PM Narendra Modi Birthday: ಮೋದಿ ಜನ್ಮದಿನದಂದೇ ಭಾರತಕ್ಕೆ ಆಫ್ರಿಕಾ ಚೀತಾ

Published : Sep 07, 2022, 08:26 AM ISTUpdated : Sep 16, 2022, 12:24 PM IST
PM Narendra Modi Birthday: ಮೋದಿ ಜನ್ಮದಿನದಂದೇ ಭಾರತಕ್ಕೆ ಆಫ್ರಿಕಾ ಚೀತಾ

ಸಾರಾಂಶ

ಬಹುನಿರೀಕ್ಷಿತ ಆಫ್ರಿಕಾ ಚೀತಾಗಳ ಭಾರತಾಗಮನಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ.17ರಂದು ನಮೀಬಿಯಾ ಮೂಲದ ಚೀತಾಗಳು ಭಾರತಕ್ಕೆ ಬರಲಿವೆ.

ಭೋಪಾಲ್‌: ಬಹುನಿರೀಕ್ಷಿತ ಆಫ್ರಿಕಾ ಚೀತಾಗಳ ಭಾರತಾಗಮನಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ.17ರಂದು ನಮೀಬಿಯಾ ಮೂಲದ ಚೀತಾಗಳು ಭಾರತಕ್ಕೆ ಬರಲಿವೆ. ಭಾರತಕ್ಕೆ ಬಂದ ದಿನವೇ ಎಲ್ಲಾ ಚೀತಾಗಳನ್ನು ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಗುತ್ತಿದ್ದು, ಇದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ. ಈ ವಿಷಯವನ್ನು ಸ್ವತಃ ಮಧ್ಯಪ್ರದೇಶದ (Madhya Pradesh) ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ (Shivraj Singh Chouhan)ಮಂಗಳವಾರ ಖಚಿತಪಡಿಸಿದ್ದಾರೆ.

ಈ ಬೆಳವಣಿಗೆಗೆ ಪೂರಕವಾಗಿ, ಚೀತಾಗಳ ಇಡುವ ಸ್ಥಳದ ಪರಿಸರದ ಪರಿಶೀಲನೆಗಾಗಿ ಆಫ್ರಿಕಾದಿಂದ ತಜ್ಞರ ತಂಡ ಮಂಗಳವಾರ ರಾಷ್ಟ್ರೀಯ ಉದ್ಯಾನಕ್ಕೆ (national park) ಭೇಟಿ ನೀಡಿದೆ. ಚಿರತೆಗಳನ್ನು ಕಾಡಿಗೆ ಬಿಡುವ ಮುನ್ನ 2-3 ತಿಂಗಳು ಅವುಗಳನ್ನು ಉದ್ಯಾನದ ಆವರಣದಲ್ಲೇ ಇಡಲಾಗುವುದು. 4-5 ಹೆಣ್ಣು ಸೇರಿದಂತೆ ಒಟ್ಟು 12 ಚೀತಾಗಳನ್ನು ಭಾರತಕ್ಕೆ ತರಲಾಗುತ್ತಿದೆ. ಸದ್ಯ 12 ಚೀತಾಗಳಿಗೆ ವಿವಿಧ ಸೋಂಕಿನಿಂದ ರಕ್ಷಣೆ ನೀಡುವ ಲಸಿಕೆಗಳನ್ನು ನೀಡಿ ನಮೀಬಿಯಾದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

Belagavi Leopard News: 24 ದಿನ ಕಳೆದ್ರೂ ಪತ್ತೆಯಾಗದ ಚಿರತೆ: ಕಾಂಗ್ರೆಸ್‌ ಕಾರ್ಯಕರ್ತೆಯರಿಂದ ಹೈಡ್ರಾಮ!

ದಕ್ಷಿಣ ಆಫ್ರಿಕಾ (South Africa) ಹಾಗೂ ನಮೀಬಿಯಾದಿಂದ (Namibia) ಏರ್‌ಲಿಫ್ಟ್ ಮೂಲಕ ಭಾರತಕ್ಕೆ ಬಂದಿಳಿಯಲಿರುವ ಚೀತಾಗಳನ್ನು ಅದೇ ದಿನ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುವುದು. ಮೋದಿ ಸೇರಿದಂತೆ ಗಣ್ಯರ ಆಗಮನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ಯಾನವನದ ಸಮೀಪ 7 ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. 1947ರಲ್ಲಿ ಛತ್ತೀಸಗಢದ (Chhattisgarh) ಕೊರಿಯಾ ಜಿಲ್ಲೆಯಲ್ಲಿ (Koria district) ಕಟ್ಟಕಡೆ ಬಾರಿ ಚಿರತೆಯನ್ನು ನೋಡಲಾಗಿತ್ತು. 1952ರಲ್ಲಿ ದೇಶದಿಂದ ಚೀತಾಗಳ ಸಂತತಿ ಅಳಿದು ಹೋಗಿದೆ ಎಂದು ಘೋಷಿಸಲಾಗಿತ್ತು.

Cheetah Operation: ಬೆಳಗಾವಿಯ ಗಾಲ್ಫ್‌ ಮೈದಾನದಲ್ಲಿ ಎಲ್ಲಿದೆ ಚಿರತೆ? 

ಚಿರತೆಯು (ಪಾಂತೇರಾ ಪಾರ್ದೂಸ್) ಆಫ಼್ರಿಕಾ ಹಾಗೂ ಉಷ್ಣವಲಯ ಏಷ್ಯಾದ ಕೆಲವು ಭಾಗಗಳು, ಸೈಬೀರಿಯಾ(Siberia), ದಕ್ಷಿಣ ಹಾಗೂ ಪಶ್ಚಿಮ ಏಷ್ಯಾದಿಂದ ಆಫ಼್ರಿಕಾದ ಉಪ ಸಹಾರಾ ಪ್ರದೇಶಗಳ ಬಹುಪಾಲು ಉದ್ದಗಲದವರೆಗಿನ ವ್ಯಾಪಕ ವ್ಯಾಪ್ತಿಯಲ್ಲಿರು ಫ಼ೆಲಿಡೈ (Felidae) ಕುಟುಂಬದ ಒಂದು ಸದಸ್ಯ ಪ್ರಾಣಿ. ಅವಾಸ ಸ್ಥಾನದ ನಾಶ ಹಾಗೂ ಛಿದ್ರೀಕರಣ, ಮತ್ತು ವ್ಯಾಪಾರ ಹಾಗೂ ಉಪಟಳ ನಿಯಂತ್ರಣಕ್ಕಾಗಿ ಬೇಟೆಯ ಕಾರಣ ಅದು ಅದರ ವ್ಯಾಪ್ತಿಕ್ಷೇತ್ರದ ಹೆಚ್ಚಿನ ಭಾಗಗಳಲ್ಲಿ ಇಳಿಮುಖವಾಗುತ್ತಿದೆ. ಈ ಕಾರಣದಿಂದ ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಅಳಿವನಂಚಿನಲ್ಲಿರುವ ಪ್ರಬೇಧ ಎಂದು ಪಟ್ಟಿ ಮಾಡಲಾಗಿದೆ. ಹಾಂಗ್ ಕಾಂಗ್ (Hong Kong), ಸಿಂಗಪೋರ್ (Singapore), ಕುವೈಟ್‌ (Kuwait), ಸಿರಿಯಾದ ಅರಬ್ ಗಣರಾಜ್ಯ, ಲಿಬ್ಯಾ ಮತ್ತು ಟುನಿಷಿಯಾದಲ್ಲಿ ಅದು ಪ್ರಾದೇಶಿಕವಾಗಿ ನಿರ್ನಾಮವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು