ಒಂದೆಡೆ ಇಡಿ ಸಂಕಟ, ಸಚಿವ ಡಿಕೆಶಿ ಆರೋಗ್ಯದಲ್ಲಿ ಏರುಪೇರು

Sep 18, 2018, 2:56 PM IST

ಒಂದು ಕಡೆ ಬಂಧನ ಭೀತಿ ಎದುರಿಸುತ್ತಿರುವ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್  ಆರೋಗ್ಯದಲ್ಲಿ ಏರುಪೇರಾಗಿದೆ. ಕನಕಪುರದ ಮನೆಯಲ್ಲಿ ಡಿಕೆಶಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕನಕಪುರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಡಿಕೆಶಿ ಹಾಜರಾಗಬೇಕಿತ್ತು. ಆದರೆ ಆಹಾರದಲ್ಲಿ ವ್ಯತ್ಯಾಸದಿಂದ ಡಿಕೆಶಿ ಆರೋಗ್ಯದಲ್ಲಿ ಏರುಪೇರಾಗಿದೆ.