ಗಂಡನಿಗೆ ಅನೈತಿಕ ಸಂಬಂಧದ ವಿಚಾರ ತಿಳಿಯುತ್ತಿದ್ದಂತೆ ಪ್ರಿಯರನೊಂದಿಗೆ ಸೇರಿ ಗಂಡನನ್ನೇ ಹತ್ಯೆ ಮಾಡಿದ ಮಹಿಳೆಯನ್ನು ಬೆಂಗಳೂರಿನ ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಅನೈತಿಕ ಸಂಬಂಧ ಪತಿಗೆ ತಿಳಿಯಿತು ಎಂಬ ಕಾರಣಕ್ಕೆ ಪ್ರಿಯರಕನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ್ದ ಪ್ರಕರಣ ಬೇಧಿಸಿರುವ ಯಲಹಂಕ ಉಪನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೆ.18 ರಂದು ಆರೋಪಿಗಳು ಸಗಾಯ್ ರಾಜ್ ( 30) ಎಂಬುವರನ್ನು ಹತ್ಯೆ ಮಾಡಿದ್ದರು. ಈ ಸಂಬಂಧ ಮೃತನ ಪತ್ನಿ ಯಲಹಂಕದ ವೀರಸಾಗರ ಗ್ರಾಮದ ಮಮತಾ (23) ಹಾಗೂ ಈಕೆಯ ಪ್ರಿಯಕರ ಯಲಹಂಕದ ಅಪ್ಪು ಅಲಿಯಾಸ್ ಸುಬ್ರಮಣಿ (24) ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೂಲತಃ ತಮಿಳುನಾಡಿನ ಸಗಾಯ್ ಪೋಷಕರು ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ನಿರ್ಮಾಣ ಹಂತದ ಕಟ್ಟಡ ಕಾರ್ಮಿಕರಾಗಿದ್ದ ಸಗಾಯ್ 5 ವರ್ಷಗಳ ಹಿಂದೆ ಮಮತಾಳನ್ನು ವಿವಾಹವಾಗಿದ್ದರು. ವಿವಾಹವಾಗಿ ಹಲವು ವರ್ಷ ಕಳೆದರೂ ದಂಪತಿಗೆ ಮಕ್ಕಳಿರಲಿಲ್ಲ.
ಮಮತಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ಆರೋಪಿ ಅಪ್ಪು ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದ. ಮಮತಾ, ಸಗಾಯ್ರನ್ನು ವಿವಾಹವಾಗುವ ಮುನ್ನ ಏಳೇಂಟು ವರ್ಷಗಳ ಹಿಂದೆ ಅಪ್ಪು ಅಲಿ ಯಾಸ್ ಸುಬ್ರಮಣಿಯನ್ನು ಪ್ರೀತಿಸುತ್ತಿದ್ದರು. ಅಲ್ಲದೆ, ಅಪ್ಪುಗೆ ಈಗಾಗಲೇ ವಿವಾಹ ವಾಗಿ ಮಗು ಇದ್ದ ಕಾರಣ ಮಗಳ ಪ್ರೀತಿಗೆ ಮಮತಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಪುತ್ರಿಗೆ ತಿಳಿ ಹೇಳಿದ್ದ ಪೋಷಕರು ಪ್ರೀತಿಯ ವಿಚಾರ ಮುಚ್ಚಿಟ್ಟು ಸಗಾಯ್ ಜತೆ ವಿವಾಹ ಮಾಡಿಕೊಟ್ಟಿದ್ದರು.
ವಿವಾಹವಾದ ಬಳಿ ಕೂಡ ಮಮತಾ, ಪ್ರಿಯಕರ ಅಪ್ಪುವಿನೊಂದಿಗೆ ಅನೈತಿಕ ಸಂಬಂಧ ಮುಂದುವರಿಸಿದ್ದಳು. ಇತ್ತೀಚೆಗೆ ಪತ್ನಿ ಬೇರೊ ಬ್ಬನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಸಗಾಯ್ ಗೊತ್ತಾಗಿತ್ತು. ಇದೇ ವಿಚಾರಕ್ಕೆ ದಂಪತಿ ನಡುವೆ ನಿತ್ಯ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಮಮತಾ, ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಲು ಸಂಚು ರೂಪಿಸಿದ್ದಳು.
ಸೆ. 18ರಂದು ರಾತ್ರಿ ಸಗಾಯ್ ಕೆಲಸ ಮುಗಿಸಿ ಕೊಂಡು ಮನೆಗೆ ಬಂದಿದ್ದರು. ಈ ವೇಳೆ ಪತ್ನಿ, ಪತಿ ಗೆ ಕಂಠಪೂರ್ತಿ ಮದ್ಯ ಕುಡಿಸಿ ಪ್ರಜ್ಞೆ ತಪ್ಪುವಂತೆ ನೋಡಿಕೊಂಡಿದ್ದಳು. ನಂತರ ಮೊದಲೇ ಸಂಚು ರೂಪಿಸಿದಂತೆ ಪ್ರಿಯಕರನಿಗೆ ಕರೆ ಮಾಡಿ ಪತಿ ಪ್ರಜ್ಞೆ ತಪ್ಪಿರುವುದಾಗಿ ಹೇಳುತ್ತಾಳೆ. ಆರೋಪಿ ಅಪ್ಪು ಕೂಡಲೇ ಸ್ನೇಹಿತನ ಕಾರು ಪಡೆದು ತಡರಾತ್ರಿ ಮನೆ ಬಳಿ ಬಂದಿದ್ದ. ಅಪ್ಪು, ಮಮತಾಳ ಸಹಾಯ ದೊಂದಿಗೆ ಕಾರಿನಲ್ಲಿ ಕೂರಿಸಿಕೊಂಡು ಎಲ್ಲೆಡೆ ಸುತ್ತಾಡಿಸಿದ್ದರು.
ಬಳಿಕ ಸಂಭ್ರಮ್ ಕಾಲೇಜು ಬಳಿ ಇರುವ ಅಂಭ ಭವಾನಿ ದೇವಸ್ಥಾನ ಸಮೀಪ ನಿರ್ಮಾಣ ಹಂತದ ಬಿಲ್ಡಿಂಗ್ ಸಮೀಪ ಮಮತಾಳ ವೇಲ್ ಬಟ್ಟೆಯಿಂದ ಆತನ ಕುತ್ತಿಗೆ ಬಿಗಿದು ಹತ್ಯೆಗೈ ದಿದ್ದರು. ಮೃತ ದೇಹವನ್ನು ಮನೆಯ ಸಮೀಪದ ರಸ್ತೆಯ ಪಕ್ಕ ಬಿಸಾಡಿದ್ದರು.