ನೀಲ ಕುರಂಜಿ ಜಿಲ್ಲೆಯ ಪ್ರವಾಸೋದ್ಯಮವನ್ನು ಚೇತರಿಸಿಕೊಳ್ಳುವಂತೆ ಮಾಡಿದೆ. ಆದರೂ, ನಿಯಂತ್ರಣವಿಲ್ಲದ ಪ್ರವಾಸಿಗರ ಚಟುವಟಿಕೆಯಿಂದಾಗಿ ಕುರಂಜಿ ಪ್ರಬೇಧಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎನ್ನುವ ಆತಂಕವೂ ಎದುರಾಗಿದೆ. ಕುರಂಜಿ ಸೌಂದರ್ಯವನ್ನು ಆಸ್ವಾಧಿಸುವ ಸಲುವಾಗಿ ಭೇಟಿ ನೀಡುತ್ತಿರುವ ಪ್ರವಾಸಿಗರು ಶೋಲಾ ಅರಣ್ಯದಲ್ಲಿ, ವಿಶಾಲವಾಗಿ ಮೈಚಾಚಿಕೊಂಡಿರುವ ಬೆಟ್ಟ ಪ್ರದೇಶದಲ್ಲಿ ಕುರಂಜಿ ಗುಚ್ಛಗಳ ಮೇಲೆ ಮಲಗಿ, ಕುಳಿತು ಫೋಟೋ, ವೀಡಿಯೋ ತೆಗೆಸಿಕೊಳ್ಳುವುದು, ದೊಡ್ಡ ಪ್ರಮಾಣದಲ್ಲಿ ಗುಚ್ಛಗಳನ್ನು ಕಿತ್ತು ಸಾಗಿಸುವುದು ನಡೆಯುತ್ತಿದ್ದು, ಇದರಿಂದ ಕುರಂಜಿ ಪ್ರಬೇಧ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪರಿಸರ ಪ್ರೇಮಿಗಳು, ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.