ಪ್ರತ್ಯಕ್ಷದರ್ಶಿ ಹೇಳಿದ ಸೂರ್ಯ ಕಿರಣ್ ದುರಂತದ ಕಥೆ

Feb 20, 2019, 3:44 PM IST

ಮಂಗಳವಾರ ಏರೋ ಶೋಗೆ ತಾಲೀಮು ನಡೆಸುತ್ತಿದ್ದ ಸೂರ್ಯ ಕಿರಣ್ ವಿಮಾನಗಳ ದುರಂತಕ್ಕೆ ಸಂಬಂಧಿಸಿದಂತೆ ವಾಯುಸೇನೆ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ವಿಮಾನ ನೆಲಕಪ್ಪಳಿಸಿರುವ ಸ್ಥಳವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿರುವ ಅಧಿಕಾರಿಗಳು, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ.  ಇದೇ ವೇಳೆ, ಪ್ರತ್ಯಕ್ಷದರ್ಶಿಯೊಬ್ಬರು ಸುವರ್ಣನ್ಯೂಸ್ ಜೊತೆ ಇಡೀ ಘಟನೆಯನ್ನು ಹಂಚಿಕೊಂಡಿದ್ದಾರೆ.