‘ಶಿವಮೊಗ್ಗ ಗೆದ್ದಾಗಿದೆ, ಬಳ್ಳಾರಿಯೂ ಗೆದ್ದಾಗಿದೆ, ಮಂಡ್ಯವೂ ನಮ್ಮದೇ’

Oct 16, 2018, 7:48 PM IST

ಮಂಡ್ಯ ಲೋಕಸಭಾ ಉಪ-ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯು ಗೆಲ್ಲುವುದು ಖಂಡಿತ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ, ಮಂಡ್ಯ ಮತ್ತು ಬಳ್ಳಾರಿಯಲ್ಲಿ ಕಾಂಗ್ರೆಸ್ ಬಳಿ ಕಣಕ್ಕಿಳಿಸಲು ಅಭ್ಯರ್ಥಿಗಳೇ ಇರಲಿಲ್ಲ, ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ನಾವು ಈಗಾಗಲೇ ಗೆದ್ದಿದ್ದೇವೆ, ಮಂಡ್ಯದಲ್ಲೂ ಗೆಲುವು ಖಚಿತವೆಂದು ಅವರು ಹೇಳಿದ್ದಾರೆ.