ಸಾಗರದಲ್ಲಿ ಸಿಲಿಂಡರ್ ಲಾರಿ ಸ್ಫೋಟ: ಚಾಲಕ ಸಜೀವ ದಹನ

Nov 15, 2018, 11:56 AM IST

ಸಾಗರ[ನ.15]: ಸಿಲಿಂಡರ್ ತುಂಬಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಿಲಿಂಡರ್’ಗಳು ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಸಜೀವ ದಹನವಾದಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಇರುವ ಮುಂಡಿಗೆ ಹಳ್ಳ ಎಂಬಲ್ಲಿ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಈ ಅವಘಡ ಸಂಭವಿಸಿದ್ದು, ಶಿವಮೊಗ್ಗದಿಂದ ಹೊನ್ನಾವರ ಕಡೆ ಸಾಗುತ್ತಿದ್ದ ಲಾರಿಯು ವಿಧ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇಂಡಿಯನ್ ಗ್ಯಾಸ್ ಕಂಪನಿಗೆ ಸೇರಿದ ಲಾರಿ ಹೊತ್ತಿ ಉರಿದಿದ್ದು, ಭದ್ರಾವತಿ ಮೂಲಕ ಚಾಲಕ ಕೃಷ್ಣಮೂರ್ತಿ ಸಜೀವ ದಹನವಾಗಿದ್ದಾರೆ. ಸ್ಫೋಟದಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.