ಜಲಪ್ರಳಯಕ್ಕೆ ಎದೆಯೊಡ್ಡಿರುವ ಕೊಡಗಿನ ವೀರರು!

Aug 18, 2018, 6:39 PM IST

ಮಡಿಕೇರಿ(ಆ.18): ಅತ್ತ ಕೇರಳದಲ್ಲಿ ಜಲಪ್ರಳಯಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಇತ್ತ ಮಂಜಿನ ನಗರಿ ಕೊಡಗಿನಲ್ಲೂ ವರುಣ ದೇವ ಅಬ್ಬರಿಸುತ್ತಿದ್ದಾನೆ. ಭೀಕರ ಮಳೆಗೆ ಕೊಡಗು ತತ್ತರಿಸಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮ ಸುವರ್ಣನ್ಯೂಸ್ ‘ಕೊಡಗಿನೊಂದಿಗೆ ಕರುನಾಡು’ ಅಭಿಯಾನ ಆರಂಭಿಸಿದೆ. ಕೊಡಗಿನ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸುವ ಜವಾಬ್ದಾರಿ ಹೊತ್ತುಕೊಂಡಿದೆ.

ಈ ಮಧ್ಯೆ ಪ್ರವಾಹ ಪಿಡೀತ ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಪರದಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..