ಕೊಡಗಿನ ಜನತೆಯ ನೆರವಿಗೆ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ!

Sep 1, 2018, 8:24 PM IST

ಬೆಂಗಳೂರು(ಸೆ.1): ಪ್ರವಾಹಕ್ಕೆ ತತ್ತರಿಸಿರೋ ಕೊಡಗಿನ ಒಂದು ಗ್ರಾಮವನ್ನು ದತ್ತು ಪಡೆಯಲಾಗಿದೆ. ಈ ಮಹತ್ದವ ಕಾರ್ಯವನ್ನು ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಎತ್ತಿಕೊಂಡಿದ್ದು, ಗ್ರಾಮವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಅಲ್ದೇ ಸರ್ಕಾರ ಯಾವುದೇ ಗ್ರಾಮ ದತ್ತು ಕೊಟ್ಟರೂ ಅಭಿವೃದ್ಧಿ ಪಡಿಸಲು ಮಹಾಸಭಾ ಸಿದ್ಧವಿದೆ ಎಂದು ಸಭಾದ ಅಧ್ಯಕ್ಷ ಆರ್.ವಿ.ಶಂಕರ್ ತಿಳಿಸಿದ್ದಾರೆ.

ಸಾವಿರಾರು ಜನ ಮನೆ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಹಾಯ ಹಸ್ತ ನೀಡಲು ಮುಂದಾಗಿದ್ದೇವೆ. ಆರು ತಿಂಗಳ ಕಾಲ ಸುಮಾರು 2 ಕೋಟಿ ವೆಚ್ಚದಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ನಿರ್ಧರಿಸಲಾಗಿದೆ. 

ಶಾಲಾ ಕಟ್ಟಡ , ಆಸ್ಪತ್ರೆ ದುರಸ್ಥಿ, ಶೌಚಾಲಯಗಳ ಅಭಿವೃದ್ಧಿ, ಜಾನುವಾರಗಳ ತಪಾಸಣೆ ಕೇಂದ್ರ ತೆರೆಯುವುದು ಮತ್ತು ಅಲ್ಲಿನ ನಿವಾಸಿಗಳಿಗೆ ಅಗತ್ಯವಾದ ಸಾಮಾಗ್ರಿ ಪೂರೈಸಲಾಗುವುದು ಎಂದು ಹೇಳಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..