Latest Videos

ಸಿಖ್ ಉಗ್ರನಿಗೆ ಕೆನಡಾ ಸಂಸತ್‌ನಲ್ಲಿ ಶ್ರದ್ಧಾಂಜಲಿ; ಇದೇನು ಭಾರತ ವಿರೋಧಿ ನೀತಿಯೇ?

By Sathish Kumar KHFirst Published Jun 22, 2024, 3:45 PM IST
Highlights

ಭಾರತದ ಭಯೋತ್ಪಾದಕರ ಪಟ್ಟಿಯಲ್ಲಿದ್ದ ಹರ್ದೀಪ್​ ಸಿಂಗ್​ ನಿಜ್ಜರ್​ ಸಾವಿಗೆ ಕೆನಡಾ ಹೌಸ ಆಫ್​​ ಕಾಮನ್ಸ್​​ ಪಾರ್ಲಿಮೆಂಟ್‌ನಲ್ಲಿ  ಒಂದು ನಿಮಿಷಗಳ ಕಾಲ ಮೌನಾಚರಣೆ ಶ್ರದ್ಧಾಂಜಲಿ ಸಲ್ಲಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ವರದಿ - ಪ್ರಕಾಶಗೌಡ ಪಾಟೀಲ್​​, ಏಷ್ಯಾನೆಟ್​ ಸುವರ್ಣ ನ್ಯೂಸ್​ 
ದೆಹಲಿ (ಜೂ.22):
ಭಾರತ ವಿರೋಧಿ ನೀತಿಗಳಿಂದಲೇ ಸುದ್ದಿಯಲ್ಲಿದ್ದ ಕೆನಡಾ.. ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.. ಭಾರತದ ಭಯೋತ್ಪಾದಕರ ಪಟ್ಟಿಯಲ್ಲಿದ್ದ ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆಗೆ ಒಂದು ವರ್ಷವಾಗಿದೆ. ಅದಕ್ಕೆ ಕೆನಡಾ ಹೌಸ ಆಫ್​​ ಕಾಮನ್ಸ್​​ ಪಾರ್ಲಿಮೆಂಟ್‌ನಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಲಾಗಿದೆ. ಇದು ಭಾರತೀಯರ ಕೋಪಕ್ಕೆ ಕಾರಣವಾಗಿದೆ. 

ನಿಜ್ಜರ್​ ಸಾವಿಗೆ ವರ್ಷವಾದ ಹಿನ್ನೆಲೆ ಕೆನಡಾ ಪಾರ್ಲಿಮೆಂಟಿನ ಸದಸ್ಯರೆಲ್ಲರೂ ಸೇರಿಕೊಂಡು ಮೌನಾಚರಣೆ ಮಾಡಿದ್ರು. ಇದಕ್ಕೆ ಭಾರತದ ರಾಯಭಾರ ಕಛೇರಿ ಟ್ವೀಟ್​ ತಿರುಗೇಟು ನೀಡಿದೆ. ನೀವು ಮೊದಲು ಕನಿಷ್ಕಾ ವಿಮಾನ ದುರಂತವನ್ನು ನೆನಪಿಕೊಳ್ಳಿ ಎಂದು ತಿರುಗೇಟು ನೀಡಿದೆ. ಭಾರತ ಯಾವಾಗಲೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತದೆ.. ಅದಕ್ಕಾಗಿ ಅನೇಕ ದೇಶಗಳ ಜೊತೆ ತಮ್ಮ ಉಗ್ರವಾದದ ವಿರುದ್ಧದ ಹೋರಾಟವನ್ನ ಮುಂದುವರೆಸುತ್ತದೆ ಎಂದು ಟ್ವೀಟ್​ ಮೂಲಕ ತಿಳಿಸಿದೆ. 

ಕೆನಡಾದಲ್ಲಿ ನಿಜ್ಜರ್​ ಹತ್ಯೆಗೆ ಸಂಸತ್​​ನಲ್ಲಿ ಮೌನಾಚರಣೆ..!
ಹರ್ದೀಪ್​​ ಸಿಂಗ್​​ ನಿಜ್ಜರ್​ ಹತ್ಯೆಯ ವಾರ್ಷಿಕೋತ್ಸವವನ್ನು ಕೆನಡಾದಲ್ಲಿನ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಪ್ರಧಾನಿ ಮೋದಿ ಕಟೌಟ್​ನ​ ಜೈಲಿನಲ್ಲಿರುವಂತೆ ಬಿಂಬಿಸಿ.. ಭಾರತ ಹಾಗೂ ಮೋದಿ ವಿರೋಧಿ ಘೋಷಣೆಗಳನ್ನ ಕೂಗಿದ್ದಾರೆ. ಅಷ್ಟೇ ಅಲ್ಲದೆ ಮೆರವಣಿಗೆಯಲ್ಲಿ ಮೋದಿ ಭಾವಚಿತ್ರದ ಮೇಲೆ ನಾನು ನಿಜ್ಜರ್​​ನನ್ನು ಕೊಂದಿದ್ದೇನೆ ಹಾಗೂ ಸಿಖ್​ ವರ್ಸಸ್​​ ಮೋದಿ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.

ಪ್ರದೀಪ್ ಈಶ್ವರ್‌ನನ್ನು ಮೊದಲ ಬಾರಗೆ ನೋಡಿ ಯಾರೋ ಹುಚ್ಚ ಅನ್ಕೊಂಡಿದ್ದೆ; ಡಿಸಿಎಂ ಡಿ.ಕೆ. ಶಿವಕುಮಾರ್

ಕಳೆದ ವರ್ಷ ಕೆನಡಾದಲ್ಲಿ ನಡೆದಿದ್ದಾರೂ ಏನು?
ಕಳೆದ ವರ್ಷ ಜೂನ್​ 18, 2023ರಲ್ಲಿ ಬ್ರಿಟಿಷ್​ ಕೊಲಂಬಿಯಾದ ಸರ್ರೆ ಗುರುದ್ವಾರ ಬಳಿ ಅಪರಿಚಿತ ಬಂದೂದು ದಾರಿಗಳು ಹರ್ದೀಪ್​ ಸಿಂಗ್​​​ ನಿಜ್ಜರ್​​​ನನ್ನು ಗುಂಡಿಕ್ಕಿ ಹತ್ಯೆಮಾಡಿದ್ರು. ಸಿಖ್ ಉಗ್ರವಾದಿಯಾಗಿ ಗುರುತಿಸಿಕೊಂಡಿದ್ದ ಹರ್ದೀಪ್​​ ​ಸಿಂಗ್ ನಿಜ್ಜರ್.. ಭಾರತ ವಿರೋಧಿ ಪ್ರತಿಭಟನೆ ಹಾಗೂ ಭಾರತ ವಿರೋಧಿ ಹೇಳಿಕೆಗಳ ಮೂಲಕ ಕುಖ್ಯಾತನಾಗಿದ್ದ.. ಭಾರತ ವಿರೋಧಿ ಸಿಖ್ಖರನ್ನ ಸಂಘಟಿಸುವಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ..

ಕನಿಷ್ಕಾ ಬಾಂಬ್ ಸ್ಫೋಟ... ಖಲಿಸ್ತಾನಿಗಳ ಕೈವಾಡ..!
1985ರಲ್ಲಿ ಕೆನಡಾದಿಂದ ಲಂಡನ್​ ಮೂಲಕ ಭಾರತಕ್ಕೆ ಬರ್ತಿದ್ದ ಏರ್ ಇಂಡಿಯಾ ಕನಿಷ್ಕಾ ವಿಮಾನವನ್ನ ಖಲಿಸ್ತಾನಿ ಉಗ್ರರು ಬಾಂಬ್ ಇಟ್ಟು ಸ್ಫೋಟಿಸಿದ್ರು. ಆಗಸದಲ್ಲಿ ಬರುವಾಗಲೇ ಅಟ್ಲಾಂಟಿಕ್ ಸಾಗರದ ಮೇಲೆ ಏರ್​​ಇಂಡಿಯಾದ ಕಾನಿಷ್ಕ ಸ್ಪೋಟಗೊಂಡು ಪತನವಾಗಿತ್ತು. ಈ ದುರಂತದಲ್ಲಿ 307 ಪ್ರಯಾಣಿಕರು ಸೇರಿದಂತೆ ಒಟ್ಟು 329 ಜನರು ಸಾವನ್ನಪ್ಪಿದ್ರು. ಈ ಪೈಕಿ 268 ಮಂದಿ ಕೆನಡಿಯನ್ನರಾಗಿದ್ರೆ 24 ಮಂದಿ ಭಾರತೀಯರು ಹಾಗೂ 27 ಮಂದಿ ಬ್ರಿಟಿಷರು ಬಲಿಯಾಗಿದ್ರು.. ಕನಿಷ್ಕಾ ವಿಮಾನ ದುರಂತದ ಹಿಂದೆ ಖಲಿಸ್ತಾನಿ ಮಾಸ್ಟರ್‌ಮೈಂಡ್ ಇಂದರ್‌ಜಿತ್ ಸಿಂಗ್ ಕೈವಾಡವಿತ್ತು ಎಂದು ತನಿಖಾ ಸಂಸ್ಥೆಗಳು ಪತ್ತೆ ಮಾಡಿದ್ವು. ಈ ದುರಂತಕ್ಕೆ ನಾಳೆಗೆ 39 ವರ್ಷಗಳು ತುಂಬಲಿದ್ದು.. ಇದಕ್ಕೆ ಮೌನಾಚರಣೆ ಮಾಡಿ ಎಂದು ಭಾರತೀಯ ರಾಯಭಾರ ಕಚೇರಿ ಕೌಂಟರ್ ನೀಡಿದೆ. 

ಬೈ ಎಲೆಕ್ಷನ್ ಟಿಕೆಟ್‌ಗೆ ಬಿಜೆಪಿಯಲ್ಲಿ ಭರ್ಜರಿ ಫೈಟ್; ಯೋಗೇಶ್ವರ್, ಶ್ರೀರಾಮುಲು ಹಾಗೂ ಬೊಮ್ಮಾಯಿ ಪುತ್ರನಿಂದ ಲಾಬಿ?

‘ಭಾರತ ಭಯೋತ್ಪಾದನೆ ಎದುರಿಸುವಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕ ಬೆದರಿಕೆ ನಿಭಾಯಿಸಲು ಎಲ್ಲಾ ದೇಶಗಳ ಜೊತೆ ಕಾರ್ಯನಿರ್ವಹಿಸುತ್ತದೆ. ಭಾರತದ ವಿಮಾನದ ಮೇಲಿನ ದಾಳಿ ಹೇಡಿತನವನ್ನು ಸೂಚಿಸುತ್ತದೆ. ಭಯೋತ್ಪಾದಕ ಬಾಂಬ್ ಸ್ಫೋಟಕ್ಕೆ 39 ವರ್ಷಗಳಾಗಿದ್ದು. ಈ ದುರ್ಘಟನೆಯಲ್ಲಿ 86 ಮಕ್ಕಳು 329 ಮುಗ್ಧರು ಬಲಿಪಶುಗಳಾಗಿದ್ದಾರೆ. ಇದು ನಾಗರಿಕ ಸಮಾಜದ ಇತಿಹಾಸದಲ್ಲಿ ಅತ್ಯಂತ ಘೋರ ಭಯೋತ್ಪಾದನಾ ಕೃತ್ಯವಾಗಿದೆ.  ಜೂನ್​ 23, 2024ಕ್ಕೆ ಬ್ರಿಟಿಷ್​ ಕೊಲಂಬಿಯಾದಲ್ಲಿನ ಸ್ಮಾರಕಕ್ಕೆ  ಭಾರತದಿಂದ ಗೌರವ ಸಲ್ಲಿಸಲಾಗುತ್ತದೆ’ ಎಂದು ಟ್ವೀಟ್ ಮೂಲಕ ತಿಳಿಸಿದೆ.

Canada's Parliament marked the one-year anniversary of the killing of Khalistani terrorist Hardeep Singh Nijjar by holding a moment of silence in the House of Commons on Tuesday

(Video Source - Canadian Parliament Official Website) pic.twitter.com/SGkovpiWXc

— IANS (@ians_india)
click me!