ದೇವೇಗೌಡರ ಕುಟುಂಬ ಎಂದರೆ ಭಸ್ಮಾಸುರನ ಕತೆ!

Sep 21, 2018, 8:07 PM IST

ಸಿಎಂ ಕುಮಾರಸ್ವಾಮಿ ಮೇಲೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ. ನಿಮ್ಮ ಶಾಸಕರ ಮೇಲೆಯೇ ನಿಮಗೆ ನಂಬಿಕೆ ಇಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ. ದೇವೇಗೌಡರ ಕುಟುಂಬ ಅಂದರೆ ಅದು ಮೋಹಿನಿ-ಭಸ್ಮಾಸುರನ ಕತೆ ಇದ್ದ ಹಾಗೆ. ಬೇರೆಯವರ ತಲೆ ಮೇಲೆ ಕೈ ಇಟ್ಟು ನಂತರ ನಿಮ್ಮ ತಲೆ ಮೇಲೆ ಕೈ ಇಟ್ಟುಕೊಂಡು ಭಸ್ಮವಾಗಿ ಹೋಗ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.