
ಯಾಕೋ ಕೈಯಲ್ಲಿ ದುಡ್ಡೇ ಉಳಿಯೋಲ್ಲ. ಇದು ಎಲ್ಲರೂ ಹೇಳೋ ಸಾಮಾನ್ಯವಾದ ಮಾತು. ಆದರೆ, ದುಡ್ಡನ್ನು ಸರಿಯಾದ ಯೋಜನೆ ಮಾಡಿ ಖರ್ಚು ಮಾಡಿದರೆ, ಜೀವನದಲ್ಲಿ ಅಂದು ಕೊಂಡಿದ್ದನ್ನು ಸಾಧಿಸಬಹುದು. ಇಲ್ಲಿದೆ ಹಣ ಉಳಿಸಲು ಕೆಲವು ಟಿಪ್ಸ್...
- ಸಾಧ್ಯವಾದಷ್ಟು ಸಾಲ ಮಾಡಿ ಆಸ್ತಿ ಕೊಳ್ಳುವುದನ್ನು ನಿಲ್ಲಿಸಿ. ಸಾಲ ಮಾಡಿದರೂ ಸೂಕ್ತವಾಗಿ ತೀರಿಸುವಷ್ಟು ನಿಮ್ಮ ಆದಾಯವಿರುವಂತೆ ನೋಡಿಕೊಳ್ಳಿ. ಹಣದ ಹರಿವು ಹೇಗಿದೆ ನೋಡಿಕೊಳ್ಳಿ. ಆಸ್ತಿ ಕೊಂಡರೂ, ಅದಕ್ಕಿಂತ ಹೆಚ್ಚಿನ ಮೌಲ್ಯದ ಸಾಲ ನಿಮ್ಮದಾಗಬಾರದು.
- ಶೇ.15-20ರಷ್ಟು ಆದಾಯವನ್ನು ಮೊದಲ ವೇತನಿದಿಂದಲೇ ಉಳಿಸಲು ಯತ್ನಿಸಿ.
- ದಿನಾ ಬಳಸೋಲ್ಲವೆಂದರೆ ಕಾರನ್ನು ಕೊಳ್ಳಲು ಹೋಗಬೇಡಿ.
- ಮ್ಯೂಚುಯಲ್ ಫಂಡ್ ಮೇಲೆ ಹೂಡಿಕೆ ಮಾಡುವಾಗ ಮಾರುಕಟ್ಟೆ ರಿಸ್ಕ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.
- ಮದುವೆ, ಮುಂಜಿಯಂಥ ಕಾರ್ಯಕ್ರಮಗಳನ್ನು ಆದಷ್ಟು ಸರಳವಾಗಿ ಮಾಡಿ.
- ನಿಮ್ಮ ಆಸ್ತಿಯ ಶೇ.20ರಷ್ಟು ಭಾಗವನ್ನು ಅಗತ್ಯ ಬಿದ್ದಾಗ ಬಳಸುವಂತಿರಬೇಕು.
- ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡರೆ ಬ್ಯಾಂಕಿನಲ್ಲಿ ಠೇವಣಿ ಇಡುವುದು ವೇಸ್ಟ್. ಸೇವಿಂಗ್ಸ್ ಬ್ಯಾಂಕ್ ಅಕೌಂಟ್ನಲ್ಲಿ ದೊಡ್ಡ ಮೊತ್ತದ ಠೇವಣಿ ಇಡಬೇಡಿ.
- ಷೇರಿನ ಮೇಲೆ ಬಂಡವಾಳ ಹೂಡುವುದಾದರೆ, ಮಾರಕಟ್ಟೆ ಮೇಲೆ ಹದ್ದಿನ ಕಣ್ಣಿಡಬೇಕು.
- ಷೇರಿನ ಮೇಲೆ ಹೂಡಿಕೆ ಮಾಡಿದ್ದರೆ, ಅದಕ್ಕಾಗಿಯೇ ಬೇರೆ ಖಾತೆಯನ್ನು ನಿರ್ವಹಿಸಿ. ಇದರಿಂದ ನೀವು ಮಾಡಿರುವ ವೆಚ್ಚ ಮತ್ತು ಲಾಭದ ಮೇಲೆ ಸ್ಪಷ್ಟ ಲೆಖ್ಖ ಸಿಗುತ್ತದೆ.
- ಕಾರು ಅಥವಾ ಮನೆ ಯಾವತ್ತೂ ಮನುಷ್ಯನನ್ನು ಶ್ರೀಮಂತಗೊಳಿಸುವುದಿಲ್ಲ. ಆದರೆ, ಏನು ಉಳಿಸಿದರೆ, ಎಲ್ಲಿ ಹೂಡಿಕೆ ಮಾಡಿದ್ದೀರಿ ಎಂಬುವುದು ಮುಖ್ಯ.
- ಹೂಡಿಕೆಗೆ ವಿಮೆ ಒಳ್ಳೆಯ ಆಯ್ಕೆಯಲ್ಲ. ಇದು ರಿಸ್ಕ್ ಮ್ಯಾನೇಜ್ಮೆಂಟ್ ಟೂಲ್ ಅಷ್ಟೆ.
- ಕ್ರೆಡಿಟ್ ಕಾರ್ಡ್ ಅನ್ನು ಅನಗತ್ಯವಾಗಿ ಬಳಸಬೇಡಿ. ಅಗತ್ಯಕ್ಕೆ ತಕ್ಕಂತೆ ಇದನ್ನು ಬಳಸಬೇಕೇ ಹೊರತು, ಆಸೆಗಳನ್ನು ಪೂರೈಸಿಕೊಳ್ಳಲು ಉಪಯೋಗಿಸಬಾರದು.
- ಸಾಯೋ ಮುಂಚೆ ಎಲ್ಲ ಕ್ರೆಡಿಟ್ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಿ. ಅಥವಾ ನಿಮ್ಮ ಕುಟುಂಬಕ್ಕೆ ಖಾತೆ, ಕ್ರೆಡಿಟ್ ಕಾರ್ಡ್ಸ್, ಸಾಲ, ಉಳಿತಾಯ ಎಲ್ಲ ವಿವರಗಳು ಗೊತ್ತಿರಲಿ.
- ನಿಮ್ಮ ಮೇಲೆ ಮೊದಲು ಹೂಡಿಕೆ ಮಾಡಿಕೊಳ್ಳಿ, ನಂತರ ಉಳಿದರ ಮೇಲೆ ಹೂಡಲು ಚಿಂತಿಸಿ.
- ಆದಾಯ ಹಾಗೂ ಉಳಿತಾಯ ಸೂಕ್ತವಾಗಿರುವಂತೆ ನೋಡಿಕೊಳ್ಳಿ. ಸುಮ್ ಸುಮ್ಮನೆ ಸಾಲ ಮಾಡಬೇಡಿ. ತೀರಿಸಿಕೊಳ್ಳುವುದಾದರೆ ಮಾತ್ರ ಸಾಲ ಮಾಡಿ.
- ಭವಿಷ್ಯಕ್ಕೆಂದು ಸದಾ ಒಂದಿಷ್ಟು ಉಳಿತಾಯವಿರಲಿ.
- ತುರ್ತು ಕಾಲಕ್ಕೆ ಬಳಸಲು ಒಂದಿಷ್ಟು ಹಣವಿರಲಿ.
- ವೈಯಕ್ತಿಕ ಜೀವನ ಮತ್ತು ಆರೋಗ್ಯ ಜೀವನದ ಮುಖ್ಯ ಹೂಡಿಕೆಗಳು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಫಿಟ್ ಆಗಿರಲು ವರ್ಕ್ಔಟ್ ಮಾಡಿ.
- ಸಾವಿನ ಮೇಲೆ ಯಾರಿಗೂ ಇರೋಲ್ಲ ಹಿಡಿತ. ಅದ್ಯಾವಾಗ ಬರುತ್ತೋ, ಸದಾ ಸನ್ನದ್ಧರಾಗಿರಿ. ನಿಮ್ಮ ಅವಲಂಬಿತರಿಗೆಂದು ವಿಮೆ ಮಾಡಿಸಿಡಿ
- ಉಯಿಲು ಬರೆದಿಡಿ. ಇದು ಅನಗತ್ಯ ಗೊಂದಲವನ್ನು ಬಗೆಹರಿಸಲು ಸಹಕರಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.