ಮುಂಬೈ ಪರ ವಾಲಿದ ಕಮಂಟೇಟರ್ ಸಂಜಯ್‌ಗೆ ಟ್ವಿಟರಿಗರ ತರಾಟೆ!

Published : May 12, 2019, 10:07 PM IST
ಮುಂಬೈ ಪರ ವಾಲಿದ ಕಮಂಟೇಟರ್ ಸಂಜಯ್‌ಗೆ ಟ್ವಿಟರಿಗರ ತರಾಟೆ!

ಸಾರಾಂಶ

ಐಪಿಎಲ್ 12ನೇ ಆವೃತ್ತಿ ಫೈನಲ್ ಪಂದ್ಯದಲ್ಲಿ ಸಂಜಯ್ ಮಂಜ್ರೇಕರ್ ಕಮೆಂಟರಿಗೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾದ ಮಂಜ್ರೇಕರ್ ಕಮೆಂಟರಿ ಏನು? ಇಲ್ಲಿದೆ ವಿವರ.

ಹೈದರಾಬಾದ್(ಮೇ.12): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸದ್ಯ ಕಮಂಟೇಟರ್ ಆಗಿರುವ ಸಂಜಯ್ ಮಂಜ್ರೇಕರ್ ತನ್ನ ವೀಕ್ಷಕ ವಿವರಣೆಗಿಂತ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಈ ಐಪಿಎಲ್ ಟೂರ್ನಿಯಲ್ಲೂ ಮಂಜ್ರೇಕರ್ ವಿವಾದಗಳಿಂದ ಹೊರತಾಗಿಲ್ಲ. 12ನೇ ಆವೃತ್ತಿ ಐಪಿಎಲ್ ಟೂರ್ನಿ ಫೈನಲ್ ಪಂದ್ಯದಲ್ಲಿ ಮಂಜ್ರೇಕರ್ ಕಮೆಂಟರಿ ಇದೀಗ ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬೆಸ್ಟ್ IPL ಟೀಂ ಪ್ರಕಟಿಸಿದ ಅನಿಲ್ ಕುಂಬ್ಳೆ-ಕೊಹ್ಲಿಗೆ ಕೊಕ್!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಆರಂಭಿಕ ಕ್ವಿಂಟನ್ ಡಿಕಾಕ್ ಬ್ಯಾಟ್ ನಡೆಸುತ್ತಿದ್ದರು. ಈ ವೇಳೆ ಡಿಕಾಕ್ ಅನಗತ್ಯ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕೈಚೆಲ್ಲಿದರು. ಇದರ ವೀಕ್ಷಕ ವಿವರಣೆ ನೀಡುತ್ತಿದ್ದ ಮಂಜ್ರೇಕರ್, ಡಿಕಾಕ್ ಸ್ವೀಪ್ ಶಾಟ್ ಹೊಡೆಯುತ್ತಿದ್ದಂತೆ, ಮಂಜ್ರೇಕರ್ ಮಂಬೈ ಪರ ಕಮೆಂಟರಿ ನೀಡಿದ್ದಾರೆ. ಡಿಕಾಕ್ ಹಾಗೆ ಮಾಡಬೇಡ, ಮಾಡಬೇಡ ಎಂದು ಮಂಜ್ರೇಕರ್ ಮುಂಬೈ ಪರ ವೀಕ್ಷಕ ವಿವರಣೆ ನೀಡಿದ್ದಾರೆ. ಮಂಜ್ರೇಕರ್ ಕಮೆಂಟರಿಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 

 

 

 

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?