ಸುವರ್ಣ ಸಂಕಲ್ಪ: ಕೊಡಗಿಗೆ ಹರಿದು ಬಂತು ಕೇಂದ್ರಕ್ಕಿಂತಲೂ ಅಧಿಕ ಪರಿಹಾರ

Aug 25, 2018, 4:12 PM IST

ಕೊಡಗು ಸಂತ್ರಸ್ತರ ನೆರವಿಗೆ ಕರೆ ನೀಡಿದ್ದ ಸುವರ್ಣ ವಾಹಿನಿಗೆ ಕನ್ನಡಿಗರು ಅಭೂತಪೂರ್ವವಾಗಿ ಸ್ಪಂದಿಸಿದ್ದು ಗೊತ್ತೆ ಇದೆ. ಕೊಡಗು ಮರು ನಿರ್ಮಾಣಕ್ಕೆ ಕೈ ಜೋಡಿಸಲು ಕರೆ ನೀಡಿದ್ದ ತಕ್ಷಣವೇ ಪರಿಹಾರ ಸಾಮಗ್ರಿಗಳು ಪ್ರವಾಹದ ರೀತಿಯಲ್ಲೇ ಹರಿದು ಬಂದವು. 37 ಟ್ರಕ್ ಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ವಾಹಿನಿ ಕೊಡಗಿಗೆ ಕಳುಹಿಸಿಕೊಟ್ಟಿತು. ಒಂದು ಸರಕಾರಗಳಿ ನೀಡುವುದಕ್ಕಿಂತಲೂ ಅಧಿಕ ಮೊತ್ತದ ಹಣ ಪರಿಹಾರದ ರೂಪದಲ್ಲಿ ಹರಿದು ಬಂತು 10 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ಹರಿದು ಬಂದಿದ್ದು ಕನ್ನಡಿಗರಿಗೆ ಮತ್ತೊಮ್ಮೆ ಧನ್ಯವಾದ ಹೇಳಲೇಬೇಕು.