ನಾರಾಯಣ ಗೌಡ

ಬೆಳಗಾವಿ ಘಟನೆ ಸಂಬಂಧ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ. 

ಪೂರ್ತಿ ಓದಿ

10:51 AM (IST) Mar 02

ಕೈದಿಗಳ ಪೆಟ್ರೋಲ್ ಬಂಕ್‌ ಯೋಜನೆಗೆ ರಾಜ್ಯ ಸರ್ಕಾರ ಅಸ್ತು: ಚಾರ್ಜಿಂಗ್ ಘಟಕ ತೆರೆಯಲೂ ಸೂಚನೆ

ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ 'ಪೆಟ್ರೋಲ್ ಬಂಕ್ ಯೋಜನೆ'ಗೆ ಹಸಿರು ನಿಶಾನೆ ತೋರಿರುವ ಸರ್ಕಾರವು, ಕಾರಾಗೃಹಗಳ ಹೊರಾವರಣದಲ್ಲಿ ವಿದ್ಯುತ್ ಚಾಲಿತವಾಹನಗಳ ಚಾರ್ಜಿಂಗ್ ಘಟಕಗಳ ಸ್ಥಾಪನೆಗೂ ಸೂಚಿಸಿದೆ. 

ಪೂರ್ತಿ ಓದಿ

09:10 AM (IST) Mar 02

ಈ ಸಲದ ಬೇಸಿಗೆ ರಣಭೀಕರ: ಉ.ಕರ್ನಾಟಕಕ್ಕೆ ಈ ಬಾರಿ ಸುಡುಬಿಸಿಲು, ಉಷ್ಣ ಅಲೆ

ಈ ಸಲದ ಬೇಸಿಗೆ ರಣಭೀಕರವಾಗಿ ಇರಲಿದೆ ಎಂಬ ಸುಳುಹು ಫೆಬ್ರವರಿಯಲ್ಲಿ ಸಿಕ್ಕ ಬೆನ್ನಲ್ಲೇ ಉತ್ತರ ಕರ್ನಾಟಕದ ಪ್ರದೇಶಗಳು ಸೇರಿದಂತೆ ದೇಶದ 15 ರಾಜ್ಯಗಳು ಮೇವರೆಗೆ ಅತಿಯಾದ ತಾಪಮಾನ ಹಾಗೂ ಉಷ್ಣ ಅಲೆಯಿಂದ ತತ್ತರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
 

ಪೂರ್ತಿ ಓದಿ

More Trending News