ಮೈದುಂಬಿದವರಂತೆ ದೇವರಿಗೆ ಪರಾಕು ಹೇಳುತ್ತಾ ಮಂಡಿಯೂರಿ, ದೇವರಪ್ರಸಾದವಾದ ಆ ರಸಾಯನವನ್ನು ತಿನ್ನುವುದಕ್ಕೆ ಮಣೇವು ಹಾಕುವುದು ಎನ್ನುತ್ತಾರೆ. ಈ ಊರಲ್ಲಿ ಸ್ವಲ್ಪ ಭಿನ್ನತೆ ಇದೆ. ಬಂದ ಭಕ್ತರು ದಾಸಯ್ಯನ ಕೈಯಲ್ಲಿ ಮಂತ್ರ ಜಲವನ್ನು ತಲೆಗೆ ಪ್ರೋಕ್ಷಿಸಿಕೊಂಡು , ತಾವು ಮನೆಯಿಂದ ತಂದ ದೇವರಿಗೆ ತಂಬಿಟ್ಟು, ಬಾಳೆಹಣ್ಣುಗಳನ್ನು ಸಮರ್ಪಿಸಿ, ಪೂಜಿಸಿ ಭಕ್ತಿಯಿಂದ ನಮಸ್ಕರಿಸಿ, ಭಗವಂತನ ಆಶೀರ್ವಾದವನ್ನು ಕೋರುತ್ತಾರೆ.