Nov 16, 2018, 6:14 PM IST
ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್ಗೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿ ಮಾಡಿದ್ದು, ತ್ವರಿತವಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ. ಈ ಹಿಂದೊಮ್ಮೆ ಡಿಕೆಶಿ ಸ್ಪಷ್ಟೀಕರಣ ನೀಡಿದ್ದರೂ, ಈ ಬಾರಿ ಪ್ರಕರಣದ ಬಗ್ಗೆ ತಿಳಿಸದೇ ಇ.ಡಿ. ಇನ್ನೊಮ್ಮೆ ಸ್ಪಷ್ಟೀಕರಣ ಕೇಳಿರುವುದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಜನಾರ್ದನ ರೆಡ್ಡಿ ಬಂಧನಕ್ಕೆ ಮುಯ್ಯಿ ತೀರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಬಳ್ಳಾರಿ ಸಂಸದ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.