ಚಿಂತಾಮಣಿ ವಿಷ ಪ್ರಸಾದ: ಅರ್ಚಕ, ಟ್ರಸ್ಟಿ ಪೊಲೀಸರ ವಶಕ್ಕೆ

Jan 26, 2019, 4:09 PM IST

ಚಾಮರಾಜನಗರದ ‘ವಿಷ ಪ್ರಸಾದ’ ಘಟನೆಯ ನೆನಪು ಇನ್ನೂ ಹಸಿ ಹಸಿಯಾಗಿರುವಾಗಲೇ, ಮತ್ತೊಂದು ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ.  ಚಿಕ್ಕಬಳ್ಳಾಪುರ ಚಿಂತಾಮಣಿ ನಗರದ ನರಸಿಂಹ ಪೇಟೆಯಲ್ಲಿರುವ ಗಂಗಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿದರೆ ಐವರ ಸ್ಥಿತಿ ಗಂಭೀರವಾಗಿದೆ. ದೇವಸ್ಥಾನದ ಅರ್ಚಕ ಮತ್ತು ಟ್ರಸ್ಟಿಯನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ.