ಕೊಡಗು ನಿರಾಶ್ರಿತರ ನೆರವಿಗೆ ನಿಂತ ’ಧುರ್ಯೋಧನ’

Nov 18, 2018, 10:56 AM IST

ಸಾಮಾಜಿಕ ಕಾರ್ಯ ಮಾಡುವುದರಲ್ಲಿ ದರ್ಶನ್ ಯಾವಾಗಲೂ ಮುಂದು. ಕುರುಕ್ಷೇತ್ರ ಚಿತ್ರದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಹೊಸ ಅಧ್ಯಾಯ ಬರೆಯಲು ಹೊರಟಿದ್ದಾರೆ. ಹೊಸ ವರ್ಷಕ್ಕೆ ತೆರೆಗೆ ಬರಲು ಕುರುಕ್ಷೇತ್ರ ಸಿದ್ದವಾಗಿದೆ. ಒಂದು ದಿನ ಮುಂಚಿತವಾಗಿ ಬೆನಿಫಿಟ್ ಶೋ ಮಾಡಲಿದ್ದು ಇದರಿಂದ ಬರುವ ಹಣವನ್ನು ಕೊಡಗಿನ ನಿರಾಶ್ರಿತರಿಗೆ ಕೊಡಲು ಕುರುಕ್ಷೇತ್ರ ತಂಡ ನಿರ್ಧರಿಸಿದೆ.