Published : Mar 14, 2025, 07:24 AM ISTUpdated : Mar 14, 2025, 11:58 PM IST

Karnataka News Live 14th March: ತಮನ್ನಾ-ವಿಜಯ್ ವರ್ಮಾ ಬ್ರೇಕಪ್ ಸುಳ್ಳಾ? ಹೋಳಿ ಸಂಭ್ರಮದಲ್ಲಿ ಪ್ರಣಯ ಪಕ್ಷಿಗಳ ವಿಡಿಯೋ ವೈರಲ್!

ಸಾರಾಂಶ

ಬೆಂಗಳೂರು (ಮಾ.11): ರನ್ಯಾ ರಾವ್‌ ಕೇಸ್‌ನಲ್ಲಿ ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ), ಸಿಬಿಐ ಬಳಿಕ ಜಾರಿ ನಿರ್ದೇಶನಾಲಯ ಕೂಡ ಲಗ್ಗೆ ಇಟ್ಟಿದೆ. ನಟ ತರುಣ್‌ ರಾಜ್‌, ಚಿನ್ನ ಉದ್ಯಮಿ ಟಿಜೆ ರಾವ್‌ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಿನದಿಂದ ದಿನಕ್ಕೆ ಈ ಕೇಸ್‌ನ ವ್ಯಾಪ್ತಿ ದೊಡ್ಡದಾಗುತ್ತಾ ಸಾಗಿದೆ. ವೈಟ್‌ಗೋಲ್ಡ್‌ ಸಂಸ್ಥೆಯ ಮಾಲೀಕ ರಾವ್‌ ಮನೆಯಲ್ಲಿ ಬಂಗಾರದ ದಾಸ್ತಾನೇ ಪತ್ತೆಯಾಗಿದೆ.

Karnataka News Live 14th March: ತಮನ್ನಾ-ವಿಜಯ್ ವರ್ಮಾ ಬ್ರೇಕಪ್ ಸುಳ್ಳಾ? ಹೋಳಿ ಸಂಭ್ರಮದಲ್ಲಿ  ಪ್ರಣಯ ಪಕ್ಷಿಗಳ ವಿಡಿಯೋ ವೈರಲ್!

11:58 PM (IST) Mar 14

ತಮನ್ನಾ-ವಿಜಯ್ ವರ್ಮಾ ಬ್ರೇಕಪ್ ಸುಳ್ಳಾ? ಹೋಳಿ ಸಂಭ್ರಮದಲ್ಲಿ ಪ್ರಣಯ ಪಕ್ಷಿಗಳ ವಿಡಿಯೋ ವೈರಲ್!

ನಟಿ ತಮನ್ನಾ ಮತ್ತು ವಿಜಯ್ ವರ್ಮಾ ಬ್ರೇಕ್ಅಪ್ ಸುದ್ದಿ ವೈರಲ್ ಆದ ಬೆನ್ನಲ್ಲೇ, ಇಬ್ಬರೂ ಹೋಳಿ ಆಚರಿಸುತ್ತಿರುವ ವಿಡಿಯೋ ಸದ್ದು ಮಾಡಿದೆ. ರವೀನಾ ಟಂಡನ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಇಬ್ಬರೂ ಭಾಗವಹಿಸಿದ್ದು, ಬ್ರೇಕಪ್ ವದಂತಿ ಸುಳ್ಳಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

ಪೂರ್ತಿ ಓದಿ

11:22 PM (IST) Mar 14

ಹೆಚ್ಚು ತಿನ್ನೋದ್ರಿಂದ ಬೊಜ್ಜು ಬರೋಲ್ಲ, ನೀವು ಮಾಡುವ ಈ ತಪ್ಪುಗಳೇ ಕಾರಣ!

ಬೊಜ್ಜು ಜಾಗತಿಕ ಸಮಸ್ಯೆಯಾಗಿದ್ದು, ಅನಾರೋಗ್ಯಕರ ಜೀವನಶೈಲಿ, ಒತ್ತಡ, ನಿದ್ರೆಯ ಕೊರತೆ ಮತ್ತು ಆನುವಂಶಿಕ ಕಾರಣಗಳಿಂದ ಉಂಟಾಗುತ್ತದೆ. ಇದು ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಪೂರ್ತಿ ಓದಿ

11:07 PM (IST) Mar 14

ಖಾಸಗಿ ಉದ್ಯೋಗಿಯೇ? ಭವಿಷ್ಯದ ಪೆನ್ಷನ್ ಯೋಜನೆ ಹೀಗಿರಲಿ

ಭವಿಷ್ಯಕ್ಕಾಗಿ ಪಿಂಚಣಿ ಯೋಜನೆ ಆಯ್ಕೆ ಮಾಡುವುದು ಹೇಗೆ? ಭಾರತದಲ್ಲಿ ಲಭ್ಯವಿರುವ ಸರ್ಕಾರಿ ಪಿಂಚಣಿ ಯೋಜನೆಗಳು, ಅವುಗಳ ಅರ್ಹತೆ, ಮತ್ತು ಅರ್ಜಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪೂರ್ತಿ ಓದಿ

09:58 PM (IST) Mar 14

ಛೇ... ಛೇ... 'ಮೇಡಂ' ಅಂದ್ರೆ ನಿಜ ಅರ್ಥ ಇದಾ? ಇನ್ನು ಮಹಿಳೆಯರನ್ನು ಹೀಗೆ ಕರೆಯೋದಾದ್ರೂ ಹೇಗೆ?

ಮೇಡಂ ಎಂದು ದಿನನಿತ್ಯ ನಾವು ಬಳಸುವ ಶಬ್ದಕ್ಕೆ ನಿಜವಾದ ಅರ್ಥ ಏನಿದೆ ಗೊತ್ತಾ? ಅದರ ನಿಜ ಅರ್ಥ ತಿಳಿದುಕೊಂಡರೆ ಈ ಕ್ಷಣದಿಂದ ಅದನ್ನು ಹೇಳಲು ನೀವು ಹಿಂದೆ- ಮುಂದೇ ನೋಡ್ತೀರಾ!
 

ಪೂರ್ತಿ ಓದಿ

09:51 PM (IST) Mar 14

ಅಯ್ಯೋ ಪಾಪಿ.. ಮಗು ಹುಟ್ಟಿದ ಕೆಲ ಕ್ಷಣಗಳಲ್ಲಿ ಇರಿದು ಕೊಂದ ತಾಯಿ

ಅಮೆರಿಕದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಇರಿದು ಕೊಂದಿದ್ದಾಳೆ. ಆಕೆ ಲೋಹದ ವಸ್ತುವಿನಿಂದ ಮಗುವಿಗೆ ಇರಿದು, ನಂತರ ಕಸದ ಚೀಲದಲ್ಲಿ ಹಾಕಿದ್ದಳು

ಪೂರ್ತಿ ಓದಿ

09:02 PM (IST) Mar 14

ಉಪ ಸಭಾಪತಿ ರುದ್ರಪ್ಪ ಲಮಾಣಿ ಕಾರು ಅಪಘಾತ; ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ಶಿಫ್ಟ್!

ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ ಕಾರಿನಿಂದ ಇಳಿಯುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೂರ್ತಿ ಓದಿ

09:01 PM (IST) Mar 14

ಉಕ್ರೇನ್ ಸೇನೆ ತುಂಬಾ ದುರ್ಬಲವಾಗಿದೆ ಅವರನ್ನು... ಪುಟಿನ್ ಬಳಿ ಟ್ರಂಪ್ ಹೇಳಿದ್ದೇನು?

ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಟ್ರಂಪ್ ಮತ್ತು ಪುಟಿನ್ ಚರ್ಚಿಸಿದ್ದಾರೆ. ಉಕ್ರೇನಿಯನ್ ಪಡೆಗಳ ಜೀವ ಉಳಿಸಲು ಪುಟಿನ್ ಅವರನ್ನು ಟ್ರಂಪ್ ಒತ್ತಾಯಿಸಿದ್ದಾರೆ ಮತ್ತು ಶೀಘ್ರದಲ್ಲೇ ಯುದ್ಧ ಕೊನೆಗೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

08:53 PM (IST) Mar 14

ವಿವಾಹ ನೋಂದಣಿ ಏಕೆ ಬೇಕು? ಇಷ್ಟೆಲ್ಲಾ ಪ್ರಯೋಜನ ಇವೆಯಾ? ಆನ್‌ಲೈನ್‌ ಸಲ್ಲಿಕೆ ಹೇಗೆ? ಡಿಟೇಲ್ಸ್‌ ಇಲ್ಲಿದೆ...

ವಿವಾಹವಾದ ತಕ್ಷಣ ಅದನ್ನು ನೋಂದಣಿ ಏಕೆ ಮಾಡಬೇಕು? ಇದರ ಉಪಯೋಗಗಳೇನು? ಮಾಡಿದ್ದರೆ ಏನಾಗುತ್ತೆ? ಆನ್‌ಲೈನ್‌-ಆಫ್‌ಲೈನ್‌ ನೋಂದಣಿ ಹೇಗೆ? ಹಂತ ಹಂತದ ಡಿಟೇಲ್ಸ್‌ ಇಲ್ಲಿದೆ... 
 

ಪೂರ್ತಿ ಓದಿ

08:41 PM (IST) Mar 14

Kodagu News: ಆರೋಗ್ಯ ಸಚಿವರೇ ಇಲ್ನೋಡಿ, ಮದ್ಯಪಾನದಿಂದ ಕಿಡ್ನಿ ವೈಫಲ್ಯ ಹೆಚ್ಚಳ, ಒಬ್ಬೇ ಒಬ್ಬ ತಜ್ಞ ವೈದ್ಯರಿಲ್ಲ!

ಕೊಡಗು ಜಿಲ್ಲೆಯಲ್ಲಿ ಮದ್ಯಪಾನದಿಂದ ಮೂತ್ರಪಿಂಡ ವೈಫಲ್ಯ ಹೆಚ್ಚಾಗುತ್ತಿದೆ. 199 ಜನ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ತಜ್ಞ ವೈದ್ಯರಿಲ್ಲ.

ಪೂರ್ತಿ ಓದಿ

08:40 PM (IST) Mar 14

ತಮಿಳುನಾಡು ರೂಪಾಯಿ ಚಿಹ್ನೆ ಬದಲಾವಣೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಖಂಡನೆ

ತಮಿಳುನಾಡು ಸರ್ಕಾರ ಬಜೆಟ್‌ನಲ್ಲಿ ರೂಪಾಯಿ ಚಿಹ್ನೆಯನ್ನು ಬದಲಾಯಿಸಿರುವುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಎಂಕೆ ನಿರ್ಧಾರವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಪೂರ್ತಿ ಓದಿ

08:38 PM (IST) Mar 14

ಬೀದಿನಾಯಿ ಗುಪ್ತಾಂಗ ಕತ್ತರಿಸಿ ಸಂಭೋಗ ಮಾಡುತ್ತಿದ್ದ ವಿಕೃತ ಕಾಮಿ; ಪೊಲೀಸರಿಗೆ ಒಪ್ಪಿಸಿದ ಜಯನಗರ ಜನತೆ!

ಬೆಂಗಳೂರಿನಲ್ಲಿ ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ನಾಯಿಯ ಮರ್ಮಾಂಗವನ್ನು ಕೊಯ್ದು ಸಂಭೋಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಪೂರ್ತಿ ಓದಿ

08:09 PM (IST) Mar 14

ಖಾಕಿ ಡ್ರೆಸ್‌ನಲ್ಲಿ ಸ್ವಾಮೀಜಿ ಕಾಲಿಗೆ ಬಿದ್ದ 6 ಪೊಲೀಸರು ಟ್ರಾನ್ಸ್‌ಫರ್! ಆ ಸ್ವಾಮೀಜಿ ಯಾರು ಗೊತ್ತಾ?

ಬಾಗಲಕೋಟೆಯಲ್ಲಿ ಸ್ವಾಮೀಜಿಯೊಬ್ಬರ ಕಾಲಿಗೆ ಪೊಲೀಸರು ಬಿದ್ದು ಆಶೀರ್ವಾದ ಪಡೆದ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಆರು ಜನ ಪೊಲೀಸರನ್ನು ವರ್ಗಾವಣೆ ಮಾಡಿದೆ.

ಪೂರ್ತಿ ಓದಿ

07:59 PM (IST) Mar 14

ಇದು ಚಿನ್ನದ ಕರ್ಜಿಕಾಯಿ : ಬೆಲೆ ಕೇವಲ 50 ಸಾವಿರ ರೂ. !

ಉತ್ತರ ಪ್ರದೇಶದಲ್ಲಿ 50 ಸಾವಿರ ರೂಪಾಯಿ ಬೆಲೆಯ ಕರ್ಜಿಕಾಯಿಯನ್ನು ತಯಾರಿಸಲಾಗಿದೆ. 24 ಕ್ಯಾರೆಟ್ ಚಿನ್ನದ ಲೇಪನ ಮತ್ತು ಡ್ರೈ ಫ್ರೂಟ್ಸ್‌ನಿಂದ ತಯಾರಿಸಿದ ಈ ಸಿಹಿ ತಿನಿಸು ಸಖತ್ ವೈರಲ್ ಆಗಿದೆ.

ಪೂರ್ತಿ ಓದಿ

07:30 PM (IST) Mar 14

ಬೆಂಗಳೂರು ಜಲಮಂಡಳಿಗೆ 103 ಕೋಟಿ ರೂ. ಬಹುಮಾನ ಕೊಟ್ಟ ಕೇಂದ್ರ ಸರ್ಕಾರ! ಈ ಹಣ ಏನು ಮಾಡ್ತಾರೆ?

ಬೆಂಗಳೂರಿನ 30 ಎಸ್‌ಟಿಪಿಗಳ ಗುಣಮಟ್ಟಕ್ಕೆ ಕೇಂದ್ರದ ಮೆಚ್ಚುಗೆ ವ್ಯಕ್ತವಾಗಿದೆ. 23 ಎಸ್‌ಟಿಪಿಗಳಿಗೆ 5 ಸ್ಟಾರ್ ರೇಟಿಂಗ್ ಹಾಗೂ 103 ಕೋಟಿ ರೂ. ಪ್ರೋತ್ಸಾಹ ಧನ ಮಂಜೂರಾಗಿದೆ.

ಪೂರ್ತಿ ಓದಿ

07:13 PM (IST) Mar 14

ತಿರುಪತಿ ಬೆಟ್ಟ ಹತ್ತುವ ಮುನ್ನ ಹುಷಾರಾಗಿರಿ!, ಮಹಿಳೆಗೆ ಮತ್ತು ಬರೋ ಔಷಧಿ ನೀಡಿ ದರೋಡೆ!

ತಿರುಪತಿ ದೇವಸ್ಥಾನದಲ್ಲಿ ತಮಿಳುನಾಡಿನ ಮಹಿಳೆಗೆ ಮత్తు ನೀಡಿ ದರೋಡೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮಹಿಳೆಗೆ ಊಟದಲ್ಲಿ ಮత్తు ನೀಡಿ ಆಭರಣ ಮತ್ತು ಹಣವನ್ನು ದೋಚಿದ್ದಾರೆ.

ಪೂರ್ತಿ ಓದಿ

07:00 PM (IST) Mar 14

ಶುದ್ಧ ಗಾಳಿ ಬೀಸುವ ವಿಶ್ವದ 5 ದೇಶಗಳು! ವಾವ್.... ಈ ದೇಶಾನೂ ಲಿಸ್ಟ್‌ನಲ್ಲಿದೆಯಾ!

ಭಾರತದ ರಾಜಧಾನಿ ದೆಹಲಿ ಸೇರಿದಂತೆ ವಿಶ್ವದ ಅನೇಕ ನಗರಗಳು ವಾಯು ಮಾಲಿನ್ಯದಿಂದ ತತ್ತರಿಸುತ್ತಿವೆ. ಆದರೆ ಕೆಲವು ದೇಶಗಳು ತಮ್ಮ ಗಾಳಿಯನ್ನು ಶುದ್ಧವಾಗಿ ಮತ್ತು ಉಸಿರಾಡಲು ಯೋಗ್ಯವಾಗಿರಿಸಿಕೊಂಡಿವೆ.  ಯಾವುದೇ ಮಾಲಿನ್ಯವಿಲ್ಲದೆ ಶುದ್ಧವಾದ ಗಾಳಿಯನ್ನು ಉಸಿರಾಡುವ ವಿಶ್ವದ 5 ದೇಶಗಳ ಬಗ್ಗೆ ಈ ಸುದ್ದಿಯಲ್ಲಿ ವಿವರವಾಗಿ ನೋಡೋಣ.

ಪೂರ್ತಿ ಓದಿ

06:51 PM (IST) Mar 14

ಮಗಳು ದೇವಿ ಜೊತೆಗೆ ಬಿಪಾಶಾ ಬಸು ಹೋಳಿ ಆಚರಣೆ! ಮುದ್ದಾದ ಫೋಟೋ ಹಂಚಿಕೊಂಡ ನಟಿ

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮಗಳು ದೇವಿಯೊಂದಿಗೆ ಹೋಳಿ ಹಬ್ಬವನ್ನು ಸಂಭ್ರಮಿಸಿದರು. ಬಿಳಿ ಟಿ-ಶರ್ಟ್‌ನಲ್ಲಿ ಮುದ್ದಾದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅವರ ಆಚರಣೆಯು ಪ್ರೀತಿ ಮತ್ತು ಮುದ್ದಿನಿಂದ ತುಂಬಿತ್ತು.

ಪೂರ್ತಿ ಓದಿ

06:32 PM (IST) Mar 14

ಭಾರತದಲ್ಲಿ ಮೊದಲ ಬಾರಿಗೆ ಟ್ರಾನ್ಸ್ ಜೆಂಡರ್ ಮಕ್ಕಳಿಗಾಗಿ ಬಾಲಮಂದಿರ ಆರಂಭಿಸಿದ ಬೆಂಗಳೂರು ಜಿಲ್ಲಾಡಳಿತ!

ಬೆಂಗಳೂರು ನಗರ ಜಿಲ್ಲೆಯಲ್ಲಿ ಮಿಷನ್ ವಾತ್ಸಲ್ಯ ಯೋಜನೆಯಡಿ ಟ್ರಾನ್ಸ್‌ಜೆಂಡರ್ ಮಕ್ಕಳಿಗಾಗಿ ಎರಡು ಬಾಲಮಂದಿರಗಳನ್ನು ಪ್ರಾರಂಭಿಸಲಾಗಿದೆ. ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಟ್ರಾನ್ಸ್‌ಜೆಂಡರ್ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗುವುದು.

ಪೂರ್ತಿ ಓದಿ

06:27 PM (IST) Mar 14

ಅಪರೂಪಕ್ಕೆ ಎಸಿ ಕೂಲರ್ ಆನ್ ಮಾಡಿದವನಿಗೆ ಆಘಾತ: ಒಳಗಿತ್ತು ಹಾವಿನ ದೊಡ್ಡ ಸಂಸಾರ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮನೆಯೊಂದರಲ್ಲಿ ಎಸಿಯನ್ನು ಆನ್ ಮಾಡಿದಾಗ ಹಾವು ಮತ್ತು ಅದರ ಮರಿಗಳು ಪತ್ತೆಯಾಗಿವೆ. ಹಾವು ಹಿಡಿಯುವವರು ಅವುಗಳನ್ನು ರಕ್ಷಿಸಿದ ವೀಡಿಯೋ ವೈರಲ್ ಆಗಿದೆ.

ಪೂರ್ತಿ ಓದಿ

06:23 PM (IST) Mar 14

ಡಿಎಂಕೆ ಮೈತ್ರಿ ಪಕ್ಷದ ಶಾಸಕರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್!

ಮಾನವ ಹಕ್ಕುಗಳ ಪಕ್ಷದ ರಾಜ್ಯಾಧ್ಯಕ್ಷ ಜವಾಹೀರುಲ್ಲಾ ಅವರಿಗೆ ಚೆನ್ನೈ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಅನುಮತಿಯಿಲ್ಲದೆ ವಿದೇಶದಿಂದ ಹಣ ಪಡೆದ ಆರೋಪದ ಮೇಲೆ ಈ ತೀರ್ಪು ಬಂದಿದೆ.

ಪೂರ್ತಿ ಓದಿ

06:15 PM (IST) Mar 14

ಶಕ್ತಿ ಯೋಜನೆ ಮೇಲೆ ಲಿಂಗ ತಾರತಮ್ಯ ಕೇಸ್; ಮಹಿಳೆಯರಿಗೆ ಗ್ಯಾರಂಟಿ ಸ್ಥಗಿತ ಮಾಡುತ್ತಾ ಸರ್ಕಾರ!

ವಕೀಲ ಕೆ.ವಿ ಪ್ರವೀಣ್, ಶಕ್ತಿ ಯೋಜನೆಯನ್ನು ಪುರುಷರಿಗೂ ವಿಸ್ತರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಲಿಂಗ ತಾರತಮ್ಯವೆಂದು ಆರೋಪಿಸಿ, ಉಚಿತ ಪ್ರಯಾಣಕ್ಕೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪೂರ್ತಿ ಓದಿ

06:10 PM (IST) Mar 14

'ಏಯ್ ಡಿಕೆ ಶಿವಕುಮಾರ, ಹಿಂದಿ ಹೇರಿಕೆಗೆ ರಾಹುಲ್, ಸೋನಿಗಾಂಧಿ ಪರಿಹಾರ ಕೊಡ್ತಾರಾ?; ಕೋಡಿಹಳ್ಳಿ ಏಕವಚನದಲ್ಲೇ ವಾಗ್ದಾಳಿ!

The battle against Hindi imposition ಡಿಕೆ ಶಿವಕುಮಾರ್ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಿಂದಿ ಹೇರಿಕೆ ವಿಚಾರದಲ್ಲಿ ಹೈಕಮಾಂಡ್ ಕೇಳಿ ತೀರ್ಮಾನ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ

05:33 PM (IST) Mar 14

ಬೇಸಿಗೆ ಕಾಲ ಬರುತ್ತಿದೆ; AC ಇಲ್ಲದೆಯೂ ನಿಮ್ಮ ಮನೆಯನ್ನು ತಂಪಾಗಿಸಬಹುದು, ಇಷ್ಟು ಮಾಡಿದ್ರೆ ಸಾಕು!

ಮುಂಬರುವ ತಿಂಗಳುಗಳಲ್ಲಿ ತೀವ್ರ ಶಾಖ ಬರಲಿದೆ. ಮನೆಯ ಒಳಗೆ ಮತ್ತು ಹೊರಗೆ ಅಸಹನೀಯವಾಗಿ ಬಿಸಿಲಿರುತ್ತದೆ. ಆದಾಗ್ಯೂ, ಮನೆಯ ಒಳಗೆ ಹೊರಗಿಗಿಂತ ಹೆಚ್ಚು ಸೆಕೆಯಾಗುವ ಸಾಧ್ಯತೆಯಿದೆ.

ಪೂರ್ತಿ ಓದಿ

05:12 PM (IST) Mar 14

'ಖರ್ಗೆ ಹಾಲು ಕುಡಿದಷ್ಟು, ನಾನು ನೀರು ಕುಡಿದಿಲ್ಲ' ಟಿಎ ಶರವಣ ಮಾತಿಗೆ ಪರಿಷತ್‌ನಲ್ಲಿ ಪ್ರಿಯಾಂಕ್ ಕೆಂಡಾಮಂಡಲ!

ಪರಿಷತ್ ಕಲಾಪದಲ್ಲಿ ಟಿಎ ಸರವಣ ಅವರ ಮಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಅರ್ಹತೆ ಮತ್ತು ಸಮುದಾಯದ ಬಗ್ಗೆ ಅಸಹನೆ ತೋರುವವರ ವಿರುದ್ಧ ಅವರು ಕಿಡಿಕಾರಿದರು.

ಪೂರ್ತಿ ಓದಿ

05:04 PM (IST) Mar 14

ಈ ಊರಿನ 250ಕ್ಕೂ ಹೆಚ್ಚು ಪಾನ್ ಮಾರಾಟಗಾರರೆಲ್ಲರೂ ಕೋಟ್ಯಾಧಿಪತಿಗಳೇ...

ಉತ್ತರ ಪ್ರದೇಶದ ಕಾನ್ಪುರದಲ್ಲಿ 250ಕ್ಕೂ ಹೆಚ್ಚು ಪಾನ್ ಮಾರಾಟಗಾರರಿದ್ದು, ಅವರೆಲ್ಲರೂ ಕೋಟ್ಯಾಧಿಪತಿಗಳಾಗಿದ್ದಾರೆ. ಹಿಂದಿನ ಪೀಳಿಗೆ ಶೋಕಿ ಮಾಡದಿದ್ದರೂ, ಈಗಿನ ಪೀಳಿಗೆ ಐಷಾರಾಮಿ ಜೀವನ ನಡೆಸುತ್ತಿದೆ.

ಪೂರ್ತಿ ಓದಿ

04:53 PM (IST) Mar 14

ವಿದೇಶದಲ್ಲಿ ಓದಿ ಅಲ್ಲೇ ಸೆಟಲ್ ಆಗೋಕೆ ಆಸೆಯೇ? ಟಾಪ್ 10 ದೇಶಗಳು ಇವು!

ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ 10 ಪ್ರಮುಖ ದೇಶಗಳ ಮಾಹಿತಿ ಇಲ್ಲಿದೆ. ಈ ದೇಶಗಳು ಭಾರತೀಯರಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ.

ಪೂರ್ತಿ ಓದಿ

04:44 PM (IST) Mar 14

ಹೋಳಿಯಲ್ಲಿ ಹಾಡಿ ಕುಣಿದ ಹಸೀನಾ; ಶಮಿ ಕೈಬಿಟ್ಟಿದ್ದೇ ಒಳ್ಳೇದಾಯ್ತು ಎಂದ ನೆಟ್ಟಿಗರು!

ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸೀನ್ ಜಹಾನ್ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅವರ ಬಿಂದಾಸ್ ಡ್ಯಾನ್ಸ್ ಮತ್ತು ಮಕ್ಕಳೊಂದಿಗೆ ಬಣ್ಣ ಹಚ್ಚುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

04:30 PM (IST) Mar 14

ಯುಪಿಐ ಅಂದ್ರೇನು? ಇದು ಹೇಗೆ ಕೆಲಸ ಮಾಡುತ್ತೆ? ಸಂಪೂರ್ಣ ಮಾಹಿತಿ ಇಲ್ಲಿದೆ

ಯುಪಿಐ ಅಂದ್ರೆ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಬ್ಯಾಂಕ್ ಅಕೌಂಟ್‌ಗಳನ್ನು ಬಳಸಿ ಪೇಮೆಂಟ್ ಮಾಡೋಕೆ ಅನುಕೂಲ ಮಾಡೋದು. ಯುಪಿಐ ಇಂದ ಯಾರು ಬೇಕಾದ್ರೂ ಎಲ್ಲಿಂದ ಬೇಕಾದ್ರೂ ದುಡ್ಡು ಕಳಿಸಬಹುದು, ರಿಸೀವ್ ಮಾಡಬಹುದು, ಬಿಲ್ ಕಟ್ಟಬಹುದು, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು.

ಪೂರ್ತಿ ಓದಿ

04:22 PM (IST) Mar 14

ಒಂದು ನಂಬರ್ ಪ್ಲೇಟ್ 28 ಲಕ್ಷ ರೂ.ಗೆ ಮಾರಾಟ ಮಾಡಿದ ಸರ್ಕಾರ! ಒಂದೇ ದಿನದಲ್ಲಿ 1.11 ಕೋಟಿ ಕಮಾಯಿ

ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜಿನಲ್ಲಿ ದಾಖಲೆ ನಿರ್ಮಾಣವಾಗಿದೆ. ಒಂದೇ ನಂಬರ್ ಪ್ಲೇಟ್ 28.60 ಲಕ್ಷ ರೂ.ಗೆ ಮಾರಾಟವಾಗಿದ್ದು, ಆರ್‌ಟಿಒ ಇಲಾಖೆಗೆ ಒಂದೇ ದಿನದಲ್ಲಿ 1.11 ಕೋಟಿ ರೂ. ಆದಾಯ ಬಂದಿದೆ.

ಪೂರ್ತಿ ಓದಿ

04:14 PM (IST) Mar 14

Mysuru: RSS ಕಾರ್ಯಕರ್ತನ ಕೊಲೆಗೆ ಕಾರಣವಾಗಿದ್ದ ವಿವಾದಿತ ಮಸೀದಿ ರೀ ಓಪನ್‌ಗೆ ಕಸರತ್ತು, ಹಿಂದೂಗಳು ವಿರೋಧ!

Mysuru kyathamaranahalli mosque reopen controversia: ಮೈಸೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಕೊಲೆಗೆ ಕಾರಣವಾಗಿದ್ದ ವಿವಾದಿತ ಮಸೀದಿ ರೀ ಓಪನ್‌ಗೆ ಬಾರಿ ಕಸರತ್ತು ನಡೆದಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಸಭೆಯಲ್ಲಿ ಎರಡೂ ಗುಂಪುಗಳು ತಮ್ಮದೇ ವಾದವನ್ನು ಮಂಡಿಸಿವೆ.

ಪೂರ್ತಿ ಓದಿ

03:59 PM (IST) Mar 14

ಹೂವು, ಚಾಕ್ಲೆಟ್ ಬಿಟ್ಟು ಮೀನು ಕೊಟ್ಟು ಪ್ರಪೋಸ್ ಮಾಡ್ತಾರಂತೆ ‘ಕುಡ್ಲದ ಜನ’… ಇದು ನಿಜಾನ?

ಭರ್ಜರಿ ಬ್ಯಾಚುಲರ್ಸ್  ಸೀಸನ್ 2 ರಿಯಾಲಿಟಿ ಶೋನಲ್ಲಿ  ನಟಿ ಅಭಿಜ್ಞಾ ಭಟ್ ಮಂಗಳೂರಿನ ವೆರೈಟಿ ಹಾಗೂ ಅವುಗಳ ಸ್ಪೆಷಾಲಿಟಿ ಬಗ್ಗೆ ತಿಳಿಸಿದ್ದಾರೆ. ಅವರು ಏನ್ ಹೇಳಿದ್ದಾರೆ ನೀವೆ ಒಮ್ಮೆ ಕೇಳಿ. 

ಪೂರ್ತಿ ಓದಿ

03:51 PM (IST) Mar 14

ʼಹೋಳಿ ಹಬ್ಬ ಇಲ್ದಿದ್ರೂ ಬಣ್ಣ ಹಾಕ್ಕೊಂಡ್‌ ಓಡಾಡೋರಿಗೆ..ʼ: ಏಕಾಏಕಿ ಕಿರಣ್‌ ರಾಜ್‌ ಹೀಗ್ಯಾಕಂದ್ರು?

Kiran Raj Holi Photos: ನಾಡಿನೆಲ್ಲೆಡೆ ಹೋಳಿ ಹಬ್ಬ ಆಚರಿಸಲಾಗ್ತಿದೆ. ಇತ್ತ ʼಕರ್ಣʼ ಧಾರಾವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್‌ ಮಾಡ್ತಿರೋ ನಟ ಕಿರಣ್‌ ರಾಜ್‌ ಅವರು ʼಹೋಳಿ ಹಬ್ಬ ಇಲ್ದೆ ಇದ್ರೂ ಬಣ್ಣ ಹಾಕ್ಕೊಂಡು ಓಡಾಡೋರಿಗೆʼ ಎಂಬ ಡೈಲಾಗ್‌ ಹೇಳಿದ್ದಾರೆ. 
 

ಪೂರ್ತಿ ಓದಿ

03:42 PM (IST) Mar 14

ಅಮರಾವತಿ ಮುಂಬೈ ರೈಲಿಗೆ ಟ್ರಕ್ ಡಿಕ್ಕಿ: ನಜ್ಜುಗುಜ್ಜಾದ ಟ್ರಕ್ ವೀಡಿಯೋ ವೈರಲ್

ಮಹಾರಾಷ್ಟ್ರದ ಬೊಡ್ವಾಡದಲ್ಲಿ ಮುಂಬೈ ಅಮರಾವತಿ ಎಕ್ಸ್‌ಪ್ರೆಸ್ ರೈಲಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ರೈಲು ಪ್ರಯಾಣಿಕರು ಮತ್ತು ಟ್ರಕ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಪೂರ್ತಿ ಓದಿ

03:41 PM (IST) Mar 14

ಮರಳು ಅಥವಾ ಹುಲ್ಲು, ಯಾವುದರ ಮೇಲೆ ವಾಕಿಂಗ್ ಮಾಡಿದ್ರೆ ಆರೋಗ್ಯಕ್ಕೆ ಬೆಸ್ಟ್‌?

ನಡೆಯುವಾಗ ನೆಲದ ಮೇಲ್ಮೈ ವ್ಯಾಯಾಮದ ತೀವ್ರತೆ ಮತ್ತು ಕ್ಯಾಲೋರಿ ಕರಗುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಮರಳಿನ ಮೇಲೆ ನಡೆಯುವುದು ಹುಲ್ಲಿನ ಮೇಲೆ ನಡೆಯುವುದಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಕರಗಿಸುತ್ತದೆ, ಏಕೆಂದರೆ ಮರಳು ಹೆಚ್ಚು ಪ್ರತಿರೋಧವನ್ನು ಒದಗಿಸುತ್ತದೆ.

ಪೂರ್ತಿ ಓದಿ

03:22 PM (IST) Mar 14

ಜನ್ಮ ದಿನಾಂಕ ಪ್ರಮಾಣಪತ್ರ ಪಡೆಯುವುದು ಹೇಗೆ? ಇಲ್ಲಿದೆ ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ!

ನಿಮಗೆ ಜನ್ಮ ದಿನಾಂಕ ಪ್ರಮಾಣಪತ್ರ ಬೇಕಾ? ಸುಲಭವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ನೋಂದಾಯಿಸಲು, ದಾಖಲೆಗಳನ್ನು ಅಪ್‌ಲೋಡ್ ಮಾಡಲು ಮತ್ತು ಹುಟ್ಟು ಪ್ರಮಾಣಪತ್ರ ಪಡೆಯಲು ಈ ಹಂತ-ಹಂತದ ಮಾರ್ಗದರ್ಶಿಯನ್ನು ಅನುಸರಿಸಿ.

ಪೂರ್ತಿ ಓದಿ

03:22 PM (IST) Mar 14

'ಎಂಪಿ ಟಿಕೆಟ್‌ ಕಳೆದುಕೊಂಡು ಒಂದು ವರ್ಷವಾಯಿತು..' ನೋವಿನ ಟ್ವೀಟ್‌ ಮಾಡಿದ ಪ್ರತಾಪ್‌ ಸಿಂಹ!

ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ, ಎಂಪಿ ಟಿಕೆಟ್ ಕೈತಪ್ಪಿದ ನೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಕಾರ್ಯಕರ್ತರ ಪ್ರೀತಿ ಮತ್ತು ಬೆಂಬಲದಿಂದ ಸೈದ್ಧಾಂತಿಕ ಹೋರಾಟ ಮುಂದುವರೆಸುವುದಾಗಿ ಅವರು ಹೇಳಿದ್ದಾರೆ.

ಪೂರ್ತಿ ಓದಿ

03:14 PM (IST) Mar 14

ISRO ಕೆಲಸ ಬಿಟ್ಟು UPSC ಪಾಸಾದ IPS ಅಧಿಕಾರಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರ

Trupti Bhatt UPSC Success Story: ISRO ನ ಪ್ರತಿಷ್ಠಿತ ಕೆಲಸವನ್ನು ಬಿಟ್ಟು ತೃಪ್ತಿ ಭಟ್ IPS ಅಧಿಕಾರಿಯಾದರು. ತಮ್ಮ ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆ ಪಾಸು ಮಾಡಿ ಆಲ್ ಇಂಡಿಯಾ ರಾಂಕ್ 165 ಪಡೆದು ಭಾರತೀಯ ಪೊಲೀಸ್ ಸೇವೆ (IPS) ಗೆ ಆಯ್ಕೆಯಾದರು. ಅವರ ಹೋರಾಟ, UPSC ಪಯಣ ಮತ್ತು ಸ್ಪೂರ್ತಿದಾಯಕ ಯಶೋಗಾಥೆ ತಿಳಿಯಿರಿ.

ಪೂರ್ತಿ ಓದಿ

02:40 PM (IST) Mar 14

ಹೆಣ್ಣು ಬೆಕ್ಕಿನ ಹಿಂದೆ ಓಡಿಬಂದ ಪಕ್ಕದ್ಮನೆ ಗಂಡು ಬೆಕ್ಕು; ಮಚ್ಚಿನಿಂದ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಮಾಲೀಕರು!

ಉತ್ತರ ಕನ್ನಡದಲ್ಲಿ ಬೆಕ್ಕುಗಳ ಜಗಳ ತಾರಕಕ್ಕೇರಿ ಮಾಲೀಕರು ಕತ್ತಿಯಿಂದ ಹೊಡೆದಾಡಿಕೊಂಡಿದ್ದಾರೆ. ಗಂಭೀರ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ

02:36 PM (IST) Mar 14

ಏಕಕಾಲದಲ್ಲಿ 3 ಮಾದರಿಯ ತಂಡ ಆಡಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದ ಆಸೀಸ್ ಮಾರಕ ವೇಗಿ!

ಭಾರತಕ್ಕೆ ಮೂರು ತಂಡಗಳನ್ನು ಕಣಕ್ಕಿಳಿಸುವ ಸಾಮರ್ಥ್ಯವಿದೆ ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ. ಐಪಿಎಲ್‌ನಿಂದ ಭಾರತೀಯ ಕ್ರಿಕೆಟಿಗರಿಗೆ ಮಾತ್ರ ಪ್ರಯೋಜನವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಪೂರ್ತಿ ಓದಿ

02:34 PM (IST) Mar 14

ವಿಶ್ವದ ಅತಿದೊಡ್ಡ ಟಿ20 ಕ್ರಿಕೆಟ್ ಲೀಗ್, ಐಪಿಎಲ್ ಟೂರ್ನಿಗೆ ಕ್ಷಣಗಣನೆ!

ಐಪಿಎಲ್ 2025 ಮಾರ್ಚ್ 22 ರಿಂದ ಮೇ 25 ರವರೆಗೆ ನಡೆಯಲಿದ್ದು, 10 ತಂಡಗಳು 74 ಪಂದ್ಯಗಳಲ್ಲಿ ಸ್ಪರ್ಧಿಸಲಿವೆ. ರಿಷಭ್ ಪಂತ್ ಅತಿ ಹೆಚ್ಚು ಬೆಲೆಗೆ ಹರಾಜಾಗಿದ್ದಾರೆ ಮತ್ತು ವೈಭವ್ ಸೂರ್ಯವಂಶಿ 13ನೇ ವಯಸ್ಸಿನಲ್ಲಿ ಆಯ್ಕೆಯಾಗಿದ್ದಾರೆ.

ಪೂರ್ತಿ ಓದಿ


More Trending News