ಕರುಣಾನಿಧಿ ನಿಧನಕ್ಕೆ ಸೆಹ್ವಾಗ್ ಸೇರಿದಂತೆ ಕ್ರಿಕೆಟಿಗರ ಸಂತಾಪ

By Web DeskFirst Published Aug 7, 2018, 9:11 PM IST
Highlights

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ನಿಧನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಕ್ರಿಕೆಟಿಗರು ಅಗಲಿದ ಹಿರಿಯ ನಾಯಕನಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
 

ಚೆನ್ನೈ(ಆ.07): ತಮಿಳುನಾಡು ಮಾಜಿ ಮುಖ್ಯಮಂತ್ರಿ ಮುತ್ತವೇಲು ಕರುಣಾನಿಧಿ ನಿಧನಕ್ಕೆ ಟೀಂ ಇಂಡಿಯಾ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.  ಉಸಿರಾಟ ಸಮಸ್ಯೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆ ದಾಖಲಾಗಿದ್ದ ದ್ರಾವಿಡ ಚಳವಳಿಯ ಹೋರಾಟಗಾರ ಕರುಣಾನಿಧಿ 11 ದಿನಗಳ ಚಿಕಿತ್ಸೆ ಬಳಿಕ ಇಂದು ನಿಧನರಾಗಿದ್ದಾರೆ.  

ಕಾವೇರಿ ಆಸ್ಪತ್ರೆ ವೈದ್ಯರು ಕರುಣಾನಿಧಿ ನಿಧನವನ್ನ ಖಚಿತಪಡಿಸುತ್ತಿದ್ದಂತೆ, ಪ್ರಧಾನಿ ಮೋದಿ ಸೇರಿದಂತೆ ಟೀಂ ಇಂಡಿಯಾ ಕ್ರಿಕಿಟಗರೂ ಸಂತಾಪ ಸೂಚಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಹಾಲಿ ಕ್ರಿಕೆಟಿಗ ಆರ್ ಅಶ್ವಿನ್ ಸೇರಿದಂತೆ ಹಲವು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಕ್ರಿಕೆಟಿಗರ ಸಂತಾಪದ ಟ್ವೀಟ್ ಇಲ್ಲಿದೆ.

 

Condolences to the family and supporters of ji. May everyone maintain peace in Tamil Nadu.

— Virender Sehwag (@virendersehwag)

 

I convey my deepest condolences to family members and admirers of ji on his demise. RIP

— VVS Laxman (@VVSLaxman281)

 

It's sad to hear about the demise of Dr. M. karunanidhi, may his soul RIP and my condolences to his family and friends. 🙏

— Ashwin Ravichandran (@ashwinravi99)

 

click me!