Sallekhana: ನಿರಾಹಾರಿಗಳಾಗಿ ಸಾವು ಬರಮಾಡಿಕೊಳ್ಳುವ ಜೈನ ಸಂತರು… ಏನಿದು ಸಂಪ್ರದಾಯ?

First Published Feb 23, 2024, 2:17 PM IST

ಜೈನ ಸಂತರು ಕೈಗೊಳ್ಳುವ ಸಮಾಧಿಯನ್ನು ಸಲ್ಲೇಖನ ಎಂದು ಕರೆಯಲಾಗುತ್ತದೆ. ಜೈನ ಧರ್ಮದ ಪ್ರಕಾರ, ಸಲ್ಲೇಖನವು ಒಂದು ರೀತಿಯ ಸ್ವಯಂ ಪ್ರೇರಿತ ಸಾವು. ಭೀಷ್ಮನಂತೆ ಇಚ್ಛಾಮರಣಿ ಎನ್ನಬಹುದು. ಸಲ್ಲೇಖನ ಮೂಲಕ ಜೈನ ಸಂತರು ಯಾವುದೇ ವಿಶೇಷ ಆಚರಣೆಗಳಿಲ್ಲದೆ ಮರ್ತ್ಯ ಜೀವನದ ಮೋಕ್ಷವನ್ನು ಪಡೆಯುತ್ತಾರೆ.
 

ಜೈನ ಧರ್ಮದಲ್ಲಿ (Jainism), ಮಹಾಸಮಾಧಿಯನ್ನು ಹಿಂದೂ ಧರ್ಮದಂತೆ ತೆಗೆದುಕೊಳ್ಳಲಾಗುತ್ತದೆ. ಜೈನ ಧರ್ಮದ ಸಮಾಧಿಗೆ ಸಂಬಂಧಿಸಿದಂತೆ, ಜೈನ ಧರ್ಮದಲ್ಲಿ ಸಮಾಧಿಯ ಅರ್ಥವೇನು? ಸಮಾಧಿಯನ್ನು ಹೇಗೆ ತೆಗೆದು ಕೊಳ್ಳಲಾಗುತ್ತದೆ? ಮತ್ತು ಸಲ್ಲೇಖನ ಎಂದರೇನು? ಎಂಬ ಹಲವು ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಈ ಲೇಖನ ನಿಮಗಾಗಿ. 
 

ಜೈನ ಧರ್ಮದಲ್ಲಿ ಸಲ್ಲೇಖನ ಎಂದರೇನು?
ಜೈನ ಸಂತರು ಸಮಾಧಿ ಹೊಂದುವುದನ್ನು ಸಲ್ಲೇಖನ (Sallekhana) ಎಂದು ಕರೆಯಲಾಗುತ್ತದೆ. ಜೈನ ಧರ್ಮದ ಪ್ರಕಾರ, ಸಲ್ಲೇಖನವು ಒಂದು ರೀತಿಯ ಸ್ವ ಇಚ್ಛಾ ಮರಣ. ಸಲ್ಲೇಖನ ಮೂಲಕ ಜೈನ ಸಂತರು ಯಾವುದೇ ವಿಶೇಷ ಆಚರಣೆಗಳಿಲ್ಲದೆ ಮರ್ತ್ಯ ಜೀವನದ ಮೋಕ್ಷವನ್ನು ಪಡೆಯುತ್ತಾರೆ. ಆದರೆ, ಸಲ್ಲೇಖನಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಸಹ ಅಸ್ತಿತ್ವದಲ್ಲಿವೆ.

ಜೈನ ಧರ್ಮದಲ್ಲಿ, ಒಬ್ಬ ಸಂತನು ಸಮಾಧಿಯನ್ನು ಅಂದರೆ ಸಲ್ಲೇಖನ ವ್ರತವನ್ನು ತೆಗೆದು ಕೊಳ್ಳಬೇಕಾದರೆ, ಅದಕ್ಕಾಗಿ ಅವನು ಅಹಿಂಸೆ (Nonviolence), ಆಸ್ತಿ ಸಂಗ್ರಹಣೆ, ಸುಳ್ಳು, ಕಳ್ಳತನ ಮುಂತಾದ ಕೃತ್ಯಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಯಾಕೆಂದರೆ ಸಲ್ಲೇಖನ ಸಂಪ್ರದಾಯವನ್ನು ಜೈನ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಸಾವು ಬಂದಾಗ ಈ ಸಂಪ್ರದಾಯವನ್ನು (tradition) ಅನುಸರಿಸಲಾಗುತ್ತದೆ.
 

ಜೈನ ಧರ್ಮದಲ್ಲಿ ತಿಳಿಸಿದಂತೆ ಒಬ್ಬ ವ್ಯಕ್ತಿಗೆ ಸಾವು ಸನ್ನಿಹಿತವಾದಾಗ ಮತ್ತು ಅವನ ದೇಹವು ಕೆಲವೇ ದಿನಗಳಲ್ಲಿ ಸಾಯಬಹುದು ಎಂದೆನಿಸಿದಾಗ, ಆ ವ್ಯಕ್ತಿಯು ತಾನಾಗಿಯೇ ಆಹಾರ ಮತ್ತು ನೀರನ್ನು ತ್ಯಜಿಸುತ್ತಾನೆ. ದಿಗಂಬರ ಜೈನ ಶಾಸ್ತ್ರದ ಪ್ರಕಾರ, ಇದನ್ನು ಮಹಾಸಮಾಧಿ (Mahasamadhi)ಅಥವಾ ಸಲ್ಲೇಖನ ಎಂದು ಕರೆಯಲಾಗುತ್ತದೆ. 
 

ಸಲ್ಲೇಖನವನ್ನು (death by fasting) ಅನುಸರಿಸುವುದು ತುಂಬಾ ಕಷ್ಟ. ಈ ಸಮಯದಲ್ಲಿ ದೇಹವು ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಈ ಸಂಪ್ರದಾಯಕ್ಕೆ ಹಲವು ವರ್ಷಗಳ ಇತಿಹಾಸವೂ ಇದೆ, ಅದರ ಪ್ರಕಾರ 'ಜೈನ್' ಎಂಬ ಪದವು ಜಿನ್ ಅಥವಾ ಜೈನ್ ನಿಂದ ಬಂದಿದೆ, ಇದರರ್ಥ 'ಜಯಶಾಲಿ'. ಜೈನ ಧರ್ಮದಲ್ಲಿ ಸಾವನ್ನು ವಿಜಯವೆಂದು ಪರಿಗಣಿಸಲಾಗುತ್ತದೆ.

ಜೈನ ಧರ್ಮದ ಸಂತರು ಸಲ್ಲೇಖನವನ್ನು ಅಂದರೆ ಸಮಾಧಿಯನ್ನು ಹೊಂದುವುದು ಎಂದರೆ, ಅದು ಸಾವಿನ ಸಮಯವನ್ನು (winning death) ಗೆದ್ದಂತೆ. ಈ ಕಾರಣಕ್ಕಾಗಿ, ಸಲ್ಲೇಖನ ಸಮಯದಲ್ಲಿ ನಿಯಮಗಳನ್ನು ಅನುಸರಿಸುವುದು ಜೈನ ಧರ್ಮದಲ್ಲಿ ಅತ್ಯಂತ ಮುಖ್ಯ. 
 

ಇನ್ನು ಯಾರು ತಮಗಿಷ್ಟ ಬಂದಂತೆ ಸಲ್ಲೇಖನ ವ್ರತವನ್ನು ಕೈಗೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಅವಕಾಶವೂ ಇಲ್ಲ. ಯಾರು ಜೀವನದಲ್ಲಿ ತನ್ನ ಜೀವಿತದ ಎಲ್ಲಾ ಉದ್ದೇಶಗಳನ್ನು ಈಡೇರಿಸಿರುವ ತೃಪ್ತಿ ಹೊಂದಿರುತ್ತಾರೋ, ಈ ದೇಹದ ಅಗತ್ಯ ಇನ್ನು ಇಲ್ಲ ಎಂದು ಅನಿಸುತ್ತದೆಯೋ, ಅವರು ಸಲ್ಲೇಖನ ವೃತ ಮಾಡುತ್ತಾರೆ. 
 

click me!