Chikkamagaluru: ಎಲ್ಲ ಹೂವಿನಂತಲ್ಲ ಮಲೆನಾಡಿನ ಕಾಡುಮಲ್ಲಿಗೆ ಸೊಬಗು

Published : Dec 11, 2022, 05:44 PM ISTUpdated : Dec 11, 2022, 05:47 PM IST
Chikkamagaluru: ಎಲ್ಲ ಹೂವಿನಂತಲ್ಲ ಮಲೆನಾಡಿನ ಕಾಡುಮಲ್ಲಿಗೆ ಸೊಬಗು

ಸಾರಾಂಶ

ಕಾಡು ಮಲ್ಲಿಗೆ ದಟ್ಟವಾಗಿ ಬೆಳೆದರೂ ಪೂಜೆಗೂ ಬಳಸೋಲ್ಲ,  ಹೆಣ್ಣುಮಕ್ಕಳು ಮುಡಿಯೊಲ್ಲ  ಮಲೆನಾಡಿನ ಕಾಡುಮಲ್ಲಿಗೆ ನಿತ್ಯ ಬಳಕೆಯ ಪುಪ್ಪಗಳಂತಲ್ಲ ಯಾವುದೇ ಅಲಂಕಾರಕ್ಕೆ ಬಳಸೋಲ್ಲ , ಬೆಳಗ್ಗೆ ಅರಳಿ ಸಂಜೆ ಬಾಡೋ ಮಲ್ಲಿಗೆ ಕಾಡುಮಲ್ಲಿಗೆಯ ಜೀವಿತಾವಧಿ ಒಂದೇ ಒಂದು ದಿನಮಾತ್ರ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಡಿ.11) : ಕಾಫಿನಾಡನ್ನು ಭೂಲೋಕದ ತೋಟವೆಂದರೆ ತಪ್ಪಲ್ಲ. ನಯನ ಮನೋಹರವಾದ ಈ ತೋಟದಲ್ಲಿ ಕಣ್ಣಿಗೆ ಕಂಡಿದ್ದೆಲ್ಲವೂ ಸುಂದರ. ಇವುಗಳಲ್ಲಿ ಕಾಡುಮಲ್ಲಿಗೆಯೂ ಒಂದಾಗಿದೆ. 

ಕಾಫಿನಾಡಿನಲ್ಲಿ ಚಳಿಗಾಲದ ವಿಶೇಷ ಅತಿಥಿ ಅಂದರೆ ಅದುವೇ ಕಾಡುಮಲ್ಲಿಗೆ. ಇತರೆ ಪುಷ್ಪಗಳಿಗಿಂತ ತಾನೇನೂ ಕಮ್ಮಿಯಿಲ್ಲವೆಂಬಂತೆ ಇದು ಕೂಡ ತನ್ನ ಸೊಬಗಿನ ಸುವಾಸನೆಯನ್ನ ಸೂಸುತ್ತದೆ. ಅದರಲ್ಲಿಯೂ ಕೆರೆ-ಹಳ್ಳದ ಅಕ್ಕ ಪಕ್ಕ ಮುಗಿಲೆತ್ತರಕ್ಕೆ ಬೆಳೆದು ನಿಂತ ಈ ಕಾಡುಮಲ್ಲಿಗೆಯ ಹೂವಿನ ರಾಶಿ ನೋಡಲು ಮನಸಿಗೆ ಮುದ ನೀಡುತ್ತೆ. ಕಾಡು ಮಲ್ಲಿಗೆಯ ರಾಶಿ ರಾಶಿ ಹೂಗಳು ತೋಟಗಳಲ್ಲಿ ಅರಳಿದ ಪುಷ್ಪಲತೆಗಳಿಗಿಂತ ಭಿನ್ನ ವಿಭಿನ್ನ. ಹಾಲಿನ ನೊರೆಯಂತೆ ಹೊಳೆಯುವ ಈ ಹೂವು ವರ್ಷದ ಒಂದು ತಿಂಗಳು ಮಾತ್ರ ಕಾಣಲು ಸಾಧ್ಯ. 

ಚಳಿಗಾಲದಲ್ಲಿ ಮಾತ್ರ ಅರಳುವ ಹೂವು: ಹೂವೆಂದರೆ ಸೌಂದರ್ಯದ ಕಲಶವಿದ್ದಂತೆ. ಭೇದ-ಭಾವವಿಲ್ಲದ ಸುಂದರ ಲತೆಯಲ್ಲಿ ಸೌಂದರ್ಯ ಮನೆಮಾಡಿರುತ್ತೆ. ಯಾವುದೇ ಹೂವಾದರೂ ತನ್ನ ವಿಭಿನ್ನವಾದ ಸುಂದರ ತಂಪು-ಕಂಪಿನಿಂದ ವಿಶೇಷತೆ ಗಳಿಸಿರುತ್ತೆ. ದಿನಂಪ್ರತಿ ನೀರಾಯಿಸಿ ಪೋಷಿಸೋ ಹೂವಿಗಿಂತ ಈ ಕಾಡುಮಲ್ಲಿಗೆ ಸುಂದರ ಅಂದ್ರೆ ತಪ್ಪಿಲ್ಲ. ಮಲೆನಾಡಿನ ದಟ್ಟಾರಣ್ಯದಲ್ಲಿ ಸಿಗೋ ಈ ಬಿಳಿಯ ಕಾಡುಮಲ್ಲಿಗೆ ಚಳಿಗಾಲದಲ್ಲಿ ಮಾತ್ರ ಅರಳಿ ಜನರನ್ನು ಆಕರ್ಷಿಸುತ್ತೆ. ಕಾಫಿ ತೋಟಗಳ ನಡುವೆ ಅರಳೋ ಈ ಕಾಡುಮಲ್ಲಿಗೆ ಎಲ್ಲಾ ಋತುವಿನಲ್ಲೂ ಅರಳೋಲ್ಲ. ಡಿಸೆಂಬರ್ ತಿಂಗಳಲ್ಲಿ ಮಾತ್ರ ಇದರ ಜನನ. ಪ್ರವಾಸಿಗರಿಗೆ, ದಾರಿಹೋಕರಿಗೆ, ಸೌಂದರ್ಯ ಪ್ರಿಯರ ಮನಸ್ಸಿಗೆ ಈ ಕಾಡುಮಲ್ಲಿಗೆ ಮುದ ನೀಡುತ್ತೆ. ಈ ಹೂವನ್ನ ಮದ್ರಾಸಿ ಹೂವು ಅಂತಲೂ ಕೆಲವರು ಕರೆಯುತ್ತಾರೆ.

