Sep 20, 2018, 1:15 PM IST
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಗಣೇಶ ಮೆರವಣಿಗೆ ವೇಳೆ ಆಜಾನ್ ಮೊಳಗಿದ್ದರಿಂದ ಯುವಕರು ಗಣೇಶ ಮೆರವಣಿಗೆಯನ್ನು ನಿಲ್ಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಆಜಾನ್ ಮೊಳಗುತ್ತಿದ್ದಂತೆ ಮೆರವಣಿಗೆ ನಿಲ್ಲಿಸಿದ ಯುವಕರು ಆಜಾನ್ ನಿಲ್ಲಿಸಿದ ಬಳಿಕ ಮತ್ತೆ ಗಣೇಶ ಮೆರವಣಿಗೆಯನ್ನು ಮುಂದುವರಿಸಿದ್ದಾರೆ.