ಬಾಹುಬಲಿಗೆ ಮಹಾಮಜ್ಜನ ಸಂಭ್ರಮ

Feb 17, 2019, 11:08 AM IST

ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ನೆಲೆನಿಂತಿರುವ ವಿರಾಗಿಗೆ ಮಹಾಮಜ್ಜನದ ವೈಭವ ಶುರುವಾಗಿದೆ. ಅಹಿಂಸೆಯ ಪ್ರತಿಮೂರ್ತಿ, ತ್ಯಾಗಮೂರ್ತಿಗೆ 12 ವರ್ಷಕ್ಕೊಮ್ಮೆ ಮಹಾಮಜ್ಜನ ಮಾಡಲಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಕುಟುಂಬಸ್ಥರ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ. ಈ ವೈಭವದ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಿದ್ದಾರೆ.