ಸ್ವಾತಂತ್ರ್ಯ ಬಂದು 77 ವರ್ಷವಾದರೂ, ಬ್ರಿಟಿಷ್ ನಿಯಂತ್ರಣದಲ್ಲಿರುವ ಏಕೈಕ ಭಾರತೀಯ ರೈಲು ಮಾರ್ಗ ಇದು!

First Published Aug 22, 2024, 12:57 PM IST

ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ, ಒಂದು ರೈಲು ಮಾರ್ಗ ಇನ್ನೂ ಬ್ರಿಟಿಷ್ ಕಂಪನಿಯ ನಿಯಂತ್ರಣದಲ್ಲಿದೆ. ಈ ಮಾರ್ಗವನ್ನು ಖರೀದಿಸಲು ಭಾರತೀಯ ರೈಲ್ವೆ ಹಲವು ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗಿಲ್ಲ.

ಬ್ರಿಟಿಷ್‌ ಕಂಪನಿಯ ಅಧೀನದಲ್ಲಿರುವ ರೈಲುಮಾರ್ಗ!

ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಪೂರ್ಣಗೊಂಡಿವೆ. ಆದರೂ, ಮಹಾರಾಷ್ಟ್ರದಲ್ಲಿರುವ ಒಂದು ರೈಲು ಮಾರ್ಗವನ್ನು ಇನ್ನೂ ಬ್ರಿಟಿಷ್ ಕಂಪನಿ ನಿರ್ವಹಿಸುತ್ತಿದೆ. ಈ ರೈಲು ಮಾರ್ಗವನ್ನು ಖರೀದಿಸಲು ಭಾರತೀಯ ರೈಲ್ವೆ ಹಲವು ಪ್ರಯತ್ನಗಳನ್ನು ಮಾಡಿದರೂ ಅದು ಫಲ ನೀಡಿಲ್ಲ. ಸೆಂಟ್ರಲ್ ಪ್ರಾವಿನ್ಸ್ ರೈಲ್ವೆಯ ಬ್ರಿಟಿಷ್ ಕಂಪನಿಯಾದ ‘ಕಿಲ್ಲಿಕ್ ನಿಕ್ಸನ್ & ಕೋ’ ಕಂಪನಿಯೇ ಇನ್ನೂ ನಿರ್ವಹಿಸುತ್ತಿದೆ.

ಈ ಕಂಪನಿ ಮಹಾರಾಷ್ಟ್ರದಲ್ಲಿರುವ ಅಮರಾವತಿಯಿಂದ ಮುರ್ತಾಜಾಪುರದವರೆಗಿನ 190 ಕಿಲೋಮೀಟರ್‌ಗಳ ರೈಲು ಮಾರ್ಗದಲ್ಲಿ ಶಕುಂತಲಾ ಎಕ್ಸ್‌ಪ್ರೆಸ್‌ ಅನ್ನು ನಿರ್ವಹಣೆ ಮಾಡುತ್ತಿತ್ತು. ಸ್ವಾತಂತ್ರ್ಯ ಬಂದ ನಂತರ ಬ್ರಿಟಿಷರು ಭಾರತದಿಂದ ಹೊರಟು ಹೋದರು. ಆದರೂ, ಈ ಮಾರ್ಗದ ಮೇಲೆ ಬ್ರಿಟಿಷ್ ಖಾಸಗಿ ಕಂಪನಿಯ ಅಧಿಕಾರ ಮುಂದುವರೆದಿದೆ. ಆ ಕಂಪನಿಗೆ ಭಾರತೀಯ ರೈಲ್ವೆ 1.20 ಕೋಟಿ ರೂಪಾಯಿ ರಾಯಲ್ಟಿಯನ್ನು ನೀಡುತ್ತಿದೆ.

Latest Videos


ಶಕುಂತಲಾ ರೈಲು ಮಾರ್ಗ

ಅಮರಾವತಿಯಿಂದ ಮುರ್ತಾಜಾಪುರದವರೆಗಿನ 190 ಕಿಲೋಮೀಟರ್‌ಗಳಷ್ಟಿರುವ ಈ ರೈಲು ಮಾರ್ಗವನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ರೈಲ್ವೆ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ, ಅವು ಫಲ ನೀಡಿಲ್ಲ. ಈ ರೈಲು ಮಾರ್ಗದಲ್ಲಿ ಶಕುಂತಲಾ ಪ್ಯಾಸೆಂಜರ್ ಎಂಬ ಒಂದೇ ಒಂದು ಪ್ರಯಾಣಿಕರ ರೈಲು ಸಂಚರಿಸುತ್ತಿತ್ತು. ಇದರಿಂದಾಗಿ ಈ ಮಾರ್ಗವನ್ನು ಶಕುಂತಲಾ ರೈಲು ಮಾರ್ಗ ಎಂದು ಕರೆಯಲಾಗುತ್ತದೆ. ಶಕುಂತಲಾ ಎಕ್ಸ್‌ಪ್ರೆಸ್ ಅಚಲ್‌ಪುರ, ಯಾವತ್ಮಾಲ್ ನಡುವೆ 17 ನಿಲ್ದಾಣಗಳಲ್ಲಿ ನಿಲ್ಲುತ್ತಿತ್ತು. ಸುಮಾರು 70 ವರ್ಷಗಳ ಕಾಲ ಈ ರೈಲು ಸ್ಟೀಮ್‌ ಇಂಜಿನ್‌ನಲ್ಲಿಯೇ ಸಂಚಾರ ಮಾಡಿತ್ತು. 

ಭಾರತೀಯ ರೈಲ್ವೆಗಳ ಕುರಿತು ಕುತೂಹಲಕಾರಿ ವಿಷಯಗಳು

ಶಕುಂತಲಾ ಪ್ಯಾಸೆಂಜರ್ ರೈಲಿಗೆ 1994 ರಲ್ಲಿ ಡೀಸೆಲ್ ಎಂಜಿನ್ ಅಳವಡಿಸಲಾಯಿತು. ಆ ನಂತರ ಅನಿವಾರ್ಯ ಕಾರಣಗಳಿಂದ ರೈಲನ್ನು ಸ್ಥಗಿತಗೊಳಿಸಲಾಯಿತು. ಇದನ್ನು ಮತ್ತೆ ಪ್ರಾರಂಭಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. 5 ಬೋಗಿಗಳಿದ್ದ ಈ ರೈಲು ಪ್ರತಿದಿನ 800 ರಿಂದ 1000 ಪ್ರಯಾಣಿಕರನ್ನು ನಿಗದಿತ ಸ್ಥಾನಗಳಿಗೆ ತಲುಪಿಸುತ್ತಿತ್ತು. ಭಾರತೀಯ ರೈಲ್ವೆ 1951 ರಲ್ಲಿ ರಾಷ್ಟ್ರೀಕರಣಗೊಂಡಿತು. ಈ ರೈಲು ಮಾರ್ಗ ಮಾತ್ರ ಭಾರತ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರಲಿಲ್ಲ.

ಶಕುಂತಲಾ ರೈಲ್ವೆ ಮಾರ್ಗ

ಅಮರಾವತಿ- ಮುರ್ತಾಜಾಪುರ ರೈಲು ಮಾರ್ಗವನ್ನು ಬಳಸಿಕೊಂಡಿದ್ದಕ್ಕಾಗಿ ಇಂಗ್ಲೆಂಡ್ ಕಂಪನಿಗೆ 1.20 ಕೋಟಿ ರಾಯಲ್ಟಿಯನ್ನು ಇಂಡಿಯನ್ ರೈಲ್ವೆ ಪಾವತಿಸುತ್ತಿತ್ತು. ಆದರೆ, ಪ್ರಸ್ತುತ ಆ ಪರಿಸ್ಥಿತಿ ಬದಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಈಗ ರಾಯಲ್ಟಿ ಪಾವತಿಸುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ. 

ರೈಲ್ವೆಗಳು

ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ತಿಯನ್ನು ಬೆಳೆಯಲಾಗುತ್ತದೆ. ಹತ್ತಿಯನ್ನು ಅಮರಾವತಿಯಿಂದ ಮುಂಬೈ ಬಂದರಿಗೆ ಸಾಗಿಸಲು ಬ್ರಿಟಿಷರು ಈ ರೈಲು ಮಾರ್ಗವನ್ನು ನಿರ್ಮಿಸಿದರು. ಸೆಂಟ್ರಲ್ ಪ್ರಾವಿನ್ಸಸ್ ರೈಲ್ವೆ ಕಂಪನಿ (CPRC) ಈ ರೈಲ್ವೆ ನಿರ್ಮಾಣಕ್ಕಾಗಿ ಬ್ರಿಟನ್‌ನ ಕಿಲ್ಲಿಕ್ ನಿಕ್ಸನ್ & ಕೋ ಅನ್ನು ಸ್ಥಾಪಿಸಿತು.

ಶಕುಂತಲಾ ಎಕ್ಸ್‌ಪ್ರೆಸ್

ಈ ರೈಲು ಮಾರ್ಗದ ನಿರ್ಮಾಣ 1903 ರಲ್ಲಿ ಪ್ರಾರಂಭವಾಗಿ.. 1916 ರಲ್ಲಿ ಪೂರ್ಣಗೊಂಡಿತು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತೀಯ ರೈಲ್ವೆ ಈ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಆದ್ದರಿಂದ, ಈ ಮಾರ್ಗವನ್ನು ಬಳಸಿಕೊಂಡಿದ್ದಕ್ಕಾಗಿ ಪ್ರತಿ ವರ್ಷ ಕಂಪನಿಗೆ ರಾಯಲ್ಟಿ ಪಾವತಿಸಬೇಕಾಗಿತ್ತು. 2016ರಲ್ಲಿ ಈ ಮಾರ್ಗದ ರೈಲು ಕೊನೆಗೊಂಡಿದೆ ಎಂದು ಹೇಳಲಾಗಿದೆ.

2016ರಲ್ಲಿ ಭಾರತೀಯ ರೈಲ್ವೆ, ಈ ಶಕುಂತಲಾ ರೈಲ್ವೆಯನ್ನು 5 ಫೀಟ್‌ 6 ಇಂಚಿನ ಬ್ರಾಡ್‌ಗೇಜ್‌ ಆಗಿ ಪರಿವರ್ತಿಸಲು ನಿರ್ಧಾರ ಮಾಡಿತ್ತು. 2020ರಲ್ಲಿ ಈ ಕೆಲಸ ಆರಂಭವಾಗಿದೆ.

click me!