ತರುಣ್ ಸುಧೀರ್ ಮದ್ವೇಲಿ ದರ್ಶನ್! ಸೋಷಿಯಲ್ ಮೀಡಿಯಾ ಫೋಟೋ ಅಸಲಿಯತ್ತಿದು!

By Santosh NaikFirst Published Aug 13, 2024, 4:30 PM IST
Highlights

Darshan Thoogudeepa Attend Tharun Sudhir marriage ಸ್ಯಾಂಡಲ್‌ವುಡ್‌ ಸ್ಟಾರ್‌ ಡೈರೆಕ್ಟರ್‌ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮೊಂಥೆರೋ ವಿವಾಹ ಅದ್ದೂರಿಯಾಗಿ ನಡೆದಿದೆ. ಈ ನಡುವೆ ದರ್ಶನ್‌ ಅವರು ಮದುವೆಗೆ ಬಂದಿದ್ದಾರೆ ಎನ್ನುವಂಥ ಪೋಟೋ ವೈರಲ್‌ ಆಗಿದ್ದವು.

ಬೆಂಗಳೂರು (ಆ.13): ಸ್ಯಾಂಡಲ್‌ವುಡ್‌ನ ಸ್ಟಾರ್‌ ಡೈರೆಕ್ಟರ್‌ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮೊಂಥೆರೋ ಅವರ ವಿವಾಹ ಸಮಾರಂಭ ಭಾನುವಾರ ಅದ್ದೂರಿಯಾಗಿ ನೆರವೇರಿದೆ. ಈ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಮದುವೆಗೆ ಗುಟ್ಟಾಗಿ ಭಾಗವಹಿಸಿದ್ದರಾ ಎನ್ನುವ ಅನುಮಾನಗಳು ಬಂದಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ, ದರ್ಶನ್‌, ತರುಣ್‌ ಸುಧೀರ್‌ ಹಾಗೂ ಸೋನಲ್‌ ಮದುವೆಗೆ ಬಂದಿದ್ದರು ಎನ್ನುವಂಥ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ದರ್ಶನ್ ಮದುವೆಗೆ ಬರುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟಿದ್ದರು. ಆದರೆ, ದರ್ಶನ್‌ ತೂಗುದೀಪ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನುವ ಹೇಳಿಕೆ ಹಾಗೂ ಫೋಟೋದಲ್ಲಿ ಯಾವುದೇ ಸತ್ಯಾಂಶವಿಲ್ಲ.  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ನಕಲಿ. ಅದು ಅಭಿಮಾನಿಗಳ ಸೃಷ್ಟಿ. ಸ್ವತಃ ತರುಣ್‌ ಸುಧೀರ್‌ ಅವರೇ, ಮದುವೆಯಲ್ಲ ದರ್ಶನ್‌ ಇಲ್ಲದೇ ಇರುವುದು ತಮಗೆ ತುಂಬಾ ಕಾಡಿತು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ನಟ ಸಿಕ್ಕಿಬೀಳುವ ಮುನ್ನವೇ ದಿನಾಂಕ ನಿಗದಿಯಾಗಿತ್ತು ಎಂದು ತಿಳಿಸಿದ್ದರು.

ಇನ್ನು ತರುಣ್ ಸುಧೀರ್‌ ಜೈಲಿಗೆ ಭೇಟಿ ನೀಡಿ ಅವರಿಗೆ ಮದುವೆ ಆಹ್ವಾನವನ್ನೂ ನೀಡಿದ್ದರು. ಯಾವುದೇ ಕಾರಣಕ್ಕೂ ಮದುವೆಯನ್ನು ಮುಂದೂಡಬೇಡಿ ಮತ್ತು ಜೈಲಿನಿಂದಲೇ ಆಶೀರ್ವಾದ ಮಾಡುವುದಾಗಿ ದರ್ಶನ್ ನಿರ್ದೇಶಕರಿಗೆ ಹೇಳಿದ್ದಾರೆ ಎನ್ನಲಾಗಿದೆ. ತರುಣ್ ಸುಧೀರ್ ಮತ್ತು ಸೋನಾಲ್ ಅವರ ಸಂಬಂಧದಲ್ಲಿ ದರ್ಶನ್ ಪಾತ್ರ ಇರುವುದರಿಂದ ಮದುವೆಗೆ ಹಾಜರಾಗಲು ದರ್ಶನ್ ಅನುಮತಿ ಪಡೆಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.

ಪ್ರೀತಿ ಮತ್ತು ಸಂಪ್ರದಾಯದ ಆಚರಣೆಯಲ್ಲಿ, ಕಾಟೇರ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಾಲ್ ಭಾನುವಾರ ಅದ್ದೂರಿಯಾಗಿ ವಿವಾಹವಾದರು. ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಅರಮನೆಯಲ್ಲಿ ತುಲಾ ಲಗ್ನದ ಶುಭ ಸಂದರ್ಭದಲ್ಲಿ ಬೆಳಿಗ್ಗೆ 10:50 ರಿಂದ 11:35 ರ ನಡುವೆ ವಿವಾಹ ನೆರವೇರಿತು.

ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆಗೆ ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿದ್ದರು. ಶಿವರಾಜಕುಮಾರ್, ರಚಿತಾ ರಾಮ್, ಪ್ರೇಮ್, ಗಣೇಶ್, ಶ್ರುತಿ, ಆಶಿಕಾ ರಂಗನಾಥ್, ನೀನಾಸಂ ಸತೀಶ್, ತಾರಾ, ಮೇಘನಾ ಗಾಂವ್ಕರ್, ಮಾಳವಿಕಾ ಅವಿನಾಶ್, ಸುಧಾರಾಣಿ, ಅಚ್ಯುತ್ ಕುಮಾರ್, ಗಾಯಕ ವಿಜಯ್ ಪ್ರಕಾಶ್, ರಾಕ್‌ಲೈನ್ ವೆಂಕಟೇಶ್ ಮತ್ತು ಬಹುಭಾಷಾ ನಟ ಜಗಪತಿ ಬಾಬು ಸೇರಿದಂತೆ ಪ್ರಮುಖರು ಹಾಜರಿದ್ದರು.

ಕಲ್ಯಾಣ ಮಂಟವನ್ನೂ ಕೂಡ ಬೆರಗುಗೊಳಿಸುವ ಕೆಂಪು ಥೀಮ್‌ನಿಂದ ಅಲಂಕರಿಸಲಾಗಿತ್ತು, ಆರತಕ್ಷತೆಯಲ್ಲಿ ದೋಸೆ, ರಾಗಿ ರೊಟ್ಟಿ, ಜಿಲೇಬಿ, ರಸಮಲೈ, ನೀರ್ ದೋಸೆ ಸೇರಿದಂತೆ 300ಕ್ಕೂ ಹೆಚ್ಚು ಖಾದ್ಯಗಳನ್ನು ಅದ್ದೂರಿಯಾಗಿ ವಿತರಿಸಲಾಗಿದ್ದು, ಇದು ಅತಿಥಿಗಳ ಗಮನ ಸೆಳೆಯಿತು. ತಮ್ಮ ಬಹುಸಂಸ್ಕೃತಿಯ ಆಚರಣೆಯ ಭಾಗವಾಗಿ, ಸೋನಾಲ್ ಮೊಂಥೆರೋ ಮುಂದಿನ ತಿಂಗಳು ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಎರಡನೇ ವಿವಾಹ ಸಮಾರಂಭವನ್ನು ನಡೆಸಲಿದ್ದಾರೆ.

Latest Videos

ತರುಣ್ ಸುಧೀರ್ ಮದುವೆಯಲ್ಲಿ ದರ್ಶನ್‌ ಹಾಡುಗಳು ಅಬ್ಬರ; ಪುನೀತ್‌ ರಾಜ್‌ಕುಮಾರ್‌ ನಮನ ಸಲ್ಲಿಸಿದ ವಿಡಿಯೋ ವೈರಲ್!

ಮದುವೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಮದುವೆ ಮಂಟಪದ ಪ್ರವೇಶ ದ್ವಾರವನ್ನು ವಿಶಿಷ್ಟವಾಗಿ ವಿನ್ಯಾಸ ಮಾಡಲಾಗಿತ್ತು. ಇಡೀ ಈವೆಂಟ್ ಅನ್ನು ಹೊರಾಂಗಣ ಫಿಲ್ಮ್ ಸೆಟ್ ಥೀಮ್‌ನೊಂದಿಗೆ ಪರಿಕಲ್ಪನೆಯಲ್ಲಿ ರಚಿಸಲಾಗಿತ್ತು.ಮದುವೆಯನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗಿದ್ದು, ಅಭಿಮಾನಿಗಳು ಮತ್ತು ಹಿತೈಷಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟರು.

ಬೀಗುತ್ತಿದ್ದ ದರ್ಶನ್‌ ಅಭಿಮಾನಿಗಳಿಗೆ ಉತ್ತರ ಕೊಟ್ಟ 'ಭೀಮಾ'; ಅಖಾಡಕ್ಕೆ ಇಳಿದ ದುನಿಯಾ ವಿಜಯ್!

click me!