ಶಿಕ್ಷಕ, ಪತ್ರಕರ್ತ, ರಾಜಕೀಯ ನಾಯಕ: ಪ್ರಣಬ್ ಮುಖರ್ಜಿ ಜೀವನದ ಇಂಟರೆಸ್ಟಿಂಗ್ ಮಾಹಿತಿ!

First Published Aug 31, 2020, 6:48 PM IST

ಭಾರತದ 13ನೇ ರಾಷ್ಟ್ರಪತಿಯಾಗಿ 2017ರಲ್ಲಿ ನಿವೃತ್ತರಾದ ಪ್ರಣಬ್ ಮುಖರ್ಜಿ ಭಾರತ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಸತತ ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದವರು. ಪ್ರಾಧ್ಯಾಪಕ, ಪತ್ರಕರ್ತ, ರಾಜಕೀಯ ನಾಯಕ ಮುಂದೆ ರಾಷ್ಟ್ರಪತಿ ಹೀಗೆ ಪ್ರಣಬ್ ಮುಖರ್ಜಿಯೊಬ್ಬ ಬಹುಮುಖ ಪ್ರತಿಭೆಯಾಗಿದ್ದರು. ಕೇಂದ್ರ ಸಚಿವರಾಗಿದ್ದಾಗಲೂ ಪ್ರಮುಖ ಖಾತೆ ನಿಭಾಯಿಸಿದ್ದರು. ಹಣಕಾಸು ಸಚಿವರಾಗಿ ಏಳು ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಮುಖರ್ಜಿಯವರದ್ದು. ಇಲ್ಲಿದೆ ನೋಡಿ ಪ್ರಣಬ್ ಮುಖರ್ಜಿ ಜೀವನದ ಇಂಟರೆಸ್ಟಿಂಗ್ ವಿಚಾರಗಳು

ರಾಜಕೀಯ ನಾಯಕರಾಗುವುದಕ್ಕೂ ಮೊದಲು ಪ್ರಣಬ್ ಮುಖರ್ಜಿ ಓರ್ವ ಪ್ರಾಧ್ಯಾಪಕರಾಗಿದ್ದರೆಂಬ ವಿಚಾರ ಅನೇಕರಿಗೆ ತಿಳಿದಿಲ್ಲ. 1963ರಲ್ಲಿ ಪಶ್ಚಿಮ ಬಂಗಾಳದ ವಿದ್ಯಾನಗರ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.
undefined
ದೆಶೇರ್ ದಾಕ್ ಎಂಬ ಸ್ಥಳೀಯ ಬಂಗಾಳಿ ಪತ್ರಿಕೆಯಲ್ಲಿ ಪ್ರಣಬ್ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.
undefined
1969ರಲ್ಲಿ ಅವರು ಮಾಜಿ ದಿವಂಗತ ಪ್ರಧಾನಿ ಇಂಧಿರಾ ಗಾಂಧಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇಂದಿರಾ ಅವರಿಗೆ ರಾಜ್ಯಸಭೆಗೆ ಪ್ರವೇಶಿಸಲು ಮಾರ್ಗದರ್ಶನ ನೀಡುತ್ತಾರೆ.
undefined
ಕೆಲಸವೇ ದೇವರೆನ್ನುವಂತೆ ನಂಬಿಕೊಂಡು ಇದ್ದನ್ನೇ ತಮ್ಮ ಜೀವನದಲ್ಲಿ ಪರಿಪಾಲಿಸುತ್ತಿದ್ದ ಶ್ರಮಜೀವಿಯಾಗಿದ್ದರು. ಅವರ ಮಗಳು ಶರ್ಮಿಷ್ಟಾ ಅವರು ಪ್ರತಿ ದಿನ ಸುಮಾರು 18 ಗಂಟೆ ಕೆಲಸ ಮಾಡುತ್ತಿದ್ದರು, ಅಲ್ಲದೇ ರಜೆ ತೆಗೆದುಕೊಳ್ಳುತ್ತಿದ್ದುದೇ ಬಹಳ ವಿರಳ ಎಂದಿದ್ದಾರೆ. ಆದರೆ ಅವರ ತವರು ನಾಡಾಗಿದ್ದ ವಿರತಿಗೆ ದುರ್ಗಾ ಪೂಜೆ ವೇಳೆ ತಪ್ಪದೇ ಭೇಟಿ ನೀಡುತ್ತಿದ್ದರು.
undefined
ಮುಖರ್ಜಿ ಓರ್ವ ಬಹುಮುಖ ಪ್ರತಿಭೆಯುಳ್ಳ ಸಚಿವರಾಗಿದ್ದರು. ಪ್ರಮುಖ ಸಚಿವಾಲಯಗಳಾದ ರಕ್ಷಣಾ, ವಿದೇಶಾಂಗ, ಹಣಕಾಸು ಹಾಗೂ ಆರ್ಥಿಕ ಖಾತೆ ಹೀಗೆ ವಿವಿಧ ಖಾತೆಗಳನ್ನು ನಿಭಾಯಿಸಿದ ಏಕೈಕ ಸಚಿವರಾಗಿದ್ದಾರೆ.
undefined
1984ರಲ್ಲಿ ಯೂರೋ ನಿಯತಕಾಲಿಕೆ ಮುಖರ್ಜಿಯವರು ವಿಶ್ವದಲ್ಲೇ ಅತ್ಯುತ್ತಮ ಹಣಕಾಸು ಸಚಿವರೆಂದು ಘೋಷಿಸಿತ್ತು. ಅಲ್ಲದೇ ಏಳು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವರಾಗಿದ್ದಾರೆ.
undefined
ಇಂಧಿರಾ ಗಾಂಧಿ ನಿಧನದ ಬಳಿಕ ಕಾಂಗ್ರೆಸ್‌ ಪಕ್ಷವನ್ನು ತೊರೆದ ಮುಖರ್ಜಿ ರಾಷ್ಟ್ರೀಯ ಸಮಾಜವಾದಿ ಪಾರ್ಟಿ ಎಂಬ ತಮ್ಮದೇ ಪ್ರತ್ಯೇಕ ರಾಜಕೀಯ ಪಾರ್ಟಿ ನಿರ್ಮಿಸುತ್ತಾರೆ.
undefined
ಇನ್ನು ಕಳೆದ ನಲ್ವತ್ತು ವರ್ಷಗಳಿಂದ ಅವರು ಡೈರಿಯೊಂದನ್ನು ಬರೆಯುತ್ತಾ ಬಂದಿದ್ದಾರೆನ್ನಲಾಗಿದೆ. ಇದರಲ್ಲಿರುವ ಎಲ್ಲಾ ವಿಚಾರಗಳನ್ನು ತಮ್ಮ ನಿಧನದ ಬಳಿಕ ಪ್ರಕಟಿಸಬೇಕೆಂದು ಮುಖರ್ಜಿಯವರು ಹೇಳಿದ್ದಾರೆ.
undefined
13ನೇ ರಾಷ್ಟ್ರಪತಿಯಾಗಿ ಅವರು ನೇಮಕಗೊಂಡ ಬಳಿಕ, ಅಫ್ಜಲ್ ಗುರು ಹಾಗೂ ಅಜ್ಮಲ್ ಕಸಬ್‌ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಸೇರಿ ಒಟ್ಟು ಏಳು ಅರ್ಜಿಗಳನ್ನು ನಿರಾಕರಿಸಿದ್ದಾರೆ.
undefined
ಅಲ್ಲದೇ ರಾಷ್ಟ್ರಪತಿಯಾಗಿ ಶಿಕ್ಷಕರ ದಿನ, ಸೆಪ್ಟಂಬರ್ 5 ರಂದು ಭಾರತದ ರಾಜಕೀಯ ಇತಿಹಾಸವನ್ನು ದೆಹಲಿಯ ಸರಕಾರಿ ಶಾಲಾ ಮಕ್ಕಳಿಗೆ ಬೋಧಿಸುವ ಮೂಲಕ ಹೊಸ ದಾಖಲೆ ಬರೆದರು.
undefined
click me!