11ನೇ ಪ್ರೊ ಕಬಡ್ಡಿ: 11ನೇ ಸೋಲುಂಡ ಕೊನೆಯ ಸ್ಥಾನಕ್ಕೆ ಜಾರಿದ ಬೆಂಗಳೂರು ಬುಲ್ಸ್‌!

Published : Nov 22, 2024, 09:03 AM IST
11ನೇ ಪ್ರೊ ಕಬಡ್ಡಿ: 11ನೇ ಸೋಲುಂಡ ಕೊನೆಯ ಸ್ಥಾನಕ್ಕೆ ಜಾರಿದ ಬೆಂಗಳೂರು ಬುಲ್ಸ್‌!

ಸಾರಾಂಶ

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡವು 11ನೇ ಸೋಲು ಅನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ನೋಯ್ಡಾ: 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಸೋಲಿನ ಸರಪಳಿ ಕಳಚುವ ಲಕ್ಷಣಗಳು ಕಂಡುಬರುತ್ತಿಲ್ಲ. ಗುರುವಾರ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಬುಲ್ಸ್‌ 26-32 ಅಂಕಗಳಿಂದ ಸೋಲನುಭವಿಸಿತು. ತಂಡಕ್ಕಿದು 13 ಪಂದ್ಯಗಳಲ್ಲಿ 11ನೇ ಸೋಲು. ಹರ್ಯಾಣ 12ರಲ್ಲಿ 9ನೇ ಗೆಲುವಿನೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತು. ಬುಲ್ಸ್‌ ನಾಯಕ ಪರ್ದೀಪ್‌ ನರ್ವಾಲ್‌ 7 ರೈಡ್‌ಗಳಲ್ಲಿ ಕೇವಲ 1 ಅಂಕ ಗಳಿಸಿದರು. ಹರ್ಯಾಣದ ವಿನಯ್‌ 12 ಅಂಕಗಳೊಂದಿಗೆ ಮತ್ತೆ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು.

ಈ ಸೋಲಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು 13 ಪಂದ್ಯಗಳಲ್ಲಿ 2 ಗೆಲುವು ಹಾಗೂ 11 ಸೋಲು ಸಹಿತ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಇನ್ನೊಂದೆಡೆ ಹರ್ಯಾಣ ಸ್ಟೀಲರ್ಸ್ ತಂಡವು 12 ಪಂದ್ಯಗಳಲ್ಲಿ 9 ಗೆಲುವು ಹಾಗೂ 3 ಸೋಲು ಸಹಿತ 46 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ತೆಲುಗು ಟೈಟಾನ್ಸ್‌ 31-29 ಅಂಕಗಳಿಂದ ಜಯಗಳಿಸಿತು. ಟೈಟಾನ್ಸ್‌ 12ರಲ್ಲಿ 8ನೇ ಜಯ ದಾಖಲಿಸಿದರೆ, ಬೆಂಗಾಲ್‌ಗಿದು 11 ಪಂದ್ಯಗಳಲ್ಲಿ 6ನೇ ಸೋಲು.

ಇಂದಿನ ಪಂದ್ಯಗಳು

ತಲೈವಾಸ್‌-ಯೋಧಾಸ್‌, ರಾತ್ರಿ 8ಕ್ಕೆ

ದಬಾಂಗ್‌ ಡೆಲ್ಲಿ-ಜೈಪುರ, ರಾತ್ರಿ 9ಕ್ಕೆ

ಕಲಬುರಗಿ ಓಪನ್‌: ಭಾರತದ ನಾಲ್ವರು ಕ್ವಾರ್ಟರ್‌ ಫೈನಲ್‌ಗೆ

ಕಲಬುರಗಿ: ಭಾರತದ ನಾಲ್ವರು ಟೆನಿಸಿಗರು ಐಟಿಎಫ್‌ ಕಲಬುರಗಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ದೇವ್‌ ಜಾವಿಯಾ ಇಂಡೋನೇಷ್ಯಾದ ರಿಫ್ಕಿ ಫಿಟ್ರಿಯಾಡಿ ವಿರುದ್ಧ 5-7, 6-2, 6-2ರಲ್ಲಿ ಗೆದ್ದರೆ, ಕರಣ್‌ ಸಿಂಗ್‌ ಭಾರತದವರೇ ಆದ ನಿತಿನ್‌ ಕುಮಾರ್‌ರನ್ನು 6-4, 6-3ರಲ್ಲಿ ಸೋಲಿಸಿದರು.

ಪರ್ತ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ಕೆ; ಆರಂಭದಲ್ಲೇ ಶಾಕ್!

ಸಿದ್ಧಾರ್ಥ್‌ ರಾವತ್‌ ಅಮೆರಿಕದ ಆದಿತ್ಯ ಗಣೇಶನ್‌ ವಿರುದ್ಧ 6-3, 7-6 (7-0) ಅಂತರದಲ್ಲಿ ಜಯಗಳಿಸಿದರು. ಆರ್ಯನ್‌ ಶಾ ಭಾರತದ ಮನೀಶ್‌ ಸುರೇಶ್‌ಕುಮಾರ್‌ ವಿರುದ್ಧ 6-3, 6-3 ನೇರ ಸೆಟ್‌ಗಳಲ್ಲಿ ಗೆದ್ದು ಅಂತಿಮ 8ರ ಘಟ್ಟ ಪ್ರವೇಶಿಸಿದರು. ಡಬಲ್ಸ್‌ನಲ್ಲಿ ನಿತಿನ್‌-ಅಮೆರಿಕದ ನಿಕ್‌ ಚಾಪೆಲ್‌, ಸಿದ್ಧಾಂತ್‌-ವಿಷ್ಣುವರ್ಧನ್‌, ರಿಷಭ್‌ ಅಗರ್‌ವಾಲ್‌-ಕಬೀರ್‌ ಸೆಮಿಫೈನಲ್‌ ಪ್ರವೇಶಿಸಿದರು.

2025ರಲ್ಲಿ ಕೇರಳಕ್ಕೆ ಬಂದು ಫುಟ್ಬಾಲ್‌ ಆಡಲಿದ್ದಾರೆ ಮೆಸ್ಸಿ!

ತಿರುವನಂತಪುರಂ: ಫುಟ್ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ನೇತೃತ್ವದ ವಿಶ್ವ ಚಾಂಪಿಯನ್‌ ಅರ್ಜೆಂಟೀನಾ ತಂಡವು ಕೇರಳದಲ್ಲಿ ಫುಟ್ಬಾಲ್ ಆಡಲು ಆಗಮಿಸಲಿದೆ. ಮುಂದಿನ ವರ್ಷ ಕೇರಳದಲ್ಲಿ ಸ್ನೇಹಾರ್ಥ ಪಂದ್ಯಗಳ ಆಯೋಜನೆ ಹಿನ್ನೆಲೆ ಮೆಸ್ಸಿ ಕೇರಳಕ್ಕೆ ಬರಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. 

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇರಳ ಕ್ರೀಡಾ ಸಚಿವ ಅಬ್ದುರ್‌ ರಹಿಮಾನ್‌, ‘ಮೆಸ್ಸಿ ಸೇರಿದಂತೆ ಇಡೀ ಅರ್ಜೆಂಟೀನಾ ತಂಡ ಬರಲಿದೆ. 2 ಪಂದ್ಯಗಳು ನಡೆಯಲಿದ್ದು, ಸ್ಥಳ ಮತ್ತು ಎದುರಾಳಿ ತಂಡದ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇವೆ. 50 ಸಾವಿರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುತ್ತೇವೆ’ ಎಂದಿದ್ದಾರೆ. ಮೆಸ್ಸಿ 2011ರಲ್ಲಿ ಕೊನೆ ಬಾರಿ ಭಾರತದಲ್ಲಿ ಫುಟ್ಬಾಲ್‌ ಆಡಿದ್ದರು. ಅರ್ಜೆಂಟೀನಾ-ವೆನೆಜುವೆಲಾ ನಡುವೆ ಸ್ನೇಹಾರ್ಥ ಪಂದ್ಯ ನಡೆದಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್