ಯಾರ ಸಹಾಯವಿಲ್ಲದೆ ಕೇವಲ ದೇವಿಯ ಶಕ್ತಿಯಿಂದ ನಡೆಯುವ ಇಲ್ಲಿನ ಪವಾಡ ನೋಡಲು ರಾಜ್ಯದ ವಿವಿದ ಭಾಗಗಳಿಂದ ಜನಸಾಗರ ಹರಿದುಬರುತ್ತೆ. ಸರ್ವಧರ್ಮ ಸಮನ್ವಯತೆಸಾರುವ ಮಾರಿಕಾಂಬೆ ದೇವಿಯ ಜಾತ್ರೆ ರಾಜ್ಯದಲ್ಲಿಯೇ ಅತ್ಯಂತ ಜನಪ್ರಿಯತೆಗಳಿಸಿದೆ. ವಿಶ್ವಕರ್ಮ ಸಮುದಾಯದವರು ದೇವಿಯ ಸುಂದರ ಉತ್ಸವ ಮೂರ್ತಿಯನ್ನು ಕೆತ್ತುತ್ತಾರೆ, ವೀರಶೈವ ರೆಡ್ಡಿ, ಬೋವಿ ಜನಾಂಗ ಮತ್ತು ತಮಿಳುಭಾಷಿಕರು ಚಪ್ಪರ ಹಾಕುತ್ತಾರೆ, ಮುಸಲ್ಮಾನರು ವಿಶೇಷ ನಮಾಜ್ ಮಾಡಿದರೆ, ಕ್ರಿಶ್ಚಿಯನ್ನರು ಜಾತ್ರೆಯ ಯಶಸ್ವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗೆ ಗ್ರಾಮದ ಎಲ್ಲಾ ಸಮುದಾಯದವರೂ ಒಂದೊಂದು ಕೆಲಸ ಹಂಚಿಕೊಂಡು ಜಾತ್ರೆ ಆಚರಿಸುವ ಮೂಲಕ ಇದೊಂದು ಸರ್ವಧರ್ಮದ ಸಮನ್ವಯತೆಯ ಸಂಕೇತವೂ ಆಗಿದೆ. ಇಂತಹ ಪವಾಡವನ್ನು ಕಣ್ತುಂಬಿಕೊಳ್ಳಲು ಜನ ಮರ, ಕಟ್ಟಡದ ಮಲೇರಿ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಪವಾಡ ನೆಡೆಯುವ ಸ್ಥಳದಸುತ್ತ ನೆರೆದಿದ್ದ ಜನಪ್ರವಾಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಮಾಡಬೇಕಾಯಿತು.