ಮುನಿಸಿಕೊಂಡಿರುವ ನಾಗೇಂದ್ರ ಒಲಿಸಲು ಡಿಕೆಶಿ ಏನ್ ಪ್ಲಾನ್?

Oct 16, 2018, 7:05 PM IST

ಅಂತೂ ಇಂತೂ ಬಳ್ಳಾರಿ ಉಪಚುನಾವಣಾ ಕಣಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಯೂ ಆಯ್ತು, ನಾಮಪತ್ರ ಸಲ್ಲಿಸಿಯೂ ಆಯ್ತು. ಆದ್ರೆ ಪಕ್ಷದೊಳಗಿನ ಭಿನ್ನಮತ ಇನ್ನೂ ಶಮನಗೊಂಡಿಲ್ಲ ಎಂದೇ ಹೇಳಬಹುದು. ಶಾಸಕ ಬಿ. ನಾಗೇಂದ್ರ ತನ್ನ ಸಹೋದರನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಮುನಿಸಿಕೊಂಡಿದ್ದಾರೆ. ಲೋಕಸಭಾ ಸೀಟು ಗೆಲ್ಲಲು ಸ್ಥಳೀಯ ಶಾಸಕರ ಬೆಂಬಲ ಅತ್ಯಗತ್ಯ. ನಾಗೇಂದ್ರರನ್ನು ಒಲಿಸಲು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಒಂದು ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ವಿವರ