ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವ 'ಮಹಿಳೆ'ಗೆ ಏನಾಗುತ್ತೆ ಗೊತ್ತಾ?

Published : Feb 04, 2024, 12:56 PM IST
ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವ 'ಮಹಿಳೆ'ಗೆ ಏನಾಗುತ್ತೆ ಗೊತ್ತಾ?

ಸಾರಾಂಶ

ಹುಡುಗಿಯರು ಆಕರ್ಷಿತರಾಗುವುದು ಸಹಜ ಆದರೆ ಮದುವೆಯಾದ ಮಹಿಳೆಯು ಪರ ಪುರುಷನ ಕಡೆಗೆ ಆಕರ್ಷಿತಳಾಗುವುದು ಒಳ್ಳೆಯದಲ್ಲ.

ಆಚಾರ್ಯ ಚಾಣಕ್ಯರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಚಾಣಕ್ಯ ನೀತಿ ತುಂಬಾ ವಿಶೇಷ. ಬದುಕಿನ ನೀತಿಗೆ ಸಂಬಂಧಿಸಿದ ಸಂಬಂಧಗಳು ಪೋಷಕರು, ಸ್ನೇಹಿತರು, ಹೆಂಡತಿ ಮತ್ತು ಸಹೋದರರ ಜೊತೆಗೆ ಹೇಗೆ ಇರಬೇಕು ಎಂಬುದರ ಬಗ್ಗೆಯೂ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಜಾಣ್ಮೆಯ ವಿಚಾರದಲ್ಲಿ ಚಾಣಕ್ಯನ ನೀತಿ ಮಾತುಗಳನ್ನು ಅನುಸರಿಸಿದರೆ ವ್ಯಕ್ತಿ ಖಂಡಿತವಾಗಿಯೂ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕೆಲವು ವಿಚಾರಗಳಲ್ಲಿ ಅಂದು ಚಾಣಕ್ಯ ಹೇಳಿದ ಮಾತುಗಳು ಇಂದು ಅಷ್ಟೊಂದು ಸಮ್ಮತ ಅಲ್ಲದೇ ಇರಬಹುದು. ಆದರೂ ಅವುಗಳನ್ನು ಓದುವುದು ಮಜಾ ಕೊಡುತ್ತದೆ.  ಆಚಾರ್ಯ ಚಾಣಕ್ಯರು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಮುಖ್ಯವಾಗಿ ರಾಜಕೀಯದ ಬಗ್ಗೆ. ಗಂಡು- ಹೆಣ್ಣಿನ ಸಂಬಂಧ, ದಾಂಪತ್ಯ, ವಿದ್ಯಾರ್ಥಿ ಇತ್ಯಾದಿಗಳ ಬಗ್ಗೆಯೂ ಚಾಣಕ್ಯರ ಶ್ಲೋಕಗಳಿವೆ. ಚಾಣಕ್ಯ ತನ್ನ ಅನುಭವದ ಆಧಾರದ ಮೇಲೆ ಮಾನವ ಜೀವನದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ.

ಚಾಣಕ್ಯ ನೀತಿ ಶಾಸ್ತ್ರ ಪ್ರಕಾರ ಯಾರು ಭ್ರಷ್ಟರಾಗುತ್ತಾರೆ? ಒಳ್ಳೆಯ ವಿಷಯಗಳು ಹೇಗೆ ಅರ್ಥಹೀನವಾಗುತ್ತವೆ ಎಂದು ಈಗ ನೋಡೋಣ.

ಅಲಸ್ಯೋಪಹತಾ ವಿದ್ಯಾ ಪರಹಸ್ತಗತಃ ಸ್ತ್ರಿಯಾ| 
ಅಲ್ಪಬೀಜಂ ಹತಂ ಕ್ಷೇತ್ರಂ ಹತಂ ಸಮಿಯಮನಾಯಕಂ||

ಶ್ಲೋಕದ ಅರ್ಥ ನೋಡುವುದಾದರೆ ಸೋಮಾರಿತನವು ಶಿಕ್ಷಣವನ್ನು ನಾಶಪಡಿಸುತ್ತದೆ. ಒಬ್ಬ ಮಹಿಳೆ ಪುರುಷನ ಕೈಗೆ ಸಿಕ್ಕಿ ನಾಶವಾಗುತ್ತಾಳೆ. ಸ್ವಲ್ಪ ಬೀಜ ಬಿತ್ತಿದ ಹೊಲ ವ್ಯರ್ಥವಾಗುತ್ತದೆ. ಸೇನಾಧಿಕಾರಿಯ ಸಾವು ಸೇನೆಯ ಬಲವನ್ನು ಕುಗ್ಗಿಸುತ್ತದೆ ಎಂದಾಗಿದೆ.

ವಿದ್ಯಾರ್ಥಿಗೆ ಸೋಮಾರಿತನ ಅಪಾಯಕಾರಿ. ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಯು ಅಧ್ಯಯನವನ್ನು ನಿರ್ಲಕ್ಷಿಸಬಾರದು. ಸೋಮಾರಿಯಾಗಿ ಯಾರು ಓದುತ್ತಾರೆಂದು ನಿರ್ಲ್ಯಕ್ಷಿಸಬಾರದು ಎಕೆಂದರೆ ಭವಿಷ್ಯದಲ್ಲಿ ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಅಂತೆಯೇ, ಹುಡುಗಿಯರು ಆಕರ್ಷಿತರಾಗುವುದು ಸಹಜ ಆದರೆ ಮದುವೆಯಾದ ಮಹಿಳೆಯು ಪರ ಪುರುಷನ ಕಡೆಗೆ ಆಕರ್ಷಿತಳಾಗುವುದು ಒಳ್ಳೆಯದಲ್ಲ ಎಕೆಂದರೆ ಇದು ಮಹಿಳೆಯ ಕುಟುಂಬದಲ್ಲಿ ಸಮಸ್ಯೆಗಳನ್ನು ಉದ್ಭವಿಸುತ್ತವೆ.

ದೊಡ್ಡ ಜಮೀನಿನಲ್ಲಿ ಕಡಿಮೆ ಬಿತ್ತನೆ ಮಾಡಬಾರದು. ಒಂದು ಸಣ್ಣ ಬೀಜ ಕೂಡ ಇಡೀ ಹೊಲವನ್ನು ನಾಶಪಡಿಸುತ್ತದೆ. ಖಾಲಿ ಭೂಮಿಯನ್ನು ಹಾಳುಗೆಡಬಾರದು ಎನ್ನುತ್ತಾರೆ ಚಾಣಕ್ಯ.

ಯುದ್ಧದ ಸಮಯದಲ್ಲಿ ಸೈನ್ಯಕ್ಕೆ ಆಜ್ಞಾಪಿಸುವ ಜನರಲ್ನ ಮರಣವು ಇಡೀ ಸೈನ್ಯದ ಬಲವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಬಲವು ದುರ್ಬಲಗೊಳ್ಳುತ್ತದೆ. ಇದು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ.

PREV
Read more Articles on
click me!

Recommended Stories

ಶುಕ್ರನು ಮೀನ ರಾಶಿಯಲ್ಲಿ ಸಾಗಲಿದ್ದು, ಅಪರೂಪದ ಕಾಕತಾಳೀಯತೆಯನ್ನು ಸೃಷ್ಟಿಸುತ್ತದೆ, ಈ 3 ರಾಶಿಯವರು ಶ್ರೀಮಂತವಾಗಿರುತ್ತವೆ
ಪ್ರಬಲ ರಾಜಯೋಗ 3 ರಾಶಿಗೆ ಅದೃಷ್ಟ ತರುತ್ತದೆ, ಡಿಸೆಂಬರ್ 19 ರಿಂದ ದಿನಗಳು ಬದಲಾಗುತ್ತೆ, ಹೊಸ ಉದ್ಯೋಗಾವಕಾಶ, ಹಣದ ಹೊಳೆ