Chikkamagaluru: ಹಸಿರು ಪರ್ವತಕ್ಕೆ ನೀಲಿ ಹೊದಿಕೆ; ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿದ ಕುರಂಜಿ ಹೂ

ಒಂದು ದಿನ ಮಾತ್ರ ಜೀವಿತಾವಧಿ: ಚಿಕ್ಕಮಗಳೂರಿನ ಹಿರೇಕೊಳಲೆ, ಕೈಮರ, ಮಲ್ಲೇನಹಳ್ಳಿ ಭಾಗದಲ್ಲಿ ಯತ್ತೆಚ್ಚವಾಗಿ ಕಾಣಲಿರೋ ಈ ಕಾಡುಮಲ್ಲಿಗೆ ಹಾಲ್ನೋರೆಯ ಬೆಳ್ಳನೆ ರಾಶಿಯಂತಿದೆ. ಈ ಹೂ ಮಲ್ಲಿಗೆಯಂತೆ ಕಂಡ ಬಂದ್ರೂ ಕೂಡ ಇದು ಮಲ್ಲಿಗೆಯಲ್ಲ. ಸಾವಿರಾರು ಸಂಖ್ಯೆಯಲ್ಲಿ ದಟ್ಟವಾಗಿ ಬೆಳೆದು ನಿಂತಿದ್ರೂ ಪೂಜೆಗೂ ಬಳಸೋಲ್ಲ. ರಸ್ತೆಬದಿಯಲ್ಲಿ ಅಲ್ಲಲ್ಲೇ ಸಾಲಾಗಿ ಅರಳಿ ನಿಂತು ಕಣ್ಣು ಹಾಯಿಸಿದಲ್ಲೆಲ್ಲಾ ಬಿಳಿಯ ಬಣ್ಣ ಚೆಲ್ಲಿದಂತ್ತಿದೆ. ಈ ಕಾಡು ಮಲ್ಲಿಗೆ ನಿತ್ಯ ಬಳಕೆಯ ಪುಪ್ಪಗಳಂತಲ್ಲ. ಈ ಹೂವನ್ನು ಯಾವುದೇ ಅಲಂಕಾರಕ್ಕೆ ಬಳಸೋಲ್ಲ. ಹೆಣ್ಣುಮಕ್ಕಳು ಮುಡಿಯೋದು ಇಲ್ಲ. ಬೆಳಗ್ಗೆ ಅರಳಿ ಸಂಜೆ ಬಾಡೋ ಈ ಕಾಡುಮಲ್ಲಿಗೆಯ ಜೀವಿತಾವಧಿ ಒಂದೇ ಒಂದು ದಿನಮಾತ್ರವಾಗಿದ್ದು, ಇರುವಷ್ಟು ದಿನ ಜನಮಾನಸದಲ್ಲಿ ಉಳಿಯುವಂತ್ತಾಗಿದೆ ಎನ್ನುವುದು ಸ್ಥಳೀಯರಾದ ಶಿವಕುಮಾರ್ ಅಭಿಪ್ರಾಯಿಸುತ್ತಾರೆ.

ಅಲ್ಪಾವಧಿಯಲ್ಲೆ ಮಸಣ ಸೇರೋ ಈ ಮಲ್ಲಿಗೆ ಸ್ವರೂಪದ ಲತೆಯು ತನ್ನ ಕಂಪನ್ನು ಸೂಸಿ ಮಿಂಚಿ ಮರೆಯಾದ್ರೂ ಸದಾ ಕಾಲ ಅದರ ಸೌಂದರ್ಯವನ್ನಂತೂ ಇಲ್ಲಿನೋರು ಮರೆಯೋಲ್ಲ. ಪ್ರಕೃತಿ ತಾನು ನೀಡಿದ ಅನೇಕ ವೈಶಿಷ್ಟ್ಯಗಳಲ್ಲಿ ಇದಕ್ಕೂ ತನ್ನದೇ ಆದ ಸ್ಥಾನವನ್ನು ನೀಡಿದೆ ಅನ್ನೋದಂತೂ ಸತ್ಯ.

PREV
Read more Articles on
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!