Feb 20, 2019, 5:42 PM IST
ಒಂದು ಕಡೆ ಕಬ್ಬು ಬೆಳೆಗಾರರಿಗೆ ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಮಾಲಕ, ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇನ್ನೊಂದು ಕಡೆ ತಮ್ಮ ಮಗಳ ಮದುವೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಗೋಕಾಕ್ ‘ಸಾಹುಕಾರ’ರ ‘ಹಣಕಾಸು ನೀತಿ’ ಸಹಜವಾಗಿ ರೈತರನ್ನು ಕೆರಳಿಸಿದೆ. ರೈತರು ಬೀದಿಗಿಳಿದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